ಉಡುಪಿ: ಸಚಿವ ಮಾಧುಸ್ವಾಮಿ ಶ್ರೀ ಕೃಷ್ಣಮಠಕ್ಕೆ ಭೇಟಿ
(ನ್ಯೂಸ್ ಕಡಬ) newskadaba.com ಉಡುಪಿ ನ. 26: ಶ್ರೀಕೃಷ್ಣ ಮಠಕ್ಕೆ ಕಾನೂನು ಮತ್ತು ಸಂಸದೀಯ ಸಚಿವ ಜೆ.ಪಿ.ಮಾಧುಸ್ವಾಮಿ ಕಳೆದ ದಿನ ಭೇಟಿ ನೀಡಿದರು. ಕುಟುಂಬ ಸಮೇತರಾಗಿ ಮಠಕ್ಕೆ ಆಗಮಿಸಿದ ಸಚಿವರು, ದೇವರ ದರ್ಶನ ಪಡೆದು ಪುರೋಹಿತ ಲಕ್ಷ್ಮೀಶಾಚಾರ್ಯ ಅವರಿಂದ ಪ್ರಸಾದ ಸ್ವೀಕರಿಸಿದರು. ಸಚಿವರ ಭೇಟಿ ವೇಳೆ ಶಾಸಕ ಕೆ.ರಘುಪತಿ ಭಟ್,ವ್ಯವಸ್ಥಾಪಕ ಗೋವಿಂದ್ರಾಜ್ , ಪಿಆರ್ ಒ ಶ್ರೀಶ ಕಡೆಕಾರ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ: ಸಚಿವ ಮಾಧುಸ್ವಾಮಿ ಶ್ರೀ ಕೃಷ್ಣಮಠಕ್ಕೆ ಭೇಟಿ Read More »
ಕರಾವಳಿ, ಕರ್ನಾಟಕ









