ಪಾಲ್ತಾಡಿ ಆರೋಗ್ಯ ಕೇಂದ್ರಕ್ಕೆ ಕಿಡಿಗೇಡಿಗಳಿಂದ ಹಾನಿ

(ನ್ಯೂಸ್ ಕಡಬ) newskadaba.com ಸವಣೂರು, ಮಾ.30. ಪಾಲ್ತಾಡಿ ಗ್ರಾಮದ ಮಂಜುನಾಥನಗರ(ಅಂಕತ್ತಡ್ಕ) ದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಿಡಿಗೇಡಿಗಳು ಹಾನಿಗೊಳಿಸಿದ ಘಟನೆ ವರದಿಯಾಗಿದೆ.
ಆರೋಗ್ಯ ಕೇಂದ್ರದ ಮುಂಭಾಗದ ಕಿಟಕಿಯ ಗಾಜನ್ನು ಕಿಡಿಗೇಡಿಗಳು ಕೈಯಿಂದ ಗುದ್ದಿ ಹಾನಿ ಮಾಡಿದ್ದು, ಸ್ಥಳದಲ್ಲಿ ರಕ್ತದ ಕಲೆ ಕಾಣಿಸಿಕೊಂಡಿದ್ದು ಈ ಕುರಿತು ಬೆಳ್ಳಾರೆ ಪೋಲೀಸ್ ಠಾಣೆಗೆ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ದೀಪಕ್ ರೈ ಅವರು ದೂರು ನೀಡಿದ್ದಾರೆ.

ಯಾವ ಉದ್ದೇಶಕ್ಕಾಗಿ ಗಾಜು ಒಡೆದಿದ್ದಾರೆ ಎಂಬುದು ಪೋಲೀಸ್ ತನಿಖೆಯಿಂದ ತಿಳಿಯಬೇಕಿದೆ. ಮುಖ್ಯ ರಸ್ತೆಯಿಂದ ದೂರವಿರುವ ಈ ಆರೋಗ್ಯ ಕೇಂದ್ರಕ್ಕೆ ಯಾವುದೋ ದುಷ್ಕೃತ್ಯ ನಡೆಸಲು ಬಂದಿರುವ ಸಾಧ್ಯತೆ ಕಂಡುಬರುತ್ತಿದೆ. ಅಲ್ಲದೆ ಆರೋಗ್ಯ ಕೇಂದ್ರದ ಆವರಣದ ಹೊರಗಡೆ ಇರುವ ಮೋರಿಯ ಬಳಿಯಲ್ಲಿ ಮದ್ಯದ ಬಾಟಲಿಗಳು ಕಾಣುತ್ತಿದ್ದು, ರಾತ್ರಿ ವೇಳೆ ಇಲ್ಲಿ ಅಕ್ರಮ ಚಟುವಟಿಕೆ ನಡೆಯುತಿರುವ ಕುರಿತು ಗುಮಾನಿ ವ್ಯಕ್ತವಾಗಿದೆ.
ಬಂಬಿಲ – ಮಂಜುನಾಥನಗರ ಮುಖ್ಯ ರಸ್ತೆಯಿಂದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಿರುಗುವ ರಸ್ತೆಗೆ ಸವಣೂರು ಗ್ರಾ.ಪಂ.ವತಿಯಿಂದ ಸೋಲಾರ್ ದಾರಿದೀಪ ಅಳವಡಿಸಲಾಗಿತ್ತು. ಆದರೆ ಅಳವಡಿಸಿದ ಸ್ವಲ್ಪ ಸಮಯದಲ್ಲೇ ಅದನ್ನು ಕಳವು ಮಾಡಲಾಗಿತ್ತು. ರಸ್ತೆಯಲ್ಲಿ ದಾರಿದೀಪವಿದ್ದರೆ ಆ ರಸ್ತೆಯಲ್ಲಿ ಸಾಗುವಾಗ ಗುರುತಿಸುವ ಸಾಧ್ಯತೆ ಇರುವದರಿಂದ ಅದನ್ನು ಕಳವು ಮಾಡಿರುವ ಕುರಿತು ಸಂಶಯ ವ್ಯಕ್ತಪಡಿಸಲಾಗುತ್ತಿದೆ. ಸೋಲಾರ್ ಕಳ್ಳತನಕ್ಕೂ ಈ ದುಷ್ಕೃತ್ಯ ನಡೆಸಿದವರಿಗೂ ಸಾಮ್ಯತೆ ಇರುವ ಅಂಶ ಕಂಡುಬರುತ್ತಿದೆ. ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ರಸ್ತೆಯಲ್ಲಿನ ಮೋರಿಯ ಪಕ್ಕ ಮದ್ಯದ ಬಾಟಲಿಗಳೂ ಕಾಣಿಸಿದ್ದು, ಅಕ್ರಮ ಚಟುವಟಿಕೆ ನಡೆಸುವ ಕುರುಹಾಗಿದ್ದು, ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಬೆಳ್ಳಾರೆ ಠಾಣಾ ಉಪ ನಿರೀಕ್ಷಕ ಡಿ.ಎನ್. ಈರಯ್ಯ ಹಾಗೂ ಸಿಬಂದಿಗಳು ಅವರು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿ ತನಿಖೆ ನಡೆಸುತ್ತಿದ್ದಾರೆ.

Also Read  ಯುಪಿ ಪೊಲೀಸರಿಂದ ಪಿಎಫ್ಐ ಕಾರ್ಯಕರ್ತರ ಬಂಧನ ➤ ಪಾಪ್ಯುಲರ್ ಫ್ರಂಟ್ ಬೆಳ್ತಂಗಡಿ ಜಿಲ್ಲಾ ವತಿಯಿಂದ ವಿವಿಧ ಕಡೆ ಪ್ರತಿಭಟನೆ

error: Content is protected !!
Scroll to Top