newskadaba

ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ

(ನ್ಯೂಸ್ ಕಡಬ) newskadaba.com ಕರಾಚಿ, ಜುಲೈ.10.ಪಾಕಿಸ್ತಾನದ ಬೋಲ್ ನ್ಯೂಸ್ ಚಾನೆಲ್ ಆ್ಯಂಕರ್ ಮುರೀದ್ ಅಬ್ಬಾಸ್ ಅವರನ್ನು ಖೈಯಾಬಾನ್ ಇ ಬುಖಾರಿ ಪ್ರದೇಶದ ಸಮೀಪದ ಕೆಫೆಯ ಹೊರಭಾಗದಲ್ಲಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ. ಪತ್ರಕರ್ತ ಅಬ್ಬಾಸ್ ಮೇಲೆ ಅತೀಫ್ ಝಮಾನ್ ಎಂಬಾತ ಗುಂಡು ಹಾರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಅಬ್ಬಾಸ್ ಗೆಳೆಯ ಖೈಝಾರ್ ಹಯಾತ್ ಅವರ ಮೇಲೂ ಗುಂಡಿನ ದಾಳಿ ನಡೆದಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಹಯಾತ್ ಸಾವನ್ನಪ್ಪಿರುವುದಾಗಿ ವರದಿ […]

ಕರಾಚಿ: ಶೂಟೌಟ್ ಗೆ ಇಬ್ಬರ ಬಲಿ ➤ ಪಾಕಿಸ್ತಾನದ ಟಿವಿ ಚಾನೆಲ್ ನ ಆ್ಯಂಕರ್ ಹಾಗೂ ಆತನ ಗೆಳೆಯ Read More »

ಅಂತರ್ರಾಷ್ಟ್ರೀಯ ನ್ಯೂಸ್

ಸರಸ್ವತೀ ಪ್ರೌಢಶಾಲೆ ಹನುಮಾನ್ನಗರ ಕಡಬ ➤ 6 ವಿದ್ಯಾರ್ಥಿಗಳು NMMS ಸ್ಕಾಲರ್ ಶಿಪ್ ಗೆ ಆಯ್ಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಸರಸ್ವತೀ ಪ್ರೌಢಶಾಲೆ ಹನುಮಾನ್‍ನಗರ ,ಕಡಬ ಇಲ್ಲಿನ ಹದಿನಾಲ್ಕು ಮಂದಿ ವಿದ್ಯಾರ್ಥಿಗಳು NMMS ಪರೀಕ್ಷೆಯಲ್ಲಿ ಭಾಗವಹಿಸಿದ್ದು 6 ಮಂದಿ ವಿದ್ಯಾರ್ಥಿಗಳು NMMS ಸ್ಕಾಲರ್‍ಶಿಪ್‍ಗೆ ಆಯ್ಕೆಯಾಗಿರುತ್ತಾರೆ. ಯೂಥ್ ಫಾರ್ ಸೇವಾ ಹಾಗೂ ಸಿಸ್ಕೋ ಸಂಭ್ರಮ ತಂಡದ ಸಹಕಾರದಿಂದ ನೀಡಲಾಗುವ ಸ್ಕಾಲರ್‍ಶಿಪ್‍ಗೆ ಆಯ್ಕೆಯಾದ ವಿದ್ಯಾರ್ಥಿಗಳಾದ ಗೀತಾ ಶ್ರೀ ಪಿ, ಜಸ್ಮಿತ್ ಕೆ ಪಿ, ನಿಹಾರ್ ರೈ ಕೆ, ಕೀರ್ತನ್ ರೈ, ಪವನ್ ಕೆ. ಪಿ, ಅಭಿಷೇಕ್ ಕೆ ಇವರು ತಲಾ ರೂ. 2500 ನ್ನು ಸಂಸ್ಥೆಯ

ಸರಸ್ವತೀ ಪ್ರೌಢಶಾಲೆ ಹನುಮಾನ್ನಗರ ಕಡಬ ➤ 6 ವಿದ್ಯಾರ್ಥಿಗಳು NMMS ಸ್ಕಾಲರ್ ಶಿಪ್ ಗೆ ಆಯ್ಕೆ Read More »

ಕರಾವಳಿ

ಕೆಡಿಪಿ ಸಭೆ ಮುಂದೂಡಿಕೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10. ಜುಲೈ 11 ರಂದು ದಕ್ಷಿಣ ಕನ್ನಡ  ಜಿಲ್ಲಾ ಪಂಚಾಯತ್ ನ ಸಭಾಂಗಣದಲ್ಲಿ  ತ್ರೈಮಾಸಿಕ ಕೆಡಿಪಿ ಸಭೆಯನ್ನು ಆಯೋಜಿಸಲಾಗಿತ್ತು. ಆದರೆ ಕಾರಣಾಂತರಗಳಿಂದ ಈ ತ್ರೈಮಾಸಿಕ ಕೆಡಿಪಿ ಸಭೆಯನ್ನು  ಮುಂದೂಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಕೆಡಿಪಿ ಸಭೆ ಮುಂದೂಡಿಕೆ Read More »

ಕರಾವಳಿ

ಯುವತಿ ಕಾಣೆಯಾಗಿದ್ದಾರೆ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಮಂಗಳೂರು ತಾಲೂಕಿನ ಕಾರ್ನಾಡು ಗ್ರಾಮದ ಕೆ.ಎಸ್.ರಾವ್ ನಗರದ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ನೈಮಾ(23) ಎಂಬವರು ಜುಲೈ 1 ರಂದು ರಾತ್ರಿ ಮನೆಯಿಂದ ಕಾಣೆಯಾಗಿರುತ್ತಾರೆ. ಪ್ರಕರಣ ಮುಲ್ಕಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕಾಣೆಯಾದ ಯುವತಿಯ ಚಹರೆ ಇಂತಿವೆ: ನೈಮಾ ಪ್ರಾಯ 23 ವರ್ಷ, 5.6 ಅಡಿ ಎತ್ತರ, ದೃಢಕಾಯ ಶರೀರ, ದುಂಡು ಮುಖ, ಬಿಳಿಮೈಬಣ್ಣ, ಕೆಂಪು ಟೀ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿದ್ದರು, ತಿಳಿದಿರುವ ಭಾಷೆ ಕನ್ನಡ, ಬ್ಯಾರಿ, ತುಳು,

ಯುವತಿ ಕಾಣೆಯಾಗಿದ್ದಾರೆ. Read More »

ಕರಾವಳಿ

ಗೃಹರಕ್ಷಕ ದಳದ ಕಚೇರಿಯಲ್ಲಿ ಸೇವಾನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ.

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಜುಲೈ 9 ರಂದು ಜಿಲ್ಲಾ ಗೃಹರಕ್ಷಕ ದಳದ ಕಚೇರಿಯಲ್ಲಿ ಇತ್ತೀಚಿಗೆ ಇಲಾಖೆಯಿಂದ ನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ ಜರಗಿತು. ಇವರು ಕಳೆದ 24 ವರ್ಷಗಳಿಂದ ಪಣಂಬೂರು ಘಟಕದ ಘಟಕಾಧಿಕಾರಿಯಾಗಿ ಅಪೂರ್ವ ಸೇವೆ ಸಲ್ಲಿಸಿರುತ್ತಾರೆ. ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಠರಾದ ಡಾ: ಮುರಲೀ ಮೋಹನ್ ಚೂಂತಾರು ಇವರು ಹರೀಶ್ ಆಚಾರ್ ಅವರಿಗೆ ಹೂ, ಹಾರ, ಹಣ್ಣು ನೀಡಿ ಶಾಲು ಹೊದಿಸಿ, ಪೇಟ ತೊಡಿಸಿ ಸನ್ಮಾನ ಮಾಡಿದರು. ಉಪಸಮಾದೇಷ್ಠರಾದ

ಗೃಹರಕ್ಷಕ ದಳದ ಕಚೇರಿಯಲ್ಲಿ ಸೇವಾನಿವೃತ್ತರಾದ ಹರೀಶ್ ಆಚಾರ್ ಇವರಿಗೆ ಬಿಳ್ಕೊಡುಗೆ ಮತ್ತು ಸನ್ಮಾನ ಸಮಾರಂಭ. Read More »

ಕರಾವಳಿ

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ➤ ಮೊದಲು ಚಾಲ್ತಿಯಲ್ಲಿದ್ದ ಇ-ಮೇಲ್ ವಿಳಾಸದ ಬದಲಾವಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತವು ಚಾಲ್ತಿಯಲ್ಲಿದ್ದ ಮಿಂಚಂಚೆ(ಇ-ಮೇಲ್) kssidcho@vsnl.com ನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ, ಹೊಸದಾಗಿ ಇನ್ನೊಂದು ಇ-ಮೇಲ್ ವಿಳಾಸವನ್ನು ನೀಡಿದೆ. ಇ-ಆಡಳಿತ ಇಲಾಖೆಯಿಂದ ಹೊಸದಾಗಿ ಪಡೆದಿರುವ kssidcho@karnataka.gov.in ನ್ನು ನಿಗಮದ ಅಧಿಕೃತ ಮಿಂಚಂಚೆ (ಇ-ಮೇಲ್) ಎಂದು ಪರಿಗಣಿಸಿರುತ್ತದೆ.ಆದುದರಿಂದ ಮುಂದಿನ ದಿನಗಳಲ್ಲಿ ಮಿಂಚಂಚೆ(ಇ-ಮೇಲ್)  kssidcho@vsnl.com ಬದಲಾಗಿ ಮಿಂಚಂಚೆ (ಇ-ಮೇಲ್) kssidcho@karnataka.gov.in  ಗೆ ವ್ಯವಹರಿಸಲು ಸಹಾಯಕ ವ್ಯವಸ್ಥಾಪಕರು ಮಂಗಳೂರು ವಿಭಾಗ ಇವರ ಪ್ರಕಟಣೆ ತಿಳಿಸಿದೆ.

ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ➤ ಮೊದಲು ಚಾಲ್ತಿಯಲ್ಲಿದ್ದ ಇ-ಮೇಲ್ ವಿಳಾಸದ ಬದಲಾವಣೆ Read More »

ಕರಾವಳಿ

ಸಂಗೀತ ನೃತ್ಯ ತರಬೇತಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.10.ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿಯು 2019-20ನೇ ಸಾಲಿಗೆ ಶಿಷ್ಯವೇತನದ ಬದಲಾಗಿ, ಸಂಗೀತ ಹಾಗೂ ನೃತ್ಯವನ್ನು ಕಲಿಯಲು ಅವಕಾಶ ಕಲ್ಪಿಸಿದೆ. ಆದ್ದರಿಂದ  ಅಕಾಡೆಮಿ ವತಿಯಿಂದ ಪ್ರತಿಯೊಂದು ಜಿಲ್ಲೆಯಲ್ಲಿ(ಅರ್ಜಿಗಳನ್ನಾಧರಿಸಿ) ಗುರುಗಳ ಮುಖಾಂತರ ಅಕಾಡೆಮಿ ವ್ಯಾಪ್ತಿಗೆ ಒಳಪಡುವ ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ, ಸುಗಮ ಸಂಗೀತ, ನೃತ್ಯ ಕಥಾಕೀರ್ತನ; ಗಮಕ ಕಲಾಪ್ರಕಾರಗಳಲ್ಲಿ-ಕಲಿಯಲು ಆಸಕ್ತಿಯುಳ್ಳ/ಅಭ್ಯಾಸ ಮಾಡುತ್ತಿರುವ / ಹೆಚ್ಚಿನ ಅಭ್ಯಾಸ ಮಾಡಲಿಚ್ಚಿಸುವ ವಿದ್ಯಾರ್ಥಿಗಳಿಗೆ 5 ತಿಂಗಳವರೆಗೆ ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. 14ರಿಂದ 26 ವರ್ಷ ವಯೋಮಾನದ

ಸಂಗೀತ ನೃತ್ಯ ತರಬೇತಿ ಅರ್ಜಿ ಆಹ್ವಾನ Read More »

ಕರಾವಳಿ

“ವಿಧ್ವಂಸಕ’ ಕೃತ್ಯಕ್ಕೆ ಸಂಚು ರೂಪಿಸಿದ ಉಗ್ರರು! ➤ ವಿಚಾರಣೆಯ ವೇಳೆ ಮಾಹಿತಿ ನೀಡಿದ ಜೆಎಂಬಿ ಉಗ್ರ ಹಬೀಬುರ್ ರೆಹಮಾನ್

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.9.ಕೆಲ ದಿನಗಳ ಹಿಂದೆ ದೊಡ್ಡಬಳ್ಳಾಪುರದಲ್ಲಿ ಬಂಧಿಸಲ್ಪಟ್ಟ ಜೆಎಂಬಿ ಉಗ್ರ ಹಬೀಬುರ್‌ ರೆಹಮಾನ್‌ ಎನ್‌ಐಎ ವಿಚಾರಣೆ ವೇಳೆ ಈ ಮಾಹಿತಿ ಬಾಯ್ಬಿಟ್ಟಿದ್ದಾನೆ. ಈ ಮಾಹಿತಿ ಆಧರಿಸಿ ಚಿಕ್ಕಬಾಣಾವರದಲ್ಲಿ ತನ್ನ ಮೂವರು ಸಹಚರರೊಂದಿಗೆ ಉಳಿದುಕೊಂಡಿದ್ದ ಬಾಡಿಗೆ ಮನೆ ಮೇಲೆ ಭಾನುವಾರ ರಾತ್ರಿ ದಾಳಿ ನಡೆಸಿ, ಶೋಧ ನಡೆಸಿದೆ.ಕಾರ್ಯಾಚರಣೆ ವೇಳೆ ದೊರೆತ ಏರ್‌ಗನ್‌, ಟಿಫಿನ್‌ ಬಾಕ್ಸ್‌ ಗ್ರೆನೇಡ್‌ ಸೇರಿ ಇತರ ಸ್ಫೋಟಕಗಳನ್ನು ಜಪ್ತಿ ಮಾಡಿ ಮಹಜರು ಪೂರ್ಣಗೊಳಿಸಿರುವ ಎನ್‌ಐಎ ತಂಡ, ಆರೋಪಿಗಳ ವಿರುದ್ಧ ಸೋಲದೇವನಹಳ್ಳಿ ಪೊಲೀಸ್‌

“ವಿಧ್ವಂಸಕ’ ಕೃತ್ಯಕ್ಕೆ ಸಂಚು ರೂಪಿಸಿದ ಉಗ್ರರು! ➤ ವಿಚಾರಣೆಯ ವೇಳೆ ಮಾಹಿತಿ ನೀಡಿದ ಜೆಎಂಬಿ ಉಗ್ರ ಹಬೀಬುರ್ ರೆಹಮಾನ್ Read More »

ಕರ್ನಾಟಕ

ಬೈಕ್ ಮತ್ತು ಖಾಸಗಿ ಬಸ್ಸ್ ಡಿಕ್ಕಿ

(ನ್ಯೂಸ್ ಕಡಬ) newskadaba.comಉಡುಪಿ, ಜುಲೈ.9. ಶಿರ್ವ ಕಡೆಯಿಂದ ಮೂಲ್ಕಿಗೆ ಹೋಗುತ್ತಿದ್ದ ಖಾಸಗಿ ಬಸ್ಸಿಗೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದಿದೆ. ಸಮೀಪದ ಕುತ್ಯಾರು ವಿದ್ಯಾದಾಯಿನಿ ಶಾಲೆಯ ಬಳಿ ಈ ಘಟನೆ ನಡೆದಿದೆ. ಸವಾರ ರಾಜು ಶೆಟ್ಟಿ ಎಂಬವರು ಗಂಭೀರವಾಗಿ ಗಾಯಗೊಂಡಿದ್ದಾರೆ ಅವರು ಮುದರಂಗಡಿ ಕಡೆಯಿಂದ ಶಿರ್ವ ಕಡೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಅವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ.  

ಬೈಕ್ ಮತ್ತು ಖಾಸಗಿ ಬಸ್ಸ್ ಡಿಕ್ಕಿ Read More »

ಕರ್ನಾಟಕ

ಪೈಪ್ ಲೈನ್ ನ ಜಾಯಿಂಟ್ನಲ್ಲಿ ಬಿರುಕು ➤ ನೀರಿನ ಸರಬರಾಜು ಸ್ಥಗಿತ

(ನ್ಯೂಸ್ ಕಡಬ) newskadaba.comಉಪ್ಪಿನಂಗಡಿ, ಜುಲೈ.9.ತುಂಬೆಯಿಂದ ಪಡೀಲ್‌ ಪಂಪ್‌ಹೌಸ್‌ಗೆ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯಲ್ಲಿ ಅಡ್ಯಾರ್‌ನ ಮಾತಾ ನರ್ಸರಿಯ ಮುಂಭಾಗದಲ್ಲಿ ರವಿವಾರ ರಾತ್ರಿ ನೀರು ಸೋರಿಕೆಯಾಗಿತ್ತು. ಮುಖ್ಯ ಪೈಪ್‌ಲೈನ್‌ನ ಜಾಯಿಂಟ್‌ನಲ್ಲಿ ಬಿರುಕು ಕಾಣಿಸಿಕೊಂಡ ಕಾರಣ ನೀರು ಸೋರಿಕೆಯಾಗುತ್ತಿತ್ತು. ಪಡೀಲ್‌ಗೆ ತುಂಬೆಯಿಂದ ನೀರು ಸರಬರಾಜು ಆಗುವ ಪ್ರಮಾಣದಲ್ಲಿ ರವಿವಾರ ರಾತ್ರಿ ವೇಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಪೈಪ್‌ಲೈನ್‌ ಪರಿಶೀಲಿಸಿದಾಗ ಪಾಲಿಕೆ ಅಧಿಕಾರಿಗಳ ಗಮನಕ್ಕೆ ಬಂದಿದೆ. ತುಂಬೆಯಿಂದ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಮುಖ್ಯ ಕೊಳವೆಯು ಅಡ್ಯಾರ್‌ನ ರಾ.ಹೆ.ಯ ಸಮೀಪ

ಪೈಪ್ ಲೈನ್ ನ ಜಾಯಿಂಟ್ನಲ್ಲಿ ಬಿರುಕು ➤ ನೀರಿನ ಸರಬರಾಜು ಸ್ಥಗಿತ Read More »

ಕರಾವಳಿ
Scroll to Top