ಪರ್ಕಳ ಜಂಕ್ಷನ್ ಅಭಿವೃದ್ಧಿ ಕಾಮಗಾರಿ ಸೆ.15ರಿಂದ ಆರಂಭ; ಇಂದ್ರಾಳಿ ಸೇತುವೆ ಸೆ. 22ಕ್ಕೆ ಉದ್ಘಾಟನೆ



(ನ್ಯೂಸ್ಕಡಬ) newskadaba.com,  ಸೆ.13 ಉಡುಪಿ : ಸೆಪ್ಟೆಂಬರ್ 15ರ ಸೋಮವಾರದಂದು  ಪರ್ಕಳ ಜಂಕ್ಷನ್ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು





ಪರ್ಕಳ ಜಂಕ್ಷನ್ ಮತ್ತು ಇಂದ್ರಾಳಿ ರೈಲ್ವೆ ಸೇತುವೆ ಕಾಮಗಾರಿಗಳನ್ನು ಕೋಟ ಅವರು ಪರಿಶೀಲಿಸಿದರು. ಬಳಿಕ ಇಳಿಜಾರುಗಳನ್ನು ವಿಸ್ತರಿಸಲು ಮತ್ತು ಕಾಮಗಾರಿ ಅವಧಿಯಲ್ಲಿ ಸುಗಮ ವಾಹನ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆ ಮಾಡಲು ಎಂಜಿನಿಯರ್‌ಗಳಿಗೆ ನಿರ್ದೇಶಿಸಿದರು. ನಿರಂತರ ಸಂಚಾರವಿರುವ ಜಂಕ್ಷನ್ ಪ್ರದೇಶದಲ್ಲಿ ಅಪಘಾತಗಳನ್ನು ತಡೆಗಟ್ಟಲು ಸಂಚಾರ ನಿಯಂತ್ರಣ ಕಡ್ಡಾಯ ಎಂದು ಹೇಳಿದರು.






ಪರ್ಕಳ ಜಂಕ್ಷನ್ ಕಾಮಗಾರಿಯನ್ನು ಒಂದು ವಾರದೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಆ ಬಳಿಕ ರಸ್ತೆ ಸಂಪೂರ್ಣವಾಗಿ ಕಾರ್ಯನಿರ್ವಹಿಸಲಿದೆ ಎಂದು ಭರವಸೆ ನೀಡಿದರು.

ಇದೇ ಸಮಯದಲ್ಲಿ , ಇಂದ್ರಾಳಿ ರೈಲ್ವೆ ಸೇತುವೆ ನಿರ್ಮಾಣ ಕಾಮಗಾರಿ ಭರದಿಂದ ಸಾಗುತ್ತಿದೆ. ಇಂದ್ರಾಳಿ ಸೇತುವೆಯನ್ನು ಸೆಪ್ಟೆಂಬರ್ 22ರಂದು ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಇದರಿಂದ ಪ್ರಯಾಣಿಕರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದರು.

error: Content is protected !!
Scroll to Top