SAVANOORU YUVAKA mandala

ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.11. ಸವಣೂರು ಯುವಕ ಮಂಡಲವು ಸಮಾಜಕ್ಕೆ ಹಲವು ನಾಯಕರನ್ನು ಕೊಡುಗೆಯಾಗಿ ನೀಡಿದೆ. ತಾವೂ ಬೆಳೆದು ಇತರರನ್ನು ಬೆಳೆಸುವು ಇಲ್ಲಿನ ಯುವಕ ಮಂಡಲದ ಹೆಗ್ಗಳಿಕೆ. ಸದಾ ಸಮಾಜಮುಖಿ ಚಿಂತನೆಯ ಯುವ ಸಮೂಹ ದೇಶದ ಅಭಿವೃದ್ದಿಗೆ ಪೂರಕ ಎಂದು ಉದ್ಯಮಿ ಶಿವಪ್ರಸಾದ್ ಶೆಟ್ಟಿ ಕಿನಾರ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ ಹಾಗೂ ತಾ.ಉತ್ತಮ ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ […]

ಸವಣೂರು: ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ Read More »

ಕರಾವಳಿ

ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕುದ್ಮಾರಿನಲ್ಲಿ ಹೆಣದೂರು ಬೀದಿ ನಾಟಕ

(ನ್ಯೂಸ್ ಕಡಬ) newskadaba.com ಸವಣೂರು, ಎ.9. ಯುವ ಸಮುದಾಯ ಮದ್ಯವ್ಯಸನಕ್ಕೆ ಬಲಿಯಾಗದೇ ಗೌರವಯುತ ಬದುಕನ್ನು ಕಟ್ಟಿಕೊಳ್ಳಬೇಕು. ಮದ್ಯಪಾನವು ಆರೋಗ್ಯವನ್ನು ಕೆಡಿಸುವ ಜೊತೆಯಲ್ಲಿ ಇಡೀ ಕುಟುಂಬವನ್ನೇ ಬೀದಿಪಾಲಾಗಿಸುವುದು. ಈ ನಿಟ್ಟಿನಲ್ಲಿ ಸವಣೂರು ಶ್ರವಣರಂಗ ಶಿಕ್ಷಕ ಕಲಾವಿದರು ಜಿಲ್ಲೆಯಾದ್ಯಂತ ಹೆಣದೂರು ಬೀದಿನಾಟಕ ಪ್ರದರ್ಶಿಸುವ ಮೂಲಕ ಜಾಗೃತಿ ಮೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವೆಂದು ಪುತ್ತೂರು ವಕೀಲರ ಸಂಘದ ಅಧ್ಯಕ್ಷ ಕೆ. ಭಾಸ್ಕರ ಕೋಡಿಂಬಾಳ ಹೇಳಿದರು. ಅವರು ಭಾನುವಾರ ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಸವಣೂರು ಯುವಕ ಮಂಡಲದ ವತಿಯಿಂದ ಸ್ಕಂದಶ್ರೀ ಯುವಕ ಮಂಡಲ ಕುದ್ಮಾರು ಇದರ ಸಹಕಾರದೊಂದಿಗೆ

ರಾಷ್ಟ್ರೀಯ ಯುವ ಸಪ್ತಾಹದ ಅಂಗವಾಗಿ ಕುದ್ಮಾರಿನಲ್ಲಿ ಹೆಣದೂರು ಬೀದಿ ನಾಟಕ Read More »

ಕರಾವಳಿ

ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ

(ನ್ಯೂಸ್ ಕಡಬ) newskadaba.com ಸವಣೂರು, ಎ.9.  ರಾಜ್ಯ ಪ್ರಶಸ್ತಿ ಪುರಸ್ಕೃತ, ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಕಾರ್ಯಕ್ರಮದ ಸಮಾರೋಪ, ತಾ.ಅತ್ಯುತ್ತಮ ಯುವ ಮಂಡಲ ಹಾಗೂ ಯುವ ಪ್ರಶಸ್ತಿ ಪ್ರದಾನ ಎ. 9 ರಂದು ಯುವ ಸಭಾಭವನದ ವಠಾರದಲ್ಲಿ ನಡೆಯಲಿದೆ. ತಾಲೂಕು ಮಟ್ಟದ ಶ್ರವಣಕೀರ್ತಿ ಪ್ರಶಸ್ತಿಯನ್ನು ವಿವೇಕಾನಂದ ಯುವಕ ವೃಂದ ಕೌಡಿಚ್ಚಾರು ಮತ್ತು ಶ್ರವಣ ದೀಪ ಪ್ರಶಸ್ತಿಯನ್ನು ಕಮಲೇಶ್, ಷಣ್ಮುಖ ಯುವಕ ಮಂಡಲ ಸರ್ವೆ ಇವರಿಗೆ ಪ್ರದಾನ ಮಾಡಲಾಗುವುದು. ಇದೇ ಸಂದರ್ಭದಲ್ಲಿ ಅನೇಕ ಸಾಧಕರನ್ನು ಅಭಿನಂದಿಸಲಾಗುವುದು. ಕ್ರೀಡೆಯಲ್ಲಿ

ಎ.9: ಸವಣೂರು ಯುವಕ‌ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ ಸಮಾರೋಪ Read More »

ಕರಾವಳಿ

ಸವಣೂರು ಯುವ ಸಪ್ತಾಹದಲ್ಲಿ ಕ್ರಿಕೆಟ್ ಪಂದ್ಯಾಟ

(ನ್ಯೂಸ್ ಕಡಬ) newskadaba.com ಸವಣೂರು ಎ.9. ಕ್ರೀಡೆಯಿಂದ ಸೌಹಾರ್ದಯುತ ವಾತಾವರಣ ನಿರ್ಮಾಣ ಸಾದ್ಯ, ಕ್ರೀಡೆಯಿಂದ ದೈಹಿಕ ಹಾಗೂ ಮಾನಸಿಕ ಬೆಳವಣಿಗೆ ಸಾಧ್ಯ. ಆಧುನಿಕ ಯುಗದಲ್ಲಿ ಅಂತರ್ಜಾಲದಲ್ಲೇ ಮುಳುಗಿರುವ ಯುವಜನತೆಯನ್ನು ಕ್ರೀಡೆಯತ್ತ ಸೆಳೆಯಲು ಪಂದ್ಯಕೂಟಗಳು ಅವಕಾಶ ಕಲ್ಪಿಸುತ್ತದೆ ಎಂದು ಸವಣೂರು ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ, ಪ್ರಗತಿ ಪರ ಕೃಷಿಕ ಪಿ.ಡಿ.ಗಂಗಾಧರ ರೈ ದೇವಸ್ಯ ಹೇಳಿದರು. ಅವರು ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ನಡೆದ ಕ್ರಿಕೆಟ್ ಪಂದ್ಯಾಟವನ್ನು ಉದ್ಘಾಟಿಸಿದರು. ಅತಿಥಿಗಳಾಗಿ ಸವಣೂರು

ಸವಣೂರು ಯುವ ಸಪ್ತಾಹದಲ್ಲಿ ಕ್ರಿಕೆಟ್ ಪಂದ್ಯಾಟ Read More »

ಕರಾವಳಿ

ಸವಣೂರು: ಯುವ ಸಪ್ತಾಹದಲ್ಲಿ ಭಜನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com  ಸವಣೂರು ಎ.9. ಭಜನೆಯಿಂದ ವಿಭಜನೆ ತಪ್ಪುತ್ತದೆ. ದೇವರನ್ನೊಳಿಸಲು ಭಜನೆ ಸುಲಭ ಹಾದಿ ಎಂದು ಪಾಲ್ತಾಡಿ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್ ಹೇಳಿದರು. ಅವರು ಸವಣೂರು ರೈಲ್ವೆಗೇಟ್ ಬಳಿಯ ಸಂತಸದಲ್ಲಿ ರಾಜ್ಯ ಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವಸಪ್ತಾಹದ ಅಂಗವಾಗಿ ನಡೆದ 4 ನೇ ದಿನದ ಕಾರ್ಯಕ್ರಮ ಭಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಈ ಸಂದರ್ಭ ಕಾರ್ಯಕ್ರಮ ಆಯೋಜಕರಾದ ರಾಜ್ಯ ಯುವ ಸಂಘಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಸುರೇಶ್

ಸವಣೂರು: ಯುವ ಸಪ್ತಾಹದಲ್ಲಿ ಭಜನಾ ಕಾರ್ಯಕ್ರಮ Read More »

ಕರಾವಳಿ

ಸವಣೂರು ರಾಷ್ಟ್ರೀಯ ಯುವಸಪ್ತಾಹದಲ್ಲಿ ಮಾಹಿತಿ ಮೇಳ

(ನ್ಯೂಸ್ ಕಡಬ) newskadaba.com ಸವಣೂರು, ಎ.7. ವೇಗವಾಗಿ ಬೆಳೆಯುತ್ತಿರುವ ಇಂದಿನ ಕಾಲಘಟ್ಟದಲ್ಲಿ ವಿವಿದ ಕ್ಷೇತ್ರಗಳ ಮಾಹಿತಿ ಅತ್ಯಗತ್ಯ .ಈ ನಿಟ್ಟಿನಲ್ಲಿ ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ಯುವಸಪ್ತಾಹದಲ್ಲಿ ಮಾಹಿತಿ ಮೇಳವನ್ನು ಜೋಡಿಸಿರುವುದು ಶ್ಲಾಘನೀಯ ಎಂದು ವಿಜಯ ಬ್ಯಾಂಕಿನ ನಿವೃತ ಅಧಿಕಾರಿ ಪಿ.ಡಿ.ಕೃಷ್ಣ ಕುಮಾರ್ ರೈ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುತ್ತಿರುವ ರಾಷ್ಟ್ರೀಯ ಯುವ ಸಪ್ತಾಹದ 3ನೇ ದಿನದ ಕಾರ್ಯಕ್ರಮ ಕಾರು ಮತ್ತು ದ್ವಿಚಕ್ರ ವಾಹನಗಳ ಬುಕ್ಕಿಂಗ್ ಸಾಲ ಸೌಲಭ್ಯ ಹಾಗೂ ಮೊಬೈಲ್ ಸಿಮ್ ಮಾಹಿತಿ

ಸವಣೂರು ರಾಷ್ಟ್ರೀಯ ಯುವಸಪ್ತಾಹದಲ್ಲಿ ಮಾಹಿತಿ ಮೇಳ Read More »

ಕರಾವಳಿ

ಸವಣೂರು: ಸ್ನೇಹ ಸಮ್ಮಿಲನ, ಸ್ವಚ್ಚತಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಸವಣೂರು, ಎ.6. ಯುವಕ ಮಂಡಲಗಳ ಮೂಲಕ ಸಾಮಾಜಿಕ ಬದಲಾವಣೆ ಸಾಧ್ಯ. ಸವಣೂರು ಯುವಕ ಮಂಡಲವು ಕಳೆದ ಹಲವು ವರ್ಷಗಳಿಂದ ಅತ್ಯನ್ನತ ಚಟುವಟಿಕೆ ನಡೆಸುತ್ತಾ ಮಾದರಿಯಾಗಿದೆ ಎಂದು ಡಾ.ಶ್ಯಾಮ ಸುಂದರ ಕೆ. ಹೇಳಿದರು.ಅವರು ರಾಜ್ಯಪ್ರಶಸ್ತಿ ಪುರಸ್ಕೃತ ಸವಣೂರು ಯುವಕ ಮಂಡಲದ ಆಶ್ರಯದಲ್ಲಿ ನಡೆಯುತ್ತಿರುವ ಯುವ ಸಪ್ತಾಹದ 2ನೇ ದಿನದ ಕಾರ್ಯಕ್ರಮ ಬೆಳ್ಳಿ ಹಬ್ಬ ವರ್ಷಾಚರಣಾ ಸಮಿತಿ ಮಿತ್ರ ಬಳಗ ಕಾಯರ್ತೋಡಿ ಸುಳ್ಯ ಇದರ ಸಹಯೋಗದಲ್ಲಿ ನಡೆದ ಸ್ನೇಹ ಮಿಲನ ಮತ್ತು ಸ್ವಚ್ಚತಾ ಕಾರ್ಯವನ್ನು ಉದ್ಘಾಟಿಸಿ ಮಾತನಾಡಿದರು. ಬೆಳ್ಳಿ

ಸವಣೂರು: ಸ್ನೇಹ ಸಮ್ಮಿಲನ, ಸ್ವಚ್ಚತಾ ಕಾರ್ಯಕ್ರಮ Read More »

ಕರಾವಳಿ

ಸವಣೂರು: ರಾಷ್ಟ್ರೀಯ ಯುವಸಪ್ತಾಹ ಉದ್ಘಾಟನೆ

(ನ್ಯೂಸ್ ಕಡಬ) newskadaba.com ಸವಣೂರು, ಎ.4. ಯುವಕ ಮಂಡಲದಿಂದ ವ್ಯಕ್ತಿತ್ವ ವಿಕಸನದ ಜತೆಗೆ ಸರ್ವಾಂಗೀಣ ಬೆಳವಣಿಗೆ ಸಾಧ್ಯ. ಸಮಾಜದಲ್ಲಿ ಸಂಘಟನಾತ್ಮಕ ಶಕ್ತಿಗೆ ಹೆಚ್ಚಿನ ಬಲವಿದೆ. ಈ ನಿಟ್ಟಿನಲ್ಲಿ ಸವಣೂರು ಯುವಕ ಮಂಡಲವು ಹಲವು ವರ್ಷಗಳಿಂದ ನಿರಂತರವಾಗಿ ಸಮಾಜಮುಖಿ ಚಿಂತನೆಯೊಂದಿಗೆ ಊರಿನ ಬೆಳವಣಿಗೆಗೆ ಕೊಡುಗೆಯಾಗಿದೆ ಎಂದು ಸವಣೂರು ವಿದ್ಯಾರಶ್ಮಿ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕ ಸವಣೂರು ಕೆ.ಸೀತಾರಾಮ ರೈ ಹೇಳಿದರು. ಅವರು ರಾಜ್ಯಪ್ರಶಸ್ತಿ ಪುರಸ್ಕøತ ಸವಣೂರು ಯುವಕ ಮಂಡಲದ ವತಿಯಿಂದ ನಡೆಯುವ ರಾಷ್ಟ್ರೀಯ ಯುವಸಪ್ತಾಹ ಹಾಗೂ ಕುಟುಂಬ ಸಮ್ಮಿಲನವನ್ನು ಉದ್ಘಾಟಿಸಿ ಮಾತನಾಡಿದರು. ಆಶಯ

ಸವಣೂರು: ರಾಷ್ಟ್ರೀಯ ಯುವಸಪ್ತಾಹ ಉದ್ಘಾಟನೆ Read More »

ಕರಾವಳಿ

ಎ.3 ರಿಂದ 9ರ ವರೆಗೆ ಸವಣೂರು ಯುವಕ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ

(ನ್ಯೂಸ್ ಕಡಬ) newskadaba.com ಸವಣೂರು,ಎ.3. ಕಳೆದ 18 ವರ್ಷಗಳಿಂದ ನಡೆಯುತ್ತಿರುವ ಸವಣೂರು ಯುವಕ ಮಂಡಲದ ವತಿಯಿಂದ 7 ದಿನಗಳ ರಾಷ್ಟ್ರೀಯ ಯುವ ಸಪ್ತಾಹ ಎ.3 ರಿಂದ 9ರ ತನಕ ವಿವಿಧ ಕಡೆಗಳಲ್ಲಿ ಜರುಗಲಿದೆ. ಕೊನೆಯ ದಿನ ಸಮಾರೋಪ ಸಮಾರಂಭದಂದು ಯುವ ಮಂಡಲಿ ಪ್ರಶಸ್ತಿ, ಯುವ ಪ್ರಶಸ್ತಿ ಮತ್ತು ನಾಲ್ಕು ಮಂದಿ ಸಾಧಕರಿಗೆ ಅಭಿನಂದನೆ ಹಾಗೂ 6ಮಂದಿಯನ್ನು ಗರುತಿಸುವಿಕೆಯ ಕಾರ್ಯಕ್ರಮ ನಡೆಯಲಿದೆ ಎಂದು ಸವಣೂರು ಯುವಕ ಮಂಡಲದ ಅಧ್ಯಕ್ಷ ಯತೀಶ್ ಕುಮಾರ್ ಕೆ.ಎಂ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಎ.3ರಂದು ರಾಷ್ಟ್ರೀಯ ಯುವ ಸಪ್ತಾಹದ

ಎ.3 ರಿಂದ 9ರ ವರೆಗೆ ಸವಣೂರು ಯುವಕ ಮಂಡಲದ ರಾಷ್ಟ್ರೀಯ ಯುವ ಸಪ್ತಾಹ Read More »

ಕರಾವಳಿ
Scroll to Top