News Kadaba

ಮನೆಯ ಆವರಣಗೋಡೆ ಕುಸಿತ ಮಹಿಳೆ ಅಪಾಯದಿಂದ ಬಚ್ಚಾವ್!

(ನ್ಯೂಸ್ ಕಡಬ) newskadaba.com.ಈಶ್ವರಮಂಗಲ,ಆ.2: ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮನೆಯ ಆವರಣಗೋಡೆ ಕುಸಿದು ಬಿದ್ದು ಮಹಿಳೆಯೊಬ್ಬರು ಅಪಾಯದಿಂದ ಪಾರಾದ ಘಟನೆ ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆಯಲ್ಲಿ ಭಾನುವಾರ ಬೆಳಿಗ್ಗೆ ಸಂಭವಿಸಿದೆ. ನೆಟ್ಟಣಿಗೆ ಮುಡ್ನೂರು ಗ್ರಾಮದ ಕನೂ೯ರು ಸಮೀಪ ಅಲಬಿಮೂಲೆ ಶೇಕ್ ಇಮಾಮು ಶಾಹೀದ್ ರವರ ಮನೆಯ ಅಡುಗೆ ಕೋಣೆಯ ಮೇಲೆ ಅವರ ಮಗನ ಮನೆಯ ಆವರಣ ಗೋಡೆ ಕುಸಿದು ಬಿದ್ದಿದೆ. ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ಹೊರಗಿನಿಂದ ಸದ್ದು ಕೇಳಿಬಂದ ಹಿನ್ನಲೆ […]

ಮನೆಯ ಆವರಣಗೋಡೆ ಕುಸಿತ ಮಹಿಳೆ ಅಪಾಯದಿಂದ ಬಚ್ಚಾವ್! Read More »

ಕರಾವಳಿ

ಶಿಕ್ಷಣ ಸಚಿವೆ ಕೊರೋನಾಗೆ ಬಲಿ ➤ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು..!!!

(ನ್ಯೂಸ್ ಕಡಬ) newskadaba.com ಉತ್ತರ ಪ್ರದೇಶ: ಆ.02., ಕೊರೋನಾ ಹಿನ್ನಲೆ ಆಸ್ಪತ್ರೆಗೆ ದಾಖಲಾಗಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕ್ಯಾಬಿನೆಟ್ ನ ಶಿಕ್ಷಣ ಸಚಿವೆ ಕಮಲ ದೇವಿ ವರುಣ್  ಚಿಕಿತ್ಸೆಗೆ ಸ್ಪಂದಿಸದೇ ರವಿವಾರ ಮೃತಪಟ್ಟಿದ್ದಾರೆ. ಜುಲೈ 18ರಂದು ಸಚಿವೆ ಕಮಲ ದೇವಿ ವರುಣ್  ಅವರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನಲೆ ಲಕ್ನೋದ ಪಿಜಿಐ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರು ರವಿವಾರ ಆಸ್ಪತ್ರೆಯಲ್ಲಿ ನಿಧನರಾದರು. 62 ವರ್ಷದ ಕಮಲ ದೇವಿ ವರುಣ್ ಉತ್ತರ ಪ್ರದೇಶದ ಕಾನ್ಪೂರದಲ್ಲಿ

ಶಿಕ್ಷಣ ಸಚಿವೆ ಕೊರೋನಾಗೆ ಬಲಿ ➤ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು..!!! Read More »

ಕರಾವಳಿ

ಅಡಿಕೆ ಬೆಳೆಗಾರರಿಗೆ ವರವಾದ ಲಾಕ್​ಡೌನ್ ➤ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಅಡಿಕೆ ಧಾರಣೆ

(ನ್ಯೂಸ್ ಕಡಬ) newskadaba.com ಕಡಬ, ಆ.02: ಲಾಕ್​ಡೌನ್ ನಿಂದ ಭಾಗಶಃ ಎಲ್ಲಾ ಬೆಳೆಗಾರರು ನಷ್ಟ ಅನುಭವಿಸಿದರೆ ಅಡಿಕೆ ಬೆಳೆಗಾರರಿಗೆ ಮಾತ್ರ ಲಾಕ್ ಡೌನ್ ವರದಾನವಾಗಿದೆ. ಲಾಕ್ ಡೌನ್ ನಿಂದಾಗಿ ಹೊರ ದೇಶಗಳಿಂದ ಬರುತ್ತಿದ್ದ ಅಕ್ರಮ ಅಡಿಕೆ ಆಮದಿಗೆ ಕಡಿವಾಣ ಬಿದ್ದಿದ್ದು, ಸ್ಥಳೀಯ ಅಡಿಕೆಗೆ ಭಾರೀ ಬೇಡಿಕೆ ಬಂದಿದೆ. ಅಡಿಕೆಯನ್ನು ಮಾರದೆ, ತಮಲ್ಲಿಯೇ ಉಳಿಸಿಕೊಂಡಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಗಾರದ ಬೆಲೆ ಸಿಕ್ಕಿದೆ. ಅಡಿಕೆ ದರ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಏರಿಕೆ ಕಂಡಿದೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ

ಅಡಿಕೆ ಬೆಳೆಗಾರರಿಗೆ ವರವಾದ ಲಾಕ್​ಡೌನ್ ➤ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಅಡಿಕೆ ಧಾರಣೆ Read More »

ಕರಾವಳಿ, ಕರ್ನಾಟಕ

ಭಾನುವಾರ ಲಾಕ್‌ಡೌನ್‌ ತೆರವು ➤ ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ

(ನ್ಯೂಸ್ ಕಡಬ) newskadaba.com ಕಡಬ, ಆ.02:  ಕೊರೋನಾ ನಿಯಂತ್ರಣದ ಭಾಗವಾಗಿ ಕಳೆದ ಎರಡು ತಿಂಗಳಿನಿಂದ ಪ್ರತಿ ಭಾನುವಾರ ನಗರವನ್ನು ಲಾಕ್‌ಡೌನ್ ಮಾಡಲಾಗುತ್ತಿತ್ತು. ಆದರೆ, ಇದೀಗ ಅನ್‌ಲಾಕ್‌-03 ಪ್ರಕ್ರಿಯೆ ಭಾಗವಾಗಿ ಭಾನುವಾರ ಲಾಕ್‌ಡೌನ್‌ ತೆರವು ಮಾಡಲಾಗಿದ್ದು, ಕಡಬ ,ಸುಬ್ರಹ್ಮಣ್ಯ ವಲಯಗಳಲ್ಲಿ  ವಾಹನಗಳು ಸಂಚಾರ ಆರಂಭವಾಗಿದೆ. ಅಲ್ಲದೆ, ಜನ ಜೀವನವೂ ಎಂದಿನಂತೆ ನಡೆಯುತ್ತಿದೆ. ಭಾನುವಾರದ ಲಾಕ್‌ಡೌನ್ ಕಾರಣದಿಂದಾಗಿ ಬಸ್‌,  ಆಟೋ ಹಾಗೂ ಬೈಕ್‌ಗಳು ರಸ್ತೆಗೆ ಇಳಿಯುತ್ತಿರಲಿಲ್ಲ. ಆದರೆ, ಇಂದಿನಿಂದ ಎಲ್ಲಾ ಮಾರ್ಗಗಳಲ್ಲೂ ಭಾನುವಾರವೂ   ಬಸ್‌ಗಳು ಸಂಚರಿಸಲಿವೆ.  ದ್ವಿಚಕ್ರ ವಾಹನ ಸವಾರರು

ಭಾನುವಾರ ಲಾಕ್‌ಡೌನ್‌ ತೆರವು ➤ ರಸ್ತೆಗಿಳಿದ ವಾಹನಗಳು, ಎಂದಿನಂತೆ ಜನ ಜೀವನ Read More »

ಕರಾವಳಿ, ಕರ್ನಾಟಕ

ಮಾಜಿ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್

(ನ್ಯೂಸ್ ಕಡಬ) newskadaba.com.ಮಂಗಳೂರು ,ಆ.2: ಮಾಜಿ ಪರಿಷತ್ ಸದಸ್ಯ ಐವನ್ ಡಿಸೋಜಾಗೆ ಕೊರೋನಾ ಪಾಸಿಟಿವ್ ಹಿನ್ನೆಲೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಮಾಜಿ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರೆಂಟೈನ್ ಆಗುವ ಮೂಲಕ ಮುನ್ನೆಚ್ಚರಿಕೆ ವಹಿಸಿದ್ದಾರೆ. ಇಂದು ನಿಗದಿಯಾಗಿದ್ದ ಜನಸಾಮಾನ್ಯರ ಭೇಟಿ, ವಿವಿಧ ಕಾರ್ಯಕ್ರಮಗಳು ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜನ ಸಾಮಾನ್ಯರ ಸೇವೆಗೆ ದೂರವಾಣಿ ಮೂಲಕ‌ ಲಭ್ಯವಿರುವುದಾಗಿ ಸಾಮಾಜಿಕ ತಾಣಗಳಲ್ಲಿ ಮಾಹಿತಿ ನೀಡಿದ್ದಾರೆ.ಐವನ್ ಡಿ’ಸೋಜಾ ಜೊತೆಗೆ ಸಂಪರ್ಕದಲ್ಲಿದ್ದವರು ಲಕ್ಷಣ ಕಂಡು ಬಂದಲ್ಲಿ ಪರೀಕ್ಷಿಸಲು ಖಾದರ್ ಮನವಿ ಮಾಡಿಕೊಂಡಿದ್ದಾರೆ.

ಮಾಜಿ ಸಚಿವ ಯು.ಟಿ.ಖಾದರ್ ಸ್ವಯಂ ಕ್ವಾರಂಟೈನ್ Read More »

ಕರಾವಳಿ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ➤ ಬಾಲಕಿಯ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ

(ನ್ಯೂಸ್ ಕಡಬ) newskadaba.com ಮಂಡ್ಯ, ಆ.02:  ಅಪ್ರಾಪ್ತಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಯೋರ್ವ ಪೋಷಕರ ಆಕ್ರೋಶಕ್ಕೆ ಬಲಿಯಾಗಿರುವ ಘಟನೆ ಮಂಡ್ಯ ತಾಲೂಕಿನ ಎಸ್.ಐ.ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಎಸ್.ಐ.ಕೋಡಿಹಳ್ಳಿ ನಿವಾಸಿ ಭೈರ (30) ಪೋಷಕರ ಆಕ್ರೋಶಕ್ಕೆ ಕೊಲೆಯಾದ ವ್ಯಕ್ತಿ.   ಮೂಲತಃ ಎಸ್.ಐ.ಕೋಡಿಹಳ್ಳಿಗ್ರಾಮದ ನಿವಾಸಿಯಾದ ಭೈರ ಅದೇ ಗ್ರಾಮದ 7 ವರ್ಷದ ಬಾಲಕಿಯನ್ನು ಜು.29ರಂದು ಮಧ್ಯಾಹ್ನ ಚಾಕೊಲೇಟ್ ಕೊಡಿಸುವ ನೆಪದಲ್ಲಿ ಗ್ರಾಮದ ಹೊರವಲಯದ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಲೈಂಗಿಕ ದೌಜನ್ಯ ನಡೆಸಿದ್ದ. ತೀವ್ರ ಅಸ್ವಸ್ಥಗೊಂಡಿದ್ದ

ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ➤ ಬಾಲಕಿಯ ಪೋಷಕರ ಆಕ್ರೋಶಕ್ಕೆ ಬಲಿಯಾದ ಆರೋಪಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ಗಂಡು ಮರಿ ಆನೆಗೆ ಜನ್ಮ ನೀಡಿದ ಬನ್ನೇರು ಘಟ್ಟ ಪಾರ್ಕ್ ನ ಹೆಣ್ಣಾನೆ ರೂಪಾ

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.02 : ಖ್ಯಾತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಗೆ ಇಂದು ಖುಷಿಯ ದಿನ. ಉದ್ಯಾನವನದ 12 ವರ್ಷದ ರೂಪಾ ಎಂಬ ಹೆಣ್ಣು ಆನೆ ಗಂಡು ಮರಿ ಆನೆಗೆ ಜನ್ಮ ನೀಡಿದೆ.   ತಾಯಿ ಮತ್ತು ಮರಿ ಆನೆ ಎರಡೂ ಆರೋಗ್ಯವಾಗಿವೆ ಎಂದು ಉದ್ಯಾನವನದ ಕಾರ್ಯಕಾರಿ ನಿರ್ದೇಶಕರು ತಿಳಿಸಿದ್ದಾರೆ. ರೂಪಾಗೆ ಇದು ಎರಡನೇ ಮರಿಯಾಗಿದ್ದು ಈ ಹಿಂದೆ 2016ರಲ್ಲಿ ಹೆಣ್ಣು ಮರಿ ಆನೆಗೆ ಜನ್ಮ ನೀಡಿತ್ತು. ಈ ಮೂಲಕ ಉದ್ಯಾನವನದಲ್ಲಿ ಆನೆಗಳ ಸಂಖ್ಯೆ 24ಕ್ಕೇರಿದೆ.

ಗಂಡು ಮರಿ ಆನೆಗೆ ಜನ್ಮ ನೀಡಿದ ಬನ್ನೇರು ಘಟ್ಟ ಪಾರ್ಕ್ ನ ಹೆಣ್ಣಾನೆ ರೂಪಾ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಐವನ್ ಡಿಸೋಜಾಗೆ ಕೊರೊನಾ ಪಾಸಿಟಿವ್➤ ಕಾಂಗ್ರೆಸ್ ಮುಖಂಡರಿಗೆ ಆತಂಕ

(ನ್ಯೂಸ್ ಕಡಬ) newskadaba.com.ಮಂಗಳೂರು,ಆ.2: ಶುಕ್ರವಾರ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ಮಂಗಳೂರಿಗೆ ಬೇಟಿ ನೀಡಿದ್ದರು ಈ ಸಂಧರ್ಭ ಅವರೊಂದಿಗೆ ಐವನ್ ಡಿಸೋಜಾ ಕೂಡ ಇದ್ದರೂ. ಶನಿವಾರ ಐವನ್ ಡಿಸೋಜಾ ಮತ್ತು ಅವರ ಪತ್ನಿ ಸ್ವಾಬ್ ಟೆಸ್ಟ್ ಮಾಡಿಸಿದ ವೇಳೆ ಕೊರೊನಾ ಪಾಸಿಟಿವ್ ಆಗಿತ್ತು ಇದರಿಂದ ಇದೀಗ ಕಾಂಗ್ರೆಸ್ ಮುಖಂಡರಿಗೆ ಆತಂಕ ಎದುರಾಗಿದೆ. ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ದ.ಕ ಜಿಲ್ಲೆಗೆ ಶುಕ್ರವಾರ ಭೇಟಿ ನೀಡಿದ್ದು, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್, ಮಾಜಿ ಸಚಿವರಾದ ರಮಾನಾಥ ರೈ,

ಐವನ್ ಡಿಸೋಜಾಗೆ ಕೊರೊನಾ ಪಾಸಿಟಿವ್➤ ಕಾಂಗ್ರೆಸ್ ಮುಖಂಡರಿಗೆ ಆತಂಕ Read More »

ಕರಾವಳಿ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರ ದಂಡು

(ನ್ಯೂಸ್ ಕಡಬ) newskadaba.com ಕಡಬ, ಆ.02: ಕೊರೋನಾ ಕರಿಛಾಯೇ ದೇವಾಲಯಗಳಿಗೂ ತಟ್ಟಿದ್ದು, 3ರಿಂದ 4 ತಿಂಗಳುಗಳ ಕಾಲ ಭಕ್ತರಿಗೆ ದೇವಾಲಯದ ಪ್ರವೇಶಕ್ಕೆ ಅವಕಾಶವನ್ನು ಸರ್ಕಾರ ನಿರಾಕರಿಸಿತ್ತು. ಆದರೆ ಇದೀಗಾ ಲಾಕ್ ಡೌನ್ ಹೆಚ್ಚಿನ ಮಟ್ಟದಲ್ಲಿ ಸಡಿಲಗೊಂಡಿದ್ದು, ಪರಿಣಾಮ ಎಲ್ಲಾ ರೀತಿಯ ನಿರ್ಭಂದಗಳನ್ನ ಸಡಿಲಗೊಳಿಸಲಾಗಿದೆ.   ಹಾಗೂ ದೇವಾಲಯಗಳಿಗೂ ಮುಕ್ತ ಪ್ರವೇಶವನ್ನು ಕಲ್ಪಿಸಲಾಗಿದೆ.  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕೂಡ ಭಕ್ತರ ಸಂಖ್ಯೆ ಹೆಚ್ಚಳವಾಗಿದೆ. ಕೋವಿಡ್ 19 ನಿಯಮಗಳಿಗನುಸಾರವಾಗಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಸನ್ನಿದಿಗೆ ತೆರಳಿ ದೇವರ

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಆಗಮಿಸಿದ ಭಕ್ತರ ದಂಡು Read More »

ಕರಾವಳಿ, ಕರ್ನಾಟಕ

ಆಯೋಧ್ಯೆಗೆ ಯೋಗಿ ಭೇಟಿ➤ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಭರದ ಸಿದ್ಧತೆ

(ನ್ಯೂಸ್ ಕಡಬ) newskadaba.com.ಲಖನೌ,ಆ.2: ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಇನ್ನೂ 3 ದಿನ ಬಾಕಿಇರುವಂತೆಯೇ ಸಿದ್ಧತೆ ಚುರುಕುಗೊಂಡಿದೆ., ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಭಾನುವಾರ ಅಯೋಧ್ಯೆಗೆ ಭೇಟಿ ನೀಡಿ ತಯಾರಿ ಪರಿಶೀಲನೆ ನಡೆಸಲಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದು, ಹಲವು ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.ಆದಿತ್ಯನಾಥ ಕಳೆದ ವಾರವೂ ಭೇಟಿ ನೀಡಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದರು. ಕಟ್ಟೆಚ್ಚರ ವಹಿಸುವಂತೆ ಸಿಎಂ ಆದಿತ್ಯನಾಥ ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ. ಯಾವುದೇ ಸಮಾಜ-ವಿರೋಧಿ ಶಕ್ತಿಗಳು ಸಮಸ್ಯೆ ಸೃಷ್ಟಿಸದಂತೆ ಕ್ರಮ ಕೈಗೊಳ್ಳುವಂತೆಯೂ ಸೂಚಿಸಿದ್ದಾರೆ. ಕೋವಿಡ್-19 ನಿಯಮಾವಳಿಗಳನ್ನು

ಆಯೋಧ್ಯೆಗೆ ಯೋಗಿ ಭೇಟಿ➤ಶ್ರೀರಾಮಮಂದಿರ ಶಿಲಾನ್ಯಾಸಕ್ಕೆ ಭರದ ಸಿದ್ಧತೆ Read More »

ರಾಷ್ಟ್ರೀಯ ನ್ಯೂಸ್
Scroll to Top