ನನ್ನ ಜೀವಕ್ಕೆ ಹಾನಿಯಾದ್ರೆ ರಾಜ್ಯ ಸರ್ಕಾರ, ಬಿಜೆಪಿ ನಾಯಕರು ಹೊಣೆ: ತಿಮರೋಡಿ

(ನ್ಯೂಸ್ಕಡಬ) newskadaba.com, ಆ.21: ನನ್ನ ಜೀವಕ್ಕೆ ಹಾನಿಯಾದರೆ ರಾಜ್ಯ ಸರ್ಕಾರ ಮತ್ತು ಇಡೀ ಬಿಜೆಪಿ ನಾಯಕರು ಹೊಣೆ ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ್ತಿಮರೋಡಿ ಹೇಳಿದರು.

ಬಿ.ಎಲ್.ಸಂತೋಷ್ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಪ್ರಕರಣದಲ್ಲಿ ಪೊಲೀಸರು ವಶಕ್ಕೆ ಪಡೆದ ನಂತರ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಸೌಜನ್ಯಳಿಗೆ ನ್ಯಾಯ ಸಿಗಬೇಕು ಎನ್ನುವುದೇ ನಮ್ಮ ಉದ್ದೇಶ. ಹೋರಾಟ ಮುಂದುವರಿಯಬೇಕು. ಅತ್ಯಾಚಾರಿಗಳ ಬಂಧನ ಆಗಬೇಕು. ಎಸ್ಐಟಿ ತನಿಖೆ ಮುಂದುವರಿಯಬೇಕು. ಬಿಜೆಪಿಗರ ಪಾಪದ ಕೂಸು ಸರ್ವನಾಶವಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಈಗ ಪೊಲೀಸ್ಠಾಣೆಗೆ ಹೋಗುತ್ತೇನೆ. ಪೊಲೀಸರಿಗೆ ಸೂಕ್ತವಾದ ಮಾಹಿತಿ ನೀಡುತ್ತೇನೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Scroll to Top