ಸರಕಾರಿ ಶಾಲೆಗಳ ಉಳಿಸಿ ಬೆಳೆಸುವ ಧ್ಯೇಯದೊಂದಿಗೆ ಮ್ಯಾರಥಾನ್ ಓಟ ಎಸ್‌ಡಿಎಂಸಿ ಮತ್ತು ಹಿರಿಯ ವಿದ್ಯಾರ್ಥಿ ಸಂಘ ಕೆಮ್ಮಾರ ಆಯೋಜಿಸಿದ ಅರ್ಥಪೂರ್ಣ ಕಾರ್ಯಕ್ರಮ



(ನ್ಯೂಸ್‌ ಕಡಬ) newskadaba.com,  ನ.25  ಉಪ್ಪಿನಂಗಡಿ : ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆ ಕೆಮ್ಮಾರ ಇದರ ಹಿರಿಯ ವಿದ್ಯಾರ್ಥಿ ಸಂಘ ಮತ್ತು ಶಾಲಾಭಿವೃದ್ದಿ ಮತ್ತು ಮೇಲುಸ್ತುವಾರಿ ಸಮಿತಿಯ ಸಹಯೋಗದೊಂದಿಗೆ ಸರಕಾರಿ ಶಾಲೆ ಉಳಿಸಿ ಬೆಳೆಸಿರಿ ಎಂಬ ಧ್ಯೇಯದೊಂದಿಗೆ ಮ್ಯಾರಥಾನ್ ಓಟವನ್ನು ಆಯೋಜಿಸಲಾಯಿತು.





ಬೆಳಿಗೆ 7 ಗಂಟೆಗೆ ಸರಿಯಾಗಿ ಪೆರಿಯಡ್ಕ ಜಂಕ್ಷನಿನಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀಯುತ ಕನಕರಾಜ್ ರವರು ಉದ್ಘಾಟಿಸಿ, ಮ್ಯಾರಥಾನ್ ಓಟದ ಸದುದ್ದೇಶಗಳ ಬಗ್ಗೆ ಅರಿವು ಮೂಡಿಸಿದರು. ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷರಾದ ಅಝೀಝ್ ಬಿ.ಕೆ ಬಾವುಟ ಹಾರಿಸುವ ಮೂಲಕ ಚಾಲನೆ ನೀಡಿದರು.






ಪೆರಿಯಡ್ಕದಿಂದ ಆರಂಭಗೊಂಡ ಮ್ಯಾರಥಾನ್ ಓಟವು ಕೆಮ್ಮಾರ ಸರಕಾರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೊನೆಗೊಂಡಿತು.ಮ್ಯಾರಥಾನ್ ಓಟದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಜುನೈದ್ ಕೆಮ್ಮಾರ,  ವಕೀಲರಾದ ಕಬೀರ್ ಕೆಮ್ಮಾರ, ಪದ್ಮನಾಭ ಶೆಟ್ಟಿ ಬಡಿಲ, ಶರೀಫ್ ಮಜಲು,  ಮುಸ್ತಫಾ ಬೆಂಗಳೂರು, ನವಾಝ್ ಕೆಮ್ಮಾರ, ಜಲೀಲ್ ಕೆಮ್ಮಾರ, ಸತೀಶ ಕೆಮ್ಮಾರ ಸೇರಿದಂತೆ

ಹಿರಿಯ ವಿದ್ಯಾರ್ಥಿಗಳು, ಊರ ನಾಗರಿಕರು, ಶಾಲಾ ಮಕ್ಕಳು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಇಸ್ಮಾಯಿಲ್ ಹಾಜಿ ಕೆಮ್ಮಾರ ಮತ್ತು ಖಾಸಿಂ ಹಾಜಿ ಕೆಮ್ಮಾರ ಸರ್ವರಿಗೂ ತಂಪು ಪಾನೀಯ ನೀಡಿ ಸಹಕರಿಸಿದರು.

error: Content is protected !!
Scroll to Top