(ನ್ಯೂಸ್ ಕಡಬ) newskadaba.com, ಮಾ.17 ಕರ್ನಾಟಕ ಸ್ಟೇಟ್ ಟೈಲರ್ ಅಸೋಸಿಯೇಷನ್(KSTA) ಸವಣೂರು ವಲಯದ ಸಾಮಾನ್ಯ ಸಭೆಯು ಸವಣೂರಿನಲ್ಲಿ ಸಮಿತಿಯ ಅಧ್ಯಕ್ಷರಾದ ಮೋಹನ್ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಹೊಸ ಸದಸ್ಯರ ಸೇರ್ಪಡೆ, ರಿನೀವಲ್ ಹಾಗೂ ಕಾರ್ಮಿಕ ಆಯುಕ್ತರ ಮುಖಾಂತರ NPS ಪಿಂಚಣಿ ಯೋಜನೆ ಹಾಗೂ ಸ್ಮಾರ್ಟ್ ಕಾರ್ಡ್ ಮಾಡುವ ಮೂಲಕ ಸರಕಾರದ ಸೌಲಭ್ಯಗಳನ್ನು ಪಡೆಯುವ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಜಗನ್ನಾಥ ಅಮೈ ಬೇಬಿ ಕುಮಾರಮಂಗಲ, ಸರಸ್ವತಿ ಶುಭಲಕ್ಷ್ಮಿ ಪ್ರಮೀಳಾ ಇಡ್ಯಾಡಿ,ಜಯಂತಿ, ಮೋಹಿನಿ,ಗೌತಮಿ ಸುನಿತಾ,ನೇತ್ರಾವತಿ, ಬೇಬಿ ಇದ್ಯಾಡಿ ಉಪಸ್ಥಿತರಿದ್ದರು. ಯಶೋಧ ಮೆದು ಎಲ್ಲರನ್ನೂ ಸ್ವಾಗತಿಸಿ ಸಮಿತಿಯ ಕೋಶಾಧಿಕಾರಿ ಸತೀಶ್ ಬಲ್ಯಾಯ ಕಾರ್ಯಕ್ರಮ ನಿರೂಪಿಸಿ ಸಮಿತಿಯ ಕಾರ್ಯದರ್ಶಿ ಜಯಶ್ರೀ ಕುಚ್ಚೆಜಾಲು ವಂದಿಸಿದರು.








