(ನ್ಯೂಸ್ ಕಡಬ) newskadaba.com, ನ.25 :ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲ್ಪಟ್ಟಿರುವ ಸಹಾಯಕ ಪ್ರಾಧ್ಯಾಪಕ ಅರ್ಹತಾ ಪರೀಕ್ಷೆ (ಕೆ.ಸೆಟ್-2025) ಯಲ್ಲಿ ಸುಳ್ಯದ ಕೇತನ ಕೆ.ಎಸ್., ಸುಹಾಸ್ ಮಲ್ಲಾರ, ಮೇಘಾ ಪಿ.ಎಂ. ಧನ್ಯಶ್ರೀ ಬಚ್ಚನಡ್ಕ, ಲಿಖಿತ ಮಂಡೂರು
ಕೇತನ ಕೆ.ಎಸ್.: ಕುಃ ಕೇತನ ಕೆ.ಎಸ್. ಇವರು ಗೃಹ ವಿಜ್ಞಾನ ವಿಷಯದಲ್ಲಿ ಉತ್ತೀರ್ಣರಾಗಿ ರಾಜ್ಯಕ್ಕೆ ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. ಇವರು ಎನ್ ಟಿಎ ನಡೆಸಿದ ಯುಜಿಸಿ ನೆಟ್ ಪರೀಕ್ಷೆಯಲ್ಲೂ ಉತ್ತೀರ್ಣ ರಾಗಿ ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹರಾಗಿದ್ದಾರೆ. ಇವರು ಅಮರ ಪಡೂರು ಗ್ರಾಮದ ಸುರೇಶ ಕೊರತಡ್ಕ ಹಾಗೂ ಕಮಲಾಕ್ಷಿ ದಂಪತಿಗಳ ಪುತ್ರಿ ಪ್ರಸ್ತುತ ಮಂಗಳೂರಿನ ಎಸ್. ಸಿ.ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಹಾರ ವಿಜ್ಞಾನ ವಿಭಾಗದಲ್ಲಿ
ಸುಹಾಸ್ ಮಲ್ಲಾರ : ಏನೆಕಲ್ಲು ಗ್ರಾಮದ ಗಂಗಾಧರ ಗೌಡ ಮಲ್ಲಾರ ಮತ್ತು ಶ್ರೀಮತಿ ವಿಶಾಲಾಕ್ಷಿ ಗಂಗಾಧರ ಇವರ ಪುತ್ರರಾಗಿರುವ ಇವರು ಪ್ರಸ್ತುತ ಮಂಗಳೂರಿನ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂ.ಕಾಂ
ಮೇಘಾ ಪಿ.ಎಂ. : ಪೂಜಾರಿಮನೆ ಮಾಧವ ಮಾಸ್ಟರ್ ಹಾಗೂ ಗೂನಡ್ಕ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿಯಾಗಿ ರುವ ಶೀಲಾವತಿ ಕೆ.ಎನ್. ಅವರ ಪುತ್ರಿ ಮೇಧಾ ಪಿ.ಎಂ. ರೋಟರಿ ಶಾಲೆ ಸುಳ್ಯ, ಅಂಜಿತಾ ಪದವಿ ಪೂರ್ವ ಕಾಲೇಜು ಪುತ್ತೂರು, ಎನ್.ಎಂ.ಸಿ. ಸುಳ್ಯದ ಹಳೆ ವಿದ್ಯಾರ್ಥಿನಿ, ಮಂಗಳೂರು ವಿಶ್ವ ವಿದ್ಯಾಲಯ ಮಂಗಳೂರು ಗಂಗೋತ್ರಿ ಯಲ್ಲಿ 2025ನೇ ಸಾಲಿನಲ್ಲಿ ರಸಾಯನ ಶಾಸ್ತ್ರದಲ್ಲಿ ಎಂ.ಎಸ್ಸಿ ಪದವಿಯನ್ನು ಪಡೆದಿ ದ್ದಾರೆ.
ಧನ್ಯಶ್ರೀ : ಧನ್ಯಶ್ರೀ ಬಚ್ಚನಡ್ಕ ಅವರು ವಾಣಿಜ್ಯ ವಿಷಯದಲ್ಲಿ ಉತ್ತೀರ್ಣರಾಗಿ ರಾಜ್ಯ ಮಟ್ಟದಲ್ಲಿ 548ನೇ ರಾಂಕ್ ಪಡೆದು ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಹರಾಗಿದ್ದಾರೆ. ಇವರು ಯೇನಕಲ್ಲು ಗ್ರಾಮದ ದಿನಕರ ಗೌಡ ಮತ್ತು ವಾರಿಜಾ ಬಚ್ಚನಡ್ಕ ದಂಪತಿಗಳ ಪುತ್ರಿ. ಧನ್ಯಶ್ರೀ ಅವರು ಮಂಗಳೂರು ವಿಶ್ವವಿದ್ಯಾಲಯದಿಂದ ಮಾಸ್ಟರ್ ಆಫ್ ಕಾಮರ್ಸ್ (ಎಂ.ಕಾಂ.) ಪದವಿ ಪೂರ್ಣಗೊಳಿಸಿದ್ದಾರೆ.
ಲಿಖಿತಾ ಮುಡೂರು: ಇವರು ಅಚ್ಚಾವರ ಗ್ರಾಮದ ಮುಡೂರು ಬೆಳ್ಳಪ್ಪ ಗೌಡ ಮತ್ತು ನಾಗವೇಣಿ ದಂಪತಿಗಳ ಪುತ್ರಿ. ಪ್ರಸ್ತುತ ಎಂ.ಎ. 4ನೇ ಸೆಮಿಸ್ಟರ್ ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಶ್ರೀಮತಿ: ದಿವ್ಯ ಕುಮಾರಿ ಇವರು ಸುಬ್ರಹ್ಮಣ್ಯ ಕುಮಾರಸ್ವಾಮಿ ಪದವಿ ಪೂರ್ವ ಕಾಲೇಣು ಸುಬ್ರಮಣ್ಯ ಇಲ್ಲಿ ರಸಾಯನಶಾಸ್ತ್ರ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಶ್ರೀಮತಿ ದಿವ್ಯ ಕುಮಾರಿ ಇವರು ಕುಮಾರ ಡಾ. ಸಂಕೀರ್ಶ್ ಹೆಬ್ಬಾರ್ ಇವರ ಧರ್ಮಪತ್ನಿ.








