ಆರೆಲ್ತಡಿ: ಬಿಜೆಪಿ ಬೂತ್ ಸಮಿತಿ ಸಭೆ

(ನ್ಯೂಸ್ ಕಡಬ) newskadaba.com ಸವಣೂರು,ಎ.3. ಆಯಾ ಬೂತ್‌ನಲ್ಲಿ ಬಿಜೆಪಿಯನ್ನು ಗೆಲ್ಲಿಸಿ, ಕಾರ್ಯಕರ್ತರು ತಮ್ಮ ಬೂತ್‌ನಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ನೀಡುವ ಮೂಲಕ ಬೂತ್‌ಮಟ್ಟದಲ್ಲಿ ಗೆಲುವು ಸಾಧಿಸುವ ಮೂಲಕ ಅಭ್ಯರ್ಥಿಯನ್ನು ಗೆಲ್ಲಿಸಬೇಕು, ಬೂತ್ ಗೆದ್ದರೆ ಕ್ಷೇತ್ರ ಗೆದ್ದಂತೆ ಎಂದು ದ.ಕ.ಜಿಲ್ಲಾ ಬಿಜೆಪಿ ಸದಸ್ಯ ರಾಕೇಶ್ ರೈ ಕೆಡೆಂಜಿ ಹೇಳಿದರು.

ಅವರು ಆರೆಲ್ತಡಿ ಪರಮೇಶ್ವರ ಮಡಿವಾಳ ಅವರ ಮನೆಯಲ್ಲಿ ನಡೆದ ಸವಣೂರು ಶಕ್ತಿ ಕೇಂದ್ರದ ಆರೆಲ್ತಡಿ ಬೂತ್ 65ರ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಇಡೀ ರಾಜ್ಯದಲ್ಲಿ ಬಿಜೆಪಿ ಪರ ಅಲೆಯಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯುಳ್ಳ ಅಭಿವೃದ್ದಿ ಪರ ಚಿಂತನೆ, ಯೋಜನೆಗಳು ದೇಶದ ಮುಂದಿನ ಭವಿಷ್ಯಕ್ಕೆ ಪೂರಕವಾಗಿರುವುದರಿಂದ ಪಕ್ಷದ ಪರ ಒಲವು ಹೆಚ್ಚಿದೆ. ಇದನ್ನು ಮತಗಳಾಗಿ ಪರಿವರ್ತಿಸುವ ಮೂಲಕ ಅತ್ಯಧಿಕ ಮತಗಳಿಂದ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಎಂದರು.
ಬಿಜೆಪಿ ಸವಣೂರು ಗ್ರಾ.ಪಂ.ಸಮಿತಿ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ ಮಾತನಾಡಿ, ಪಕ್ಷದ ಬಲವರ್ಧನೆ ಹಾಗೂ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆ, ಗೆಲುವಿಗೆ ಪೂರಕವಾದ ಅಂಶಗಳ ಕುರಿತು ಪ್ರತೀ ಬೂತ್‌ನಲ್ಲೂ ನಿರಂತರವಾಗಿ ಸಭೆ, ಬೇಟಿ ಕಾರ್ಯ ನಡೆಸಲಾಗುತ್ತಿದೆ. ತಮ್ಮ ತಮ್ಮ ಬೂತ್‌ನಲ್ಲಿ ಪಕ್ಷದ ಅಭ್ಯರ್ಥಿಗೆ ಗರಿಷ್ಠ ಮತ ಚಲಾವಣೆಗೊಳಿಸುವ ಮೂಲಕ ಬಿಜೆಪಿಯನ್ನು ಗೆಲ್ಲಿಸುವಂತೆ ವಿನಂತಿಸಿದರು. ತಾ.ಪಂ.ಉಪಾಧ್ಯಕ್ಷೆ ರಾಜೇಶ್ವರಿ ಕನ್ಯಾಮಂಗಲ, ಹಿಂದೂ ಸಂಘಟನೆಯ ಮುಂದಾಳು ಕುಂಜಾಡಿ ಪ್ರಕಾಶ್ಚಂದ್ರ ರೈ ಮುಗೇರುಗುತ್ತು, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಸವಣೂರು ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕರಾದ ವೇದಾವತಿ ಕೆಡೆಂಜಿ, ತಾರಾನಾಥ ಕಾಯರ್ಗ, ಗ್ರಾ.ಪಂ.ಸದಸ್ಯರಾದ ರಾಜೀವಿ ಶೆಟ್ಟಿ, ಸತೀಶ್ ಬಲ್ಯಾಯ ಉಪಸ್ಥಿತರಿದ್ದರು. ಸಭೆಯಲ್ಲಿ ತೀರ್ಥರಾಮ ಕೆಡೆಂಜಿ, ಜಗದೀಶ್ ಆರೆಲ್ತಡಿ, ಬಾಬು ಮಡಿವಾಳ, ಗಣೇಶ್ ನಾಯ್ಕ ಕೆಡೆಂಜಿ, ಮೋನಪ್ಪ ಗೌಡ ಆರೆಲ್ತಡಿ, ಶಿವರಂಜನ್, ಉಮೇಶ್, ಹರೀಶ್ ಕೆ, ಜಗದೀಶ ಕೆಡೆಂಜಿ, ಹೊನ್ನಪ್ಪ ಗೌಡ ಎ.ಎಸ್, ಕಾಂತಪ್ಪ ನಲಿಕೆ, ವಿಠಲ ಗೌಡ, ಪ್ರಕಾಶ್, ದಿನೇಶ್, ಗಣೇಶ ಮಡಿವಾಳ, ಪ್ರವೀಣ್ ಎ, ಪುರುಷೋತ್ತಮ ಗೌಡ, ಯೋಗೀಶ, ಪರಮೇಶ್ವರ ಮಡಿವಾಳ, ಗೋಪಾಲ ಕೃಷ್ಣ ಗೌಡ, ರಾಧಾ ಮಡಿವಾಳ ಉಪಸ್ಥಿತರಿದ್ದರು. ಗ್ರಾ.ಪಂ.ಸದಸ್ಯ ಸತೀಶ್ ಬಲ್ಯಾಯ ಕೆ ಸ್ವಾಗತಿಸಿ, ವಂದಿಸಿದರು.
error: Content is protected !!

Join the Group

Join WhatsApp Group