ಸಚಿವ ರಮಾನಾಥ ರೈ ಇಂದು ಕಡಬಕ್ಕೆ

(ನ್ಯೂಸ್ ಕಡಬ) newskadaba.com ಕಡಬ, ಮೇ.08. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಮಂಗಳವಾರದಂದು ಕಡಬಕ್ಕೆ ಆಗಮಿಸಲಿದ್ದಾರೆ.

ಮಂಗಳವಾರ ಅಪರಾಹ್ನ 03 ಗಂಟೆಗೆ ಕಡಬ ಪಂಚಾಯತ್ ಕಟ್ಟಡದ ಮುಂಭಾಗದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಸುಳ್ಯ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಬಿ.ರಘ ಪರವಾಗಿ ಮತ ಯಾಚಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಗಂಗಾಧರ ಗೌಡ, ವಿಜಯ ಕುಮಾರ್, ಪಿ.ಪಿ.ವರ್ಗೀಸ್, ದಿವಾಕರ ಗೌಡ ಶೀರಾಡಿ, ವಿಜಯ ಕುಮಾರ್ ರೈ, ಎಚ್.ಕೆ‌.ಇಲ್ಯಾಸ್, ಎ.ಸಿ.ಜಯರಾಜ್ ಮೊದಲಾದವರು ಉಪಸ್ಥಿತರಿರಲಿರುವರು.

Also Read  ಪುಂಜಾಲಕಟ್ಟೆ: ಅಟೋರಿಕ್ಷಾ - ಬೈಕ್ ಢಿಕ್ಕಿ ► ಸವಾರರಿಗೆ ಗಾಯ

error: Content is protected !!
Scroll to Top