ಯಾತ್ರೆಯ ಸಂದರ್ಭ ವಿಮಾನದಲ್ಲಿ ಕುಳಿತ ಕಂದಮ್ಮಗಳು ‘ತನ್ನ ಅಜ್ಜಿಗಾಗಿ ಒಂದು ಸೆಲ್ಫೀ ತೆಗಿಯಮ್ಮ’ ಎಂದು ಹೇಳಿರಬಹುದು..
ಹೌದು, ಆ ಕುಟುಂಬ ಕಣ್ಣೀರಿನ ಶೋಕ ಸಾಗರದಲ್ಲಿ ಮುಳುಗಿದೆ….ನಗುತ್ತಿರುವ ಸೆಲ್ಫಿಯ ಭರವಸೆಯಿಂದ ತುಂಬಿದ ಕುಟುಂಬ “ಆಕಾಶಕ್ಕೆ ಕಳೆದುಹೋಯಿತು”. ನಿನ್ನೆ ನಡೆದ ಕರಾಳ ದುರಂತದಲ್ಲಿ ಮಡಿದವರ ಒಂದೊಂದೇ ಭಾವನಾತ್ಮಕ ಚಿತ್ರಗಳು, ಸಾರಿ ಹೇಳುವ ಮಾನವೀಯ ಸಂಬಂಧಗಳು… ಇನ್ನೂ ಸಾಫ್ಟ್ವೇರ್ ವೃತ್ತಿಪರರಾಗಿದ್ದ ರಾಜಸ್ಥಾನದ ಬನ್ಸ್ವಾರಾ ಮೂಲದ ಪ್ರತೀಕ್ ಜೋಶಿ ಎಂವವರು ತನ್ನ ಪತ್ನಿ ಮತ್ತು ಮೂವರು ಮುದ್ದಾದ ಮಕ್ಕಳೊಂದಿಗೆ ಲಂಡನ್ ನಲ್ಲಿ ಜೀವನ ಕಟ್ಟುವ ಕನಸು ಕಂಡು ತನ್ನ ಮೂಲ ಕುಟುಂಬಕ್ಕೆ ಯಾತ್ರೆಯ ವಿದಾಯ ಹೇಳಿ ಭವಿಷ್ಯವು ಕೈಗೆಟುಕುವ ದೂರದಲ್ಲಿದೆ ಎಂದು ಪ್ರಯಾಣ ಆರಂಭಿಸಿದ್ದರು. ಅವಳಿ ಹೆಣ್ಣು ಮಕ್ಕಳು ಸೇರಿ ಉತ್ಸಾಹದಿಂದ ತುಂಬಿದ ಐವರ ಕುಟುಂಬವು ಲಂಡನ್ಗೆ ಪ್ರಯಾಣಿಸಲು ಏರ್ ಇಂಡಿಯಾ ವಿಮಾನ 171 ಅನ್ನು ಹತ್ತಿತ್ತು. ಸೀಟುಗಳಲ್ಲಿ ಕುಳಿತ ಬಳಿಕ ಸೆಲ್ಫೀ ಕ್ಲಿಕ್ಕಿಸಿ ಸಂಬಂಧಿಕರಿಗೆ ಕಳುಹಿಸಿದರು. ಆದರೆ ವಿಧಿಯಾಟವೇ ಬೇರೆಯಾಗಿತ್ತು. ಹೊಸ ಜೀವನಕ್ಕೆ ಏಕಮುಖ ಪ್ರಯಾಣ ಎಂದಿಗೂ ಸಾಧ್ಯವಾಗಲಿಲ್ಲ. ವಿಮಾನ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ, ಕಂಡ ಕನಸುಗಳೆಲ್ಲ ಸುಟ್ಟು ಬೂದಿಯಾಯಿತು. ಮುದ್ದಾದ ಕುಟುಂಬದಲ್ಲಿ ಯಾರೂ ಬದುಕುಳಿಯಲಿಲ್ಲ. ಕುಟುಂಬವು ಸೀಟುಗಳಲ್ಲಿ ಕುಳಿತ ಬಳಿಕ ತೆಗೆದ ಸೆಲ್ಫೀ ಚಿತ್ರಗಳು ಬಾರೀ ವೈರಲ್ ಅಗಿದೆ.! ನಗುತ್ತಿರುವ ಕುಟುಂಬ ಇನ್ನೆಂದೂ ಬಾರದ ಲೋಕಕ್ಕೆ ಪಯಣವನ್ನು ಬೆಳೆಸಿದೆ..ಉಳಿದದ್ದು ಖಾಲಿ ನೆನಪುಗಳು ಮಾತ್ರ….
ಇಷ್ಟೇ ಮನುಷ್ಯ ಜೀವನ.. ಇರುವಷ್ಟು ದಿನ ನಗುತ್ತಾ ದ್ವೇಷವಿಲ್ಲದೇ ಮಾನವೀಯತೆಯಿಂದ ಜೀವನ ಕಳೆಯೋಣ.. ಮಾನವೀಯ ಸಂಬಂಧಗಳಿಂದ ಕೂಡಿದ ಸೌಹಾರ್ದತೆಯಿಂದ ಜೀವನ ನಡೆಸೋಣ.