ಕಡಬ: ಧರ್ಮಸ್ಥಳ ಯೋಜನೆಯಿಂದ ವೀಲ್ ಚಯರ್ ವಿತರಣೆ

(ನ್ಯೂಸ್ ಕಡಬ) newskadaba.com ಜೂ. 16. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಬಿಳಿನೆಲೆ ವಲಯದ ಕೊಂಬಾರು ಕಾರ್ಯಕ್ಷೇತ್ರದ ಶಾಂತಪ್ಪ ಗೌಡ ರವರು ಪಾರ್ಶುವಾಯು ಕಾಯಿಲೆಯಿಂದ ನಡೆದಾಡಲು ಅಸಾಧ್ಶವಾಗಿದ್ದು ಅವರ ಕುಟುಂಬದ ಸದಸ್ಶರ ಬೇಡಿಕೆಯಂತೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಪೂಜ್ಶ ವೀರೇಂದ್ರ ಹೆಗ್ಗಡೆಯವರು ಜನಮಂಗಳ ಕಾರ್ಯಕ್ರಮದಡಿಯಲ್ಲಿ ನೀಡಿರುವ ವೀಲ್ ಚಯರ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃಧ್ಧಿ ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಪ್ರಕಾಶ್ ಕುಮಾರ್ ರವರು ಫಲಾನುಭವಿ ಶಾಂತಪ್ಪ ಗೌಡ ರವರಿಗೆ ಹಸ್ತಾಂತರಿಸಿ ಸಾಂತ್ವಾನ ತಿಳಿಸಿ ಶೀಘ್ರ ಗುಣಮುಖರಾಗುವಂತೆ ಹಾರೈಸಿದರು.

Also Read  ಕಡಬದಲ್ಲಿ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ಸ್ಥಳದ ಗಡಿಗುರುತು ► ತಿಂಗಳೊಳಗೆ ಕಟ್ಟಡ ಕಾಮಗಾರಿಗೆ ಶಂಕುಸ್ಥಾಪನೆ: ಪಿ.ಪಿ.ವರ್ಗೀಸ್

ಈ ಸಂಧರ್ಭದಲ್ಲಿ ಕೊಂಬಾರು ಒಕ್ಕೂಟದ ಅಧ್ಶಕ್ಷರು ಧರ್ಮಪಾಲ ಗೌಡ ಕೊಂಬಾರು ಗ್ರಾಮಪಂಚಾಯತ್ ಮಾಜಿ ಉಪಾಧ್ಶಕ್ಷರಾದ ಸದಾನಂದ ಕಾಯರ್ತಡ್ಕ, ಸೇವಾಪ್ರತಿನಿಧಿ ಗಣೇಶ್ ಅಸಂತಡ್ಕ ಹಾಗೂ ಶಾಂತಪ್ಪ ಗೌಡ ರವರ ಕುಟುಂಬದ ಸದಸ್ಶರು ಉಪಸ್ಥಿತರಿದ್ದರು.
ಬಿಳಿನೆಲೆ ವಲಯ ಮೇಲ್ವೀಚಾರಕ ರವಿಪ್ರಸಾದ್ ಆಲಾಜೆ ಕಾರ್ಯಕ್ರಮ ಸಂಘಟಿಸಿದರು.

error: Content is protected !!
Scroll to Top