Mangalore

ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆ ಸಭೆ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ಮೇ 5 ರಂದು ಉಪ್ಪಿನಂಗಡಿ ವಾರದ ಕವಾಯತಿಗೆ ಭೇಟಿ ನೀಡಿದ ಜಿಲ್ಲಾ ಕಮಾಂಡೆಂಟ್ ಡಾ|| ಮುರಳಿ ಮೋಹನ್ ಚೂಂತಾರುರವರು ಕವಾಯತು ವೀಕ್ಷಣೆ ನಡೆಸಿದರು ನಂತರ ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆಗಳ ಸಭೆ ನಡೆಸಿದ ವೇಳೆ ಮಾತನಾಡಿದ ಕಮಾಂಡೆಂಟ್ ಕರ್ನಾಟಕ ಹಾಗೂ ಕೇರಳ ರಾಜ್ಯದ 2 ಹಂತಗಳಲ್ಲಿ ನಡೆದ ಚುನಾವಣಾ ಕರ್ತವ್ಯದಲ್ಲಿ ಭಾಗವಹಿಸಿದ ಘಟಕದ ಎಲ್ಲಾ ಗೃಹರಕ್ಷಕರಿಗೂ ಧನ್ಯವಾದಗಳನ್ನು ಸಲ್ಲಿಸಿದರು ಹಾಗೂ ಇನ್ನು […]

ಉಪ್ಪಿನಂಗಡಿ ಮಾದರಿ ಶಾಲೆಯಲ್ಲಿರುವ ಗೃಹರಕ್ಷಕರ ಘಟಕದ ಕಚೇರಿಯಲ್ಲಿ ಕುಂದು ಕೊರತೆ ಸಭೆ Read More »

ಕರಾವಳಿ

ಬಸವೇಶ್ವರ ಜಯಂತಿ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಇವರ ಆಶ್ರಯದಲ್ಲಿ ಮೇ 7 ರಂದು ತುಳು ಭವನ, ಉರ್ವಸ್ಟೋರ್ ಮಂಗಳೂರು ಇಲ್ಲಿ ಬಸವೇಶ್ವರ ಜಯಂತಿ ಕಾರ್ಯಕ್ರಮ ಪೂರ್ವಾಹ್ನ 10.30 ಗಂಟೆಗೆ ಚುನಾವಣೆ ನೀತಿ ಸಂಹಿತೆಯಿರುವ ಕಾರಣ ಸರಳವಾಗಿ ನಡೆಯಲಿದೆ ಎಂದು ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ, ಇವರ ಪ್ರಕಟಣೆ ತಿಳಿಸಿದೆ.

ಬಸವೇಶ್ವರ ಜಯಂತಿ Read More »

ಕರಾವಳಿ

ನಗರಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಪುರಸಭೆ, ಸುಳ್ಯ ಹಾಗೂ ಮುಲ್ಕಿ ಪಟ್ಟಣ ಪಂಚಾಯತ್‍ಗಳಿಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಚುನಾವಣೆ ನಡೆಯುವ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು 31 ರವರೆಗೆ ಜಾರಿಯಲ್ಲಿರುತ್ತದೆ.ಮೇ 9 ರಂದು ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಲಿದ್ದಾರೆ, ನಾಮಪತ್ರ ಸಲ್ಲಿಸಲು ಕೊನೆಯ ದಿನ ಮೇ 16, ನಾಮಪತ್ರ ಪರಿಶೀಲಿಸುವ ದಿನಾಂಕ ಮೇ 17, ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನಾಂಕ ಮೇ 20,

ನಗರಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ Read More »

ಕರಾವಳಿ

ಗ್ರಾಮ ಪಂಚಾಯತ್ ಉಪಚುನಾವಣೆ

ಮಂಗಳೂರು ಮೇ 6( ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ 38 – ಪಡುಪೆರಾರ ಗ್ರಾಮ ಪಂಚಾಯತ್‍ನ 2-ಮೂಡುಪೆರಾರ, 55-ತಲಪಾಡಿ ಗ್ರಾಮ ಪಂಚಾಯತ್‍ನ 5-ತಲಪಾಡಿ, ಹಾಗೂ ಪುತ್ತೂರು ತಾಲೂಕಿನ 1- ಕಬಕ ಗ್ರಾಮ ಪಂಚಾಯತ್‍ನ 1- ಕಬಕ, 34 ನೆಕ್ಕಿಲಾಡಿ ಗ್ರಾಮ ಪಂಚಾಯತ್‍ನ 2-34 ನೆಕ್ಕಿಲಾಡಿ, 34-5 ನೆಕ್ಕಿಲಾಡಿ ಹಾಗೂ ಬೆಳ್ತಂಗಡಿ ತಾಲೂಕಿನ 28-ಉಜಿರೆ ಗ್ರಾಮ ಪಂಚಾಯತ್‍ನ 4-ಉಜಿರೆ, 11-ಉಜಿರೆ ಮತ್ತು 29 ಕೊಯ್ಯೂರು ಗ್ರಾಮ ಪಂಚಾಯತ್‍ನ 2-ಕೊಯ್ಯೂರು ಕ್ಷೇತ್ರಗಳಿಗೆ ಉಪ

ಗ್ರಾಮ ಪಂಚಾಯತ್ ಉಪಚುನಾವಣೆ Read More »

ಕರಾವಳಿ

ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆ

ಮಂಗಳೂರು ಮೇ 04( ನ್ಯೂಸ್ ಕಡಬ) newskadaba.com,) ;- ವಿಶ್ವ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲು ದಕ್ಷಿಣ ಕನ್ನಡ ಜಿಲ್ಲಾ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಕಾಡ್ಲೂರು ಸತ್ಯನಾರಾಯಣಾಚಾರ್ಯ ಇವರು ಅಧಿಕಾರಿಗಳಿಗೆ ಸಲಹೆ ಮಾಡಿದರು. ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದ ಅವರು, ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಎಲ್ಲರ ಜವಾಬ್ದಾರಿ ಎಂದರು. ಪರಿಸರ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಯುವಸಮುದಾಯಕ್ಕೆ ತಿಳಿಸುವುದರ ಜೊತೆಯಲ್ಲಿ ಒಂದು ಲಕ್ಷಕ್ಕೂ ಅಧಿಕ ಗಿಡ ನೆಡಲು

ವಿಶ್ವ ಪರಿಸರ ದಿನಾಚರಣೆ ಪೂರ್ವಭಾವಿ ಸಭೆ Read More »

ಕರಾವಳಿ

ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಅರ್ಜಿ ಆಹ್ವಾನ

ಮಂಗಳೂರು ಮೇ 04( ನ್ಯೂಸ್ ಕಡಬ) newskadaba.com,);- ಜೆಎಸ್‍ಎಸ್ ವಿಶೇಷಚೇತನರ ಪಾಲಿಟೆಕ್ನಿಕ್ ಮೈಸೂರು, 2019-20ನೇ ಸಾಲಿನ ವಿಶೇಷಚೇತನ ವಿದ್ಯಾರ್ಥಿ /ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಕೋರ್ಸುಗಳ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಲಾಗಿದೆ.ಮೂರು ವರ್ಷದ ಅವಧಿಯ ಡಿಪ್ಲೋಮಾ ಕೋರ್ಸುಗಳು ಇಂತಿವೆ: ಆರ್ಕಿಟೆಕ್ಚರ್ ಕಮರ್ಷಿಯಲ್ ಪ್ರಾಕ್ಟೀಸ್, ಕಂಪ್ಯೂಟರ್ ಸೈನ್ಸ್ಸ್ ಮತ್ತು ಇಂಜಿನಿಯರಿಂಗ್, ಅನುದಾನಿತ ಕೋರ್ಸುಗಳು ಮತ್ತು ಜ್ಯುಯಲರಿ ಡಿಸೈನ್ ಮತ್ತು ಟೆಕ್ನಾಲಜಿ, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್, ಕಂಪ್ಯೂಟರ್ ಅಪ್ಲಕೇಷನ್ಸ್ ಫಾರ್ ದಿ ವಿಷ್ಯುಯಲಿ ಇಂಪೇರ್ಡ್ ಅನುದಾನ ರಹಿತ ಕೋರ್ಸುಗಳು. ಪ್ರವೇಶ ಅರ್ಹತೆ ಕರ್ನಾಟಕ

ವಿಶೇಷಚೇತನ ವಿದ್ಯಾರ್ಥಿ / ವಿದ್ಯಾರ್ಥಿನಿಯರಿಂದ ಡಿಪ್ಲೋಮಾ ಅರ್ಜಿ ಆಹ್ವಾನ Read More »

ಕರಾವಳಿ

ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸ

ಮಂಗಳೂರು ಮೇ 4( ನ್ಯೂಸ್ ಕಡಬ) newskadaba.com,):- ಕರಾರಸಾ.ನಿಗಮ ಮಂಗಳೂರು ವಿಭಾಗದಿಂದ ಮೇ 11 ರಂದು ಒಂದು ದಿನದ ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸವನ್ನು ಮಲ್ಟಿಆಕ್ಸ್‍ಲ್ ಸಾರಿಗೆಯಲ್ಲಿ ಓರ್ವ ಪ್ರಯಾಣಿಕರಿಗೆ ತಲಾ ರೂ. 4000/-ರಂತೆ ಪ್ರಯಾಣದರ ವಿಧಿಸಿ ಸಾರಿಗೆ ಕಾರ್ಯಾಚರಿಸಲು ಯೋಜಿಸಲಾಗಿದೆ. ಮಂಗಳೂರಿನಿಂದ ಹೊರಡುವ ಪ್ಯಾಕೇಜ್ ಪ್ರವಾಸವು ನಿಗಮದ ಸಾರಿಗೆಯಲ್ಲಿ ಪ್ರಯಾಣದೊಂದಿಗೆ ಹೊಟೇಲ್‍ನಲ್ಲಿ ಫ್ರೆಶ್‍ಅಪ್, ಉಪಹಾರ, ಊಟ, ಪ್ರತಿ ಟಿಕೇಟಿಗೆ 2 ಲಡ್ಡು, ತಿರುಮಲದಲ್ಲಿ ಶೀಘ್ರ ದರ್ಶನ, ಸ್ಥಳೀಯ ಪದ್ಮಾವತಿ ದೇವಾಲಯ ದರ್ಶನ ಒಳಗೊಂಡಿರುತ್ತದೆ. ಪ್ಯಾಕೇಜ್ ಪ್ರವಾಸಕ್ಕೆ ತಿತಿತಿ.ಞsಡಿಣಛಿ.iಟಿ

ಮಂಗಳೂರು-ತಿರುಪತಿ ಪ್ಯಾಕೇಜ್ ಪ್ರವಾಸ Read More »

ಕರಾವಳಿ

ಕೆ.ಜಿ.ಟಿ.ಟಿ.ಐ.ನಲ್ಲಿ ಕೌಶಲ್ಯ ಅಭಿವೃಧ್ದಿ ತರಬೇತಿ

ಮಂಗಳೂರು ಮೇ 4( ನ್ಯೂಸ್ ಕಡಬ) newskadaba.com,):- ಕೌಶಲ್ಯ ಅಭಿವೃಧ್ದಿ ತರಬೇತಿ ಕಾರ್ಯಕ್ರಮದಡಿ ಸಿಸ್ಕೊ ಐ.ಟಿ. ಎಸೆನ್‍ಶಿಯಲ್ಸ್, ಟ್ಯಾಲಿ ಇಖP 9, ಅಡ್ವಾನ್ಸ್‍ಡ್ ವೆಲ್ಡಿಂಗ್ ಟೆಕ್ನೋಲಜಿ, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಅಲ್ಪಾವದಿ ಕೋರ್ಸ್‍ಗಳಲ್ಲಿ ಕೌಶಲ್ಯ್ದ ತರಬೇತಿಯನ್ನು ಮಂಗಳೂರಿನ ಕರ್ನಾಟಕ ಜರ್ಮನ್ ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ (ಕೆ.ಜಿ.ಟಿ.ಟಿ.ಐ) ಇಲ್ಲಿ ನೀಡಲಾಗುತ್ತಿದೆ.ಆಸಕ್ತ ಅರ್ಹ ಅಭ್ಯರ್ಥಿಗಳು ಕೂಡಲೆ ತರಬೇತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡದ ಯುವಕ / ಯುವತಿಯರಿಗೆ ಪ್ರವೇಶ ಉಚಿತವಾಗಿರುತ್ತದೆ. ಅರ್ಜಿಗಳನ್ನು ನಿಗಧಿತ ನಮೂನೆಯಲ್ಲಿ

ಕೆ.ಜಿ.ಟಿ.ಟಿ.ಐ.ನಲ್ಲಿ ಕೌಶಲ್ಯ ಅಭಿವೃಧ್ದಿ ತರಬೇತಿ Read More »

ಕರಾವಳಿ

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಕಲ ನೆರವು- ರಾಜ್‍ಕುಮಾರ್ ಖತ್ರಿ

( ನ್ಯೂಸ್ ಕಡಬ) newskadaba.com ಮಂಗಳೂರು, ಮೇ.6 ಕರಾವಳಿ ಜಿಲ್ಲೆಗಳಲ್ಲಿ ನೈಋತ್ಯ ಮುಂಗಾರಿನ ಸಂದರ್ಭದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದರೆ ಅಂತಹ ಪರಿಸ್ಥಿತಿಯನ್ನು ಎದುರಿಸಲು ಎಲ್ಲ ರೀತಿಯ ನೆರವನ್ನು ನೀಡಲಾಗುವುದು ಎಂದು ಕಂದಾಯ ಇಲಾಖೆ ಮತ್ತು ವಿಪತ್ತು ನಿರ್ವಹಣಾ ವಿಭಾಗದ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜ್‍ಕುಮಾರ್ ಖತ್ರಿ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಆಯೋಜಿಸಲಾದ ನೈಋತ್ಯ ಮುಂಗಾರಿನ ಸನ್ನದ್ಧತೆ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಕಳೆದ ಸಾಲಿನಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪಗಳ ಅನುಭವದಿಂದಾಗಿ ಈ ಸಾಲಿನಲ್ಲಿ ಜಿಲ್ಲಾಡಳಿತ ಸಾಕಷ್ಟು

ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಸಕಲ ನೆರವು- ರಾಜ್‍ಕುಮಾರ್ ಖತ್ರಿ Read More »

ಕರ್ನಾಟಕ

ಮೊರಾರ್ಜಿ ವಸತಿ ಶಾಲೆಗಳ ಪ್ರವೇಶಾತಿ ಕೌನ್ಸಿಲಿಂಗ್

ಮಂಗಳೂರು ಮೇ 3( ನ್ಯೂಸ್ ಕಡಬ) newskadaba.com,) :- ದಕ್ಷಿಣ ಕನ್ನಡ ಜಿಲ್ಲೆಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖಾ ಅಧೀನದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಂಗಳೂರು ತಾಲೂಕಿನ ಕಮ್ಮಾಜೆ, ಕಲ್ಲಬೆಟ್ಟು, ಗುರುಪುರ, ನೀರುಮಾರ್ಗ ಬೆಳ್ತಂಗಡಿ ತಾಲೂಕಿನ ಮಚ್ಚಿನ, ಮುಂಡಾಜೆ, ಹೊಸಂಗಡಿ ಬಂಟ್ವಾಳ ತಾಲೂಕಿನ ವಗ್ಗ, ಪುತ್ತೂರು ತಾಲೂಕಿನ ಬಲ್ನಾಡು, ಉಪ್ಪಿನಂಗಡಿ ಹಾಗೂ ಸುಳ್ಯ ತಾಲೂಕಿನ ಪಂಜ ಮೊರಾರ್ಜಿ ದೇಸಾಯಿ/ಡಾ.ಬಿ.ಆರ್.ಅಂಬೇಡ್ಕರ್/ಇಂದಿರಾ ಗಾಂಧಿ ವಸತಿ ಶಾಲೆಗಳ 6ನೇ ತರಗತಿ ಪ್ರವೇಶಕ್ಕಾಗಿ ಜಿಲ್ಲಾ ಮಟ್ಟದ ಕೌನ್ಸಿಲಿಂಗ್ ಪ್ರಕ್ರಿಯೆ ಮೇ

ಮೊರಾರ್ಜಿ ವಸತಿ ಶಾಲೆಗಳ ಪ್ರವೇಶಾತಿ ಕೌನ್ಸಿಲಿಂಗ್ Read More »

ಕರಾವಳಿ
Scroll to Top