ಆಸಿಫಾಳ ಹತ್ಯೆ ಖಂಡಿಸಿ ಕನ್ಯಾನದಲ್ಲಿ ಕೆಎಸ್ಸಾರ್ಟಿಸಿ ಬಸ್ ಗೆ ಕಲ್ಲುತೂರಾಟ ► ಬಲಾತ್ಕಾರದ ಬಂದನ್ನು ತಡೆಯಲು ತೆರಳಿದ ವಿಟ್ಲ ಪೊಲೀಸರಿಗೆ ಯುವಕರ ಗುಂಪಿನಿಂದ ದಿಗ್ಬಂಧನ

(ನ್ಯೂಸ್ ಕಡಬ) newskadaba.com ವಿಟ್ಲ, ಎ.16. ಆಸಿಫಾ ಪ್ರಕರಣದಲ್ಲಿ ನ್ಯಾಯಕ್ಕಾಗ್ರಹಿಸಿ ಅಂಗಡಿ‌ ಮುಂಗಟ್ಟುಗಳನ್ನು ಬಂದ್ ಮಾಡಿಸುತ್ತಿದ್ದಾರೆ ಎಂಬ ಆರೋಪದ ಮೇರೆಗೆ ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರಿಗೆ ಸ್ಥಳೀಯ ಯುವಕರು ದಿಗ್ಬಂಧನ ವಿಧಿಸಿದ ಘಟನೆ ಸೋಮವಾರದಂದು ಕರ್ನಾಟಕ – ಕೇರಳ ಗಡಿಯ ಆನೇಕಲ್ ಎಂಬಲ್ಲಿ ನಡೆದಿದೆ.

ಇತ್ತೀಚೆಗೆ ಜಮ್ಮು ಕಾಶ್ಮೀರದ ಕಥುವಾ ಎಂಬಲ್ಲಿ ಮತಾಂಧ ಶಕ್ತಿಗಳ ಕೈಯಲ್ಲಿ‌ ನಲುಗಿ ಅತ್ಯಾಚಾರಕ್ಕೊಳಗಾಗಿ ಬರ್ಬರವಾಗಿ ಹತ್ಯೆಗೀಡಾದ ಎಂಟರ ಹರೆಯದ ಬಾಲೆ ಆಸಿಫಾ ಪ್ರಕರಣಕ್ಕೆ‌ ನ್ಯಾಯಕ್ಕಾಗ್ರಹಿಸಿ ಸೋಮವಾರದಂದು ಕೇರಳದಾದ್ಯಂತ ಸ್ವಯಂ ಪ್ರೇರಿತ ಬಂದ್ ನಡೆದಿದ್ದು, ಈ ಸಂದರ್ಭದಲ್ಲಿ ಯುವಕರ ಗುಂಪೊಂದು ಬಲಾತ್ಕಾರವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದಾರೆ ಎಂಬ ಆರೋಪಿಸಿ ವಿಟ್ಲ ಠಾಣೆಗೆ ದೂರು ಬಂದಿತ್ತೆನ್ನಲಾಗಿದೆ. ಅದರಂತೆ ಸ್ಥಳಕ್ಕೆ ತೆರಳಿದ ವಿಟ್ಲ ಪೊಲೀಸರಿಗೆ ಗುಂಪೊಂದು ದಿಗ್ಬಂಧನ ವಿಧಿಸಿದ್ದಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸುವ ದೃಶ್ಯಗಳನ್ನು ಯಾರೋ ಸೆರೆಹಿಡಿದಿದ್ದು, ಅದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ನಡುವೆ ವಿಟ್ಲದ ಕನ್ಯಾನ ಸಮೀಪದ ಬೈರಿಕಟ್ಟೆ ಎಂಬಲ್ಲಿ ಕೆಎಸ್ಸಾರ್ಟಿಸಿ ಬಸ್ಸೊಂದಕ್ಕೆ ಕಿಡಿಗೇಡಿಗಳು ಕಲ್ಲೆಸೆದಿದ್ದು, ಬಸ್ಸಿನ ಮುಂಭಾಗದ ಗಾಜು ಹುಡಿಯಾಗಿದೆ. ಸ್ಥಳದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

error: Content is protected !!

Join the Group

Join WhatsApp Group