ಮಾಲಿಯಲ್ಲಿ ಬಂದೂಕುಧಾರಿಗಳಿಂದ ಐವರು ಭಾರತೀಯರ ಅಪಹರಣ



(ನ್ಯೂಸ್‌ ಕಡಬ) newskadaba.com,  ನ.08: ಕೆರಿಬಿಯನ್ ಪ್ರದೇಶದಲ್ಲಿ ಅಪ್ಪಳಿಸಿದ ಮೆಲಿಸ್ಸಾ ಚಂಡಮಾರುತ ಭಾರೀ ವಿನಾಶವನ್ನು ಉಂಟುಮಾಡಿದ್ದು, ನೂರಾರು ಜನರ ಜೀವ ಬಲಿಯಾಗಿವೆ ಮತ್ತು ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಕಳೆದ 150 ವರ್ಷಗಳಲ್ಲಿ ಈ ಭಾಗದಲ್ಲಿ ಕಂಡುಬಂದ ಅತ್ಯಂತ ತೀವ್ರ ಹಾಗೂ ಅಪಾಯಕಾರಿ ಚಂಡಮಾರುತವೆಂದೇ ಮೆಲಿಸ್ಸಾ ಗುರುತಿಸಲ್ಪಟ್ಟಿದೆ. ಈ ದುರಂತದ ಮಧ್ಯೆ ಭಾರತವು ಮಾನವೀಯ ಹಸ್ತಚಾಲನೆ ಮಾಡಿದ್ದು, ಸಹಾಯಕ್ಕಾಗಿ ಅಗತ್ಯವಾದ ಔಷಧಿಗಳು, ಜನರೇಟರ್‌ಗಳು, ಟೆಂಟ್‌ಗಳು, ಹಾಸಿಗೆಗಳು ಹಾಗೂ ಇತರ ಜೀವನಾವಶ್ಯಕ ಸಾಮಗ್ರಿಗಳನ್ನು ಕಳುಹಿಸಿದೆ.





ಜಮೈಕಾ, ಕ್ಯೂಬಾ ಮತ್ತು ಹೈಟಿ ದೇಶಗಳಲ್ಲಿ ಭಾರೀ ಮಳೆ ಹಾಗೂ ಪ್ರವಾಹದಿಂದ ಅನೇಕ ಕಟ್ಟಡಗಳು ಕುಸಿದಿವೆ. ಪಶ್ಚಿಮ ಜಮೈಕಾದಲ್ಲಿ ಐದು ಮಿಲಿಯನ್ ಮೆಟ್ರಿಕ್ ಟನ್ ಅವಶೇಷಗಳು ಸಂಗ್ರಹವಾಗಿದ್ದು, ಇದು ಅರ್ಧ ಮಿಲಿಯನ್ ದೊಡ್ಡ ಟ್ರಕ್‌ಗಳ ತೂಕಕ್ಕೆ ಸಮನಾಗಿದೆ. ಜಮೈಕಾದ ಒಟ್ಟು ಆರ್ಥಿಕ ಉತ್ಪಾದನೆಯ ಸುಮಾರು 30 ಪ್ರತಿಶತ ಭಾಗ ನಾಶವಾಗಿದೆ ಎಂದು ಅಂದಾಜಿಸಲಾಗಿದೆ.






ಹೈಟಿ ಮತ್ತು ಜಮೈಕಾದಲ್ಲಿ ಇದುವರೆಗೆ 75 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಲಕ್ಷಾಂತರ ಜನರು ಇನ್ನೂ ಸಹಾಯಕ್ಕಾಗಿ ಕಾಯುತ್ತಿದ್ದಾರೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತದ ತ್ವರಿತ ನೆರವು ಎರಡೂ ದೇಶಗಳ ಜನರ ಹೃದಯ ಗೆದ್ದಿದೆ.

ಜಮೈಕಾದ ವಿದೇಶಾಂಗ ಸಚಿವೆ ಕಾಮಿನಾ ಜಾನ್ಸನ್-ಸ್ಮಿತ್ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, “ಮೆಲಿಸ್ಸಾ ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದವರಿಗೆ ಪರಿಹಾರ ಒದಗಿಸಲು ಮಾಡಿದ ಸ್ಮರಣೀಯ ಪ್ರಯತ್ನಕ್ಕಾಗಿ ನನ್ನ ಸ್ನೇಹಿತ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದು ಹೇಳಿದ್ದಾರೆ.

error: Content is protected !!
Scroll to Top