ಯಮುನಾ ನದಿ ವಿಷಪೂರಿತ ಆರೋಪ – ಕೇಜ್ರಿವಾಲ್ ವಿರುದ್ಧ ಪ್ರಕರಣ ದಾಖಲಿಸಲಿದೆ ಸರ್ಕಾರ

(ನ್ಯೂಸ್ ಕಡಬ) newskadaba.com, ಜ.29. : ದೆಹಲಿಯ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ “ಯಮುನಾ ವಿಷ” ಆರೋಪದ ವಿರುದ್ಧ ಹರಿಯಾಣ ಸರ್ಕಾರ ಪ್ರಕರಣ ದಾಖಲಿಸಲಿದೆ ಎಂದು ರಾಜ್ಯ ಸಚಿವ ವಿಪುಲ್ ಗೋಯಲ್ ಬುಧವಾರ ತಿಳಿಸಿದ್ದಾರೆ.

“ಕೇಜ್ರಿವಾಲ್ ಅವರು ಹರಿಯಾಣ ಮತ್ತು ದೆಹಲಿಯ ಜನರಲ್ಲಿ ಭೀತಿಯನ್ನು ಹರಡಿದ್ದಾರೆ. ಅರವಿಂದ್ ಕೇಜ್ರಿ ವಾಲ್ ಬೇಜವಾಬ್ದಾರಿಯುತ ಹೇಳಿಕೆ ನೀಡಿದ್ದಾರೆ. ಹರಿಯಾಣ ಸರ್ಕಾರ ಆತನನ್ನು ಬಿಡುವುದಿಲ್ಲ. ಈ ಆರೋಪಗಳಲ್ಲಿ ಯಾವುದೇ ಹುರುಳಿಲ್ಲ “ಎಂದರು.

ಹರಿಯಾಣದ ಬಿಜೆಪಿ ಸರ್ಕಾರವು ದೆಹಲಿಗೆ ಪೂರೈಸುವ ಯಮುನಾ ನೀರಿನಲ್ಲಿ ವಿಷವನ್ನು ಬೆರೆಸುತ್ತಿದೆ ಎಂದು ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಸೋಮವಾರ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಸಂಸ್ಕರಿಸದ ಕೈಗಾರಿಕಾ ತ್ಯಾಜ್ಯ ಮತ್ತು ಮಾಲಿನ್ಯದ ಪರಿಣಾಮವಾಗಿ-ಎಎಪಿಯ ಪ್ರಕಾರ, ಅನುಮತಿಸಲಾದ ಮಿತಿಗಿಂತ 700 ಪಟ್ಟು ಹೆಚ್ಚಿನ ಮಟ್ಟದ ಅಮೋನಿಯಾ ಪ್ರಮಾಣವನ್ನು ಉಲ್ಲೇಖಿಸಲಾಗಿದೆ.

Also Read  ಕಲ್ಲಡ್ಕ: ಬಸ್ಸಿಗೆ ಕಲ್ಲೆಸೆತ ಪ್ರಕರಣ ► ಆರೋಪಿಯ ಬಂಧನ

error: Content is protected !!
Scroll to Top