newskadaba

ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಅಪಘಾತ

(ನ್ಯೂಸ್ ಕಡಬ) newskadaba.com  ಬೆಳ್ತಂಗಡಿ, ನ.5   ಕೆಎಸ್ ಆರ್ ಟಿಸಿ  ಬಸ್ಸಿನ ಚಾಲಕ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಮಹಿಳೆ ಸೀಟಿನಿಂದ ಎಸೆಯಲ್ಪಟ್ಟು ಬಸ್ಸಿನೊಳಗೆ ಬಿದ್ದು ಗಾಯಗೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಎಂಬಲ್ಲಿ ಸೋಮವಾರದಂದು ನಡೆದಿದೆ. ಗಾಯಾಳು  ಮರಿಯಮ್ಮನವರನ್ನು ಉಜಿರೆ ಎಸ್ ಡಿಎಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ ಎಂದು ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಅಪಘಾತ Read More »

ಕರಾವಳಿ

ಕಳಾರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ➤10 ಲಕ್ಷ ರೂ. ಅನುದಾನ

(ನ್ಯೂಸ್ ಕಡಬ) newskadaba.com ಕಡಬ, ನ.5    ಕಳಾರದ ಅಂಗನವಾಡಿ ಕೇಂದ್ರದ 10ಲಕ್ಷ ಅನುದಾನದಲ್ಲಿ ನೂತನ ಕಟ್ಟಡಕ್ಕೆ ನ. 4ರಂದು ಶಂಕುಸ್ಥಾಪನೆ ನೆರವೇರಿಸಲಾಯಿತು. ಕಳೆದ 30ವರ್ಷಗಳಿಂದ ಹಳೆಯ ಕಟ್ಟಡದಲ್ಲಿ ನಡೆಸುತ್ತಿದ್ದ ಕಳಾರ ಅಂಗನವಾಡಿ ಕಟ್ಟಡಕ್ಕೆ ಎಂಆರ್‌ಪಿಎಲ್ ಕಂಪೆನಿಯಿಂದ 5ಲಕ್ಷ ರೂ.ಹಾಗೂ ಕಡಬ ಗ್ರಾ.ಪಂನ ಎನ್‌ಆರ್‌ಇಜಿಯಿಂದ 5ಲಕ್ಷ ರೂ ಒಟ್ಟು 10ಲಕ್ಷ ಅನುದಾನದಲ್ಲಿ ಸುಸಜ್ಜಿತ ಕಟ್ಟಡ ಕಟ್ಟಲಾಗುತ್ತಿದ್ದು ಗುದ್ದಲಿ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡಿದ ಜಿ.ಪಂ ಸದಸ್ಯ ಪಿ.ಪಿ ವರ್ಗೀಸ್‌ರವರು ಅತೀ ಶೀಘ್ರದಲ್ಲಿ ಉತ್ತಮ ಕಟ್ಟಡ ನಿರ್ಮಾಣವಾಗುವುದರೊಂದಿಗೆ ಈ

ಕಳಾರದಲ್ಲಿ ಸುಸಜ್ಜಿತ ಅಂಗನವಾಡಿ ಕಟ್ಟಡಕ್ಕೆ ಶಂಕುಸ್ಥಾಪನೆ ➤10 ಲಕ್ಷ ರೂ. ಅನುದಾನ Read More »

ಕರಾವಳಿ

ಬಸ್ಸುಗಳೆರಡು ಡಿಕ್ಕಿ ಆಶ್ಚರ್ಯಗೊಂಡ ಪ್ರಯಾಣಿಕರು

(ನ್ಯೂಸ್ ಕಡಬ) newskadaba.com ಕಡಬ, ನ.5    ಕೆಎಸ್‌ಆರ್‌ಟಿಸಿ ಬಸ್ಸು ತಂಗುದಾಣದಲ್ಲಿ ಏಕಾಏಕಿ 2 ಕೆಎಸ್‌ಆರ್‌ಟಿಸಿ ಬಸ್ಸುಗಳ ಡಿಕ್ಕಿಯಿಂದ ಡಮಾರ್ ಎಂಬ ಶಬ್ಧಕ್ಕೆ ಪೇಟೆಯಾದ್ಯಂತ ಸಾರ್ವಜನಿಕರು ಓಡಿ ಬಂದು ಅಚ್ಚರಿಪಟ್ಟ ಘಟನೆ ನ.4ರಂದು ಕಡಬ ಬಸ್ಸು ತಂಗುದಾಣದಲ್ಲಿ ನಡೆಯಿತು. ಕಡಬ -ಉಪ್ಪಿನಂಗಡಿ ಕೆಎಸ್‌ಆರ್‌ಟಿಸಿ ಬಸ್ಸು ಸ್ಯಾಂಡಿನಲ್ಲಿ ನಿಂತಿದ್ದು ಏಕಾಏಕಿ ಮಂಗಳೂರು ಎಕ್ಸ್ ಪ್ರೆಸ್ ಬಸ್ಸ್ ಹಿಂದಿನಿಂದ ಡಿಕ್ಕಿಯಾಗಿ ಭಯಾನಕ ಶಬ್ಧ ಕೇಳಿಸಿದ್ದರೂ ಯಾವುದೇ ಅಪಾಯವಿಲ್ಲದೆ ಪ್ರಯಾಣಿಕರು ಪಾರಾಗುವುದರೊಂದಿಗೆ ದೊಡ್ಡ ಪ್ರಮಾಣದ ಅಪಾಯವೊಂದು ತಪ್ಪಿದಂತಾಗಿದೆ. ಸ್ಥಳದಲ್ಲಿದ್ದ ಕಡಬ ಪೋಲೀಸ್ ಠಾಣೆಯ

ಬಸ್ಸುಗಳೆರಡು ಡಿಕ್ಕಿ ಆಶ್ಚರ್ಯಗೊಂಡ ಪ್ರಯಾಣಿಕರು Read More »

ಕರಾವಳಿ

ಗಡಿನಾಡು ಸಂಸ್ಕೃತಿ ಉತ್ಸವ

(ನ್ಯೂಸ್ ಕಡಬ) newskadaba.com ಮಂಗಳೂರು, ನ.5    ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದೊಂದಿಗೆ ಕರ್ನಾಟಕ ಸಾಮಾಜಿಕ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ನವೆಂಬರ್ 5 ಮಂಗಳವಾರದಿಂದ ನವೆಂಬರ್ 7ರವರೆಗೆ ಮೂರು ದಿನಗಳ ಗಡಿನಾಡು ಸಂಸ್ಕೃತಿ ಉತ್ಸವ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಮಂಗಳೂರು ಪುರಭವನದಲ್ಲಿ ನಡೆಯಲಿದೆ. ಗಡಿನಾಡು ಸಂಸ್ಕೃತಿ ಉತ್ಸವ ಉದ್ಘಾಟನೆಯನ್ನು ನವೆಂಬರ್ 5ರಂದು ಸಂಜೆ 4 ಗಂಟೆಗೆ ದಕ್ಷಿಣ ಕನ್ನಡ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆರ್. ಸೆಲ್ವಮಣಿ ನೆರವೇರಿಸಲಿದ್ದಾರೆ. ಗಡಿನಾಡು ಸಂಸ್ಕೃತಿ ಉತ್ಸವದ

ಗಡಿನಾಡು ಸಂಸ್ಕೃತಿ ಉತ್ಸವ Read More »

ಕರಾವಳಿ

ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ಬಿಡುಗಡೆ

(ನ್ಯೂಸ್ ಕಡಬ) newskadaba.com ಮಂಗಳೂರು, ನ.4  ತುಳು ಚಿತ್ರರಂಗ ಬಹುನಿರೀಕ್ಷೆಯಿಂದ ಕಾಯುತ್ತಿರುವ “ಜಬರದಸ್ತ್ ಶಂಕರ” ಹೊಸ ತುಳು ಸಿನಿಮಾ ನವೆಂಬರ್ 8 ರಂದು ಬಿಡುಗಡೆಯಾಗಲಿದೆ. ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿರುವ “ಜಬರದಸ್ತ್ ಶಂಕರ” ತುಳು ಸಿನಿಮಾ ದಿನಾಂಕವನ್ನು ಚಿತ್ರದ ನಿರ್ದೇಶಕರಾಗಿರುವ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರು ಪ್ರಕಟಿಸಿದ್ದಾರೆ. ಜಲನಿಧಿ ಫಿಲ್ಸ್ ಬ್ಯಾನರಿನಲ್ಲಿ ಇದೇ ಮೊದಲ ಬಾರಿಗೆ ಅನಿಲ್ ಕುಮಾರ್ ಮತ್ತು ಲೊಕೇಶ್ ಕೋಟ್ಯಾನ್ ಚಿತ್ರ ನಿರ್ಮಾಪಕರಾಗುತ್ತಿದ್ದು, ಸಂಗೀತ  ನಿರ್ದೇಶಕ ಕದ್ರಿ ಮಣಿಕಾಂತ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ತುಳು

ಹೊಸ ತುಳು ಸಿನಿಮಾ “ಜಬರದಸ್ತ್ ಶಂಕರ” ಬಿಡುಗಡೆ Read More »

ಕರಾವಳಿ

ಮಾನವೀಯತೆ ಮೆರೆದ ಪೊಲೀಸ್ ಕಾನ್‌ಸ್ಟೇಬಲ್

(ನ್ಯೂಸ್ ಕಡಬ) newskadaba.com ಕಡಬ, ನ.4  ತನ್ನ ಮದುವೆ ದಿನ ಬಡವನ ಮನೆ ನಿರ್ಮಾಣಕ್ಕೆ ಸಹಾಯಧನ ವಿತರಿಸಿ ಪೊಲೀಸ್ ಕಾನ್‌ಸ್ಟೇಬಲ್ ಓರ್ವರು ಮಾನವೀಯತೆ ಮೆರೆದಿದ್ದಾರೆ. ಪುತ್ತೂರು ಸಂಚಾರಿ ಠಾಣೆಯಲ್ಲಿ ಕಾನ್‌ಸ್ಟೇಬಲ್ ಆಗಿರುವ ರಾಮಕುಂಜ ಗ್ರಾಮದ ರಾಮಕುಂಜ ನಿವಾಸಿ ಚೆನ್ನಪ್ಪ ಮೂಲ್ಯರ ಪುತ್ರ ರೋಹಿತ್ ಮತ್ತು ಅಮಿತಾ ಅವರ ಮದುವೆ ಸಮಾರಂಭ ಉಪ್ಪಿನಂಗಡಿ ಶಕ್ತಿ ಸಭಾಭವನದಲ್ಲಿ ಭಾನುವಾರ ನಡೆದಿತ್ತು. ಈ ಸಮಾರಂಭದಲ್ಲಿ ದಂಪತಿಗಳು ಮದುವೆ ಮಂಟಪದಲ್ಲಿ ಕಡಬ ತಾಲೂಕು ಕೇನ್ಯ ಗ್ರಾಮದ ಕಣ್ಣು ಕಾಣಿಸಿದ ತೀರಾ ಬಡತನದಲ್ಲಿರುವ ಲಿಂಗು

ಮಾನವೀಯತೆ ಮೆರೆದ ಪೊಲೀಸ್ ಕಾನ್‌ಸ್ಟೇಬಲ್ Read More »

ಕರಾವಳಿ

ಸಾಮಾನ್ಯ ಸಭೆ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ , ನ.2  ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಆವರಣಗೋಡೆ ಕಟ್ಟಲು ಮುಂದಾಗುವ ಮೂಲಕ ವಾಣಿಜ್ಯ ಸಂಕೀರ್ಣಗಳಿಗೆ ಬಸ್ ನಿಲ್ದಾಣದಿಂದ ನೇರ ರಸ್ತೆ ಸಂಪರ್ಕ ಕಲ್ಪಿಸಲು ಮುಂದಾಗುತ್ತಿದೆ ಎಂಬ ಆಪಾದನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಈ ಬಗ್ಗೆ ಸ್ಪಷ್ಟನೆ ನೀಡಬೇಕೆಂದು ಅಧ್ಯಕ್ಷರಲ್ಲಿ ಆಗ್ರಹಿಸಿದ ಸದಸ್ಯರು, ಯಾವುದೇ ಕಾರಣಕ್ಕೂ ಕಂದಾಯ ಇಲಾಖೆಯ ಜಾಗದಲ್ಲಿ ಗ್ರಾ.ಪಂ. ಕಾಮಗಾರಿ ನಡೆಸಬಾರದೆಂಬ ನಿರ್ಣಯ ಕೈಗೊಂಡ ಘಟನೆ ಉಪ್ಪಿನಂಗಡಿ ಗ್ರಾ.ಪಂ. ಸಾಮಾನ್ಯ ಸಭೆಯಲ್ಲಿ ನಡೆಯಿತು. ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್

ಸಾಮಾನ್ಯ ಸಭೆ Read More »

ಕರಾವಳಿ

ಮಾದಕ ವ್ಯಸನದ ವಿರುದ್ಧ ಜನ ಸಂಚಲನ ➤ಗೋಳಿತ್ತಡಿಯ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ

(ನ್ಯೂಸ್ ಕಡಬ) newskadaba.com ರಾಮಕುಂಜ, ನ.2   ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಮಾದಕ ವ್ಯಸನದ ವಿರುದ್ಧ ಜನ ಸಂಚಲನ ಕಾರ್ಯಕ್ರಮವು ಆರೋಗ್ಯ ಕರ್ನಾಟಕ ಯುವ ಜನ ಜಾಗೃತಿ ಎಸ್.ಕೆ.ಎಸ್.ಎಸ್.ಎಫ್ ಆತೂರು ಕ್ಲಸ್ಟರ್ ವತಿಯಿಂದ ಶುಕ್ರವಾರ ಸಂಜೆ ರಾಮಕುಂಜ ಗ್ರಾಮದ ಗೋಳಿತ್ತಡಿಯಲ್ಲಿ ನಡೆಯಿತು. ಮುಅಲ್ಲಿಮೀನ್ ಆತೂರು ವಲಯದ ಅಧ್ಯಕ್ಷ ಸಯ್ಯಿದ್ ಅನಸ್ ತಂಙಳ್ ಗಂಡಿಬಾಗಿಲು ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕನ್ನಡದ ಆಚರಣೆ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗದೆ ನಿತ್ಯ ನಿರಂತರ ಹಬ್ಬವಾಗಬೇಕು, ಇಂದು ಕನ್ನಡದ ಬಳಕೆ ಎಲ್ಲಾ ಕ್ಷೇತ್ರದಲ್ಲೂ

ಮಾದಕ ವ್ಯಸನದ ವಿರುದ್ಧ ಜನ ಸಂಚಲನ ➤ಗೋಳಿತ್ತಡಿಯ ಎಸ್.ಕೆ.ಎಸ್.ಎಸ್.ಎಫ್ ವತಿಯಿಂದ Read More »

ಕರಾವಳಿ

ಕನ್ನಡ ರಾಜ್ಯೋತ್ಸವ ಆಚರಣೆ

(ನ್ಯೂಸ್ ಕಡಬ) newskadaba.com  ಮಂಗಳೂರು,  ನ.1  ಶಕ್ತಿನಗರದ ಶ್ರೀ ಗೋಪಾಲಕೃಷ್ಣ ಸ್ಕೂಲ್, ಶಕ್ತಿ ರೆಸಿಡೆನ್ಶಿಯಲ್ ಶಾಲೆ ಮತ್ತು ಶಕ್ತಿ ಪ.ಪೂ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿ ಆಚರಿಸಲಾಯಿತು. ಮಂಗಳೂರು ವಿಶ್ವವಿದ್ಯಾಲಯದ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಧನಂಜಯ ಕುಂಬ್ಳೆ ಅವರು ಅತಿಥಿಯಾಗಿದ್ದರು. ಸಂಸ್ಥೆಯ ಆಡಳಿತಾಧಿಕಾರಿ ಬೈಕಾಡಿ ಜನಾರ್ದನ ಆಚಾರ್ ರಾಜ್ಯೋತ್ಸವ ಸಂದೇಶವನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಆಡಳಿತಗಾರ ಕೆ.ಸಿ ನಾಯಕ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಆಡಳಿತ ಮಂಡಳಿ

ಕನ್ನಡ ರಾಜ್ಯೋತ್ಸವ ಆಚರಣೆ Read More »

ಕರಾವಳಿ

ನಾಪತ್ತೆಯಾದ ಬಾಲಕ

(ನ್ಯೂಸ್ ಕಡಬ) newskadaba.com  ಉಪ್ಪಿನಂಗಡಿ,  ನ.1    ಪುತ್ತೂರಿನ ಹಾಸ್ಟೆಲ್ ನಿಂದ ಅಸೌಖ್ಯದ ನಿಮಿತ್ತ ಮನೆಗೆ ಬಂದ ಬಾಲಕ ಹಾಸ್ಟೆಲ್ ಗೆ ಹೋಗುತ್ತೇನೆಂದು ಮನೆಯಿಂದ ಹೊರಟು ಹೋದವನು ಹಾಸ್ಟೇಲ್ ಗೂ ಹೋಗದೇ, ಮನೆಗೂ ಬಾರದೇ ಕಾಣೆಯಾಗಿದ್ದಾನೆ. ಶ್ರೀಮತಿ ಮೀನಾಕ್ಷಿಯವರ ಪುತ್ರ ಮನೋಹರ ಸಿ (14 ವರ್ಷ) ಪುತ್ತೂರು ಕೊಂಬೆಟ್ಟಿನ ಬೋರ್ಡ್ ಹೈಸ್ಕೂಲ್ ನಲ್ಲಿ ಕಲಿಯುತ್ತಾ ಅಲ್ಲೆ ಹಾಸ್ಟೇಲ್ ನಲ್ಲಿ ಉಳಿದುಕೊಂಡಿದ್ದವನು ದಿನಾಂಕ 18.10.2019 ರಂದು ಹಾಸ್ಟೆಲ್ ನಿಂದ ಮನೆಗೆ ಬಂದಿದ್ದು, 31.10.2019 ರಂದು ಹಾಸ್ಟೆಲ್ ಗೆ ಹೋಗುತ್ತೆಂದು

ನಾಪತ್ತೆಯಾದ ಬಾಲಕ Read More »

ಕರಾವಳಿ
Scroll to Top