(ನ್ಯೂಸ್ ಕಡಬ) newskadaba.com, ಮಾ.27 ಬೆಳ್ಳಾರೆ: ಗುಣಮಟ್ಟದ ಶಿಕ್ಷಣ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಸುಳ್ಯದ ‘ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆ’ ವತಿಯಿಂದ 2026-27ನೇ ಸಾಲಿನ ನವೋದಯ ಮತ್ತು ಮೊರಾರ್ಜಿ ವಸತಿ ಶಾಲೆಗಳ ಪ್ರವೇಶ ಪರೀಕ್ಷೆಗಾಗಿ ಒಂದು ತಿಂಗಳ ವಿಶೇಷ ಪೂರ್ವ ಸಿದ್ಧತಾ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ.
ಅರ್ಹತೆ: ಪ್ರಸ್ತುತ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಈ ಸುಸಂದರ್ಭ ಒದಗಿಬಂದಿದೆ.
ತರಬೇತಿ ವಿಷಯಗಳು: ಗಣಿತ, ಮಾನಸಿಕ ಸಾಮರ್ಥ್ಯ ಹಾಗೂ ಸಾಮಾನ್ಯ ಅಧ್ಯಯನ ವಿಷಯಗಳ ಕುರಿತು ಪರಿಣಿತರಿಂದ ತರಬೇತಿ ನೀಡಲಾಗುವುದು.
ಅವಧಿ: ಏಪ್ರಿಲ್ 15, 2026 ರಿಂದ ಮೇ 15, 2026ರ ವರೆಗೆ ಒಂದು ತಿಂಗಳ ಕಾಲ ಶಿಬಿರ ನಡೆಯಲಿದೆ.
ಸಂಸ್ಥೆಯ ಸಾಧನೆ:
ಇದುವರೆಗೆ ಸುಮಾರು 222 ವಿದ್ಯಾರ್ಥಿಗಳು ಜ್ಞಾನದೀಪ ಸಂಸ್ಥೆಯ ಮೂಲಕ ನವೋದಯ ಶಾಲೆಗಳಿಗೆ ಆಯ್ಕೆಯಾಗಿರುವುದು ಸಂಸ್ಥೆಯ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಗಿದೆ. ಕಳೆದ 2025-26ನೇ ಸಾಲಿನಲ್ಲಿ ತರಬೇತಿ ಪಡೆದಿದ್ದ 15 ವಿದ್ಯಾರ್ಥಿಗಳು ನವೋದಯ ವಿದ್ಯಾಲಯಕ್ಕೆ ಆಯ್ಕೆಯಾಗಿ ಸಾಧನೆ ಮಾಡಿದ್ದಾರೆ.
ನೋಂದಣಿ ಮಾಹಿತಿ:
ಸೀಮಿತ ಸೀಟುಗಳಿಗೆ ಮಾತ್ರ ಅವಕಾಶವಿದ್ದು, ಆಸಕ್ತ ಪೋಷಕರು ಏಪ್ರಿಲ್ 10ರ ಒಳಗಾಗಿ ತಮ್ಮ ಮಕ್ಕಳ ಹೆಸರನ್ನು ನೋಂದಾಯಿಸಿಕೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಜ್ಞಾನದೀಪ ಶಿಕ್ಷಣ ತರಬೇತಿ ಸಂಸ್ಥೆ, ಬೆಳ್ಳಾರೆ
ದೂರವಾಣಿ: 9845713297 / 8762540225
ವೆಬ್ಸೈಟ್: www.inanadeepaedu.com









