ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.9.  ರಾಜ್ಯ ಪ್ರಶಸ್ತಿ ಪುರಸ್ಕೃತ, ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ, ತಾ.ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ಪ್ರದಾನ ಎ. 9 ರಂದು ಯುವ ಸಭಾಭವನದ ವಠಾರದಲ್ಲಿ ನಡೆಯಲಿದೆ.
ತಾಲೂಕು ಮಟ್ಟದ ಶ್ರವಣಕೀರ್ತಿ ಪ್ರಶಸ್ತಿಯನ್ನು ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಮತ್ತು ಶ್ರವಣ ದೀಪ ಪ್ರಶಸ್ತಿಯನ್ನು ಕಮಲೇಶ್, ಷಣ್ಮುಖ ಯುವಕ ಮಂಡಲ ಸರ್ವೆ ಇವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅನೇಕ ಸಾಧಕರನ್ನು ಅಭಿನಂದಿಸಲಾಗುವುದು. ಕ್ರೀಡೆಯಲ್ಲಿ ವಸಂತಿ ಶಿವರಾಮ ಗೌಡರಿಗೆ, ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ ಮತ್ತು ವಿವೇಕ್ ಆಳ್ವ ನಡುಮನೆ, ಸೇವಾ ಕ್ಷೇತ್ರಕ್ಕೆ ಸಂಬಂಧಿಸಿ ವೇದಾವತಿ ಬಾಲಕೃಷ್ಣ ಗೌಡ ಅಂಜಯರವರನ್ನು ಅಭಿನಂದಿಸಲಾಗುವುದು. ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್ ರೈ ಸೂಡಿಮುಳ್ಳು, ಜಿಲ್ಲಾ  ಪ್ರಶಸ್ತಿ ಪುರಸ್ಕೃತ ಸಚಿನ್ ಎಸ್, ಏಕಪಾತ್ರಾಭಿನಯ ರಾಜ್ಯಮಟ್ಟದ ವಿಜೇತ ರಾಕೇಶ್ ರೈ ಕೆಡೆಂಜಿ, ಯಕ್ಷಗಾನದಲ್ಲಿ ರಾಜ್ಯಮಟ್ಟದಲ್ಲಿ ಪುರಸ್ಕೃತಗೊಂಡ ತಾರಾನಾಥ ಸವಣೂರು, ಪ್ರವೀಣ್ ಬಲ್ಯಾಯ, ಪ್ರಸಾದ್ ಅರೇಲ್ತಡಿಯವರನ್ನು ಗುರುತಿಸಲಾಗುವುದು .
ಸಭಾ ಕಾರ್ಯಕ್ರಮದ ನಂತರ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತುಳು ನಾಟಕ ಪ್ರದರ್ಶನಗೊಳ್ಳಲಿದೆ.
error: Content is protected !!
Scroll to Top