utta pradesha

ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 22. ಬಾಲಕಿಯೊಬ್ಬಳು ಬಾಯಿಯಲ್ಲಿ ಪೆನ್ಸಿಲ್ ಇಟ್ಟು ಸಿಪ್ಪೆ ತೆಗೆಯುವಾಗ ಗಂಟಲಿನಲ್ಲಿ ಸಿಪ್ಪೆ ಅಂಟಿಕೊಂಡು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಹಮೀರ್ ಪುರದಲ್ಲಿ ಸಂಭವಿಸಿದೆ. ಈಕೆ ಮನೆಯ ಟೆರೇಸ್ ಮೇಲೆ ತನ್ನ ಸಹೋದರನೊಂದಿಗೆ ಓದುತ್ತಿದ್ದ ಸಮಯ ಪೆನ್ಸಿಲ್ ಸಿಪ್ಪೆ ತೆಗೆಯಲು ಬಾಯಿಯಲ್ಲಿ ಕಟ್ಟರ್ ಇಟ್ಟುಕೊಂಡು ಸಿಪ್ಪೆ ಸುಲಿಯುತ್ತಿದ್ದಳು. ಈ ಸಂದರ್ಭ ದುರಾದೃಷ್ಟವಶಾತ್ ಸಿಪ್ಪೆಯು ಬಾಲಕಿಯ ಗಂಟಲಿನಲ್ಲಿ ಸಿಕ್ಕಿಕೊಂಡು ಉಸಿರುಗಟ್ಟಿಸಲಾರಂಭಿಸಿದೆ. ತಕ್ಷಣವೇ ಮನೆಯವರು ನೋಡಿ, ಆಸ್ಪತ್ರೆಗೆ ಕರೆದೊಯ್ದವಷ್ಟರಲ್ಲಿ ಬಾಲಕಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ.

ಪೆನ್ಸಿಲ್ ಸಿಪ್ಪೆ ಗಂಟಲಲ್ಲಿ ಸಿಲುಕಿ ಬಾಲಕಿ ಮೃತ್ಯು..! Read More »

ಕ್ರೈಮ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಯುವಕ…!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ, ಡಿ. 22. ಯುವಕನೋರ್ವ ತನ್ನ ಕಾರನ್ನೇ ಹೆಲಿಕಾಪ್ಟರ್ ಆಗಿ ಪರಿವರ್ತಿಸಿರುವ ವಿಭಿನ್ನ ಸನ್ನಿವೇಶಕ್ಕೆ ಉತ್ತರ ಪ್ರದೇಶ ಸಾಕ್ಷಿಯಾಗಿದೆ. ಈ ವಿಭಿನ್ನ ಪ್ರಯೋಗ ಮಾಡಿದ ಯುವಕ ಅಜಂಗಢ ಮೂಲದ ಸಲ್ಮಾನ್. ಇವನು ತನ್ನ ಬಳಿ ಇದ್ದ ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ರೀತಿ ಪರಿವರ್ತಿಸಲು, 4 ತಿಂಗಳು ತೆಗೆದುಕೊಂಡ ಹಾಗೂ ಇದಕ್ಕೆ ಅಂದಾಜು 3 ಲಕ್ಷ ಖರ್ಚು ಮಾಡಿದ್ದಾನೆ ಎನ್ನಲಾಗಿದೆ. ಈ ಕಾರನ್ನು ಹೆಲಿಕಾಪ್ಟರ್ ಮಾದರಿ ತಯಾರಿಸಿದ್ದಕ್ಕೆ ಈಗ ಈ ಕಾರಿಗೆ ಹೆಚ್ಚು

ನ್ಯಾನೋ ಕಾರನ್ನೇ ಹೆಲಿಕಾಪ್ಟರ್ ಆಗಿ ಪರಿವರ್ತಿಸಿದ ಯುವಕ…! Read More »

ರಾಷ್ಟ್ರೀಯ ನ್ಯೂಸ್
Scroll to Top