Mangalore

ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಮಹಿಳಾ ಘಟಕಕ್ಕೆ ಸಾರಥಿ ಇಲ್ಲದೆ 2018ರ ವಿಧಾನಸಭೆ, 2019ರ ಲೋಕಸಭೆ ಚುನಾವಣೆಯ ರಥವನ್ನು ಜೆಡಿಎಸ್ ಎಳೆದದ್ದು ಇತಿಹಾಸ. ಸುಮಾರು 18 ತಿಂಗಳ ತರುವಾಯ ಜೆಡಿಎಸ್ ಮಹಿಳಾ ಘಟಕಕ್ಕೆ ಸಾರಥಿ ನೇಮಕ ಮಾಡಲಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಮೀಸಲಾತಿ ಕಲ್ಪಿಸಿಕೊಟ್ಟ ಜೆಡಿಎಸ್ ಮಹಿಳಾ ಘಟಕಕ್ಕೆ 18 ತಿಂಗಳಿಂದ ಅಧ್ಯಕ್ಷರೇ ಇರಲಿಲ್ಲ. ಮಧ್ಯಂತರ ಚುನಾವಣೆ ಗುಮ್ಮಹರಿಬಿಟ್ಟ ದೇವೇಗೌಡರು ಈಗ ರಾಜಕೀಯ ಚಟುವಟಿಕೆಯ ಕೇಂದ್ರ ಬಿಂದುವಾಗಿದ್ದಾರೆ. ತತ್ಪರಿಣಾಮವಾಗಿ ಜೆಡಿಎಸ್ ಎಲ್ಲ ಘಟಕಗಳನ್ನು ಪುನಾರಚಿಸುತ್ತಿದ್ದು. ಒಂದೂವರೆ […]

ಸಾರಥಿ ಇಲ್ಲದ ಜೆಡಿಎಸ್ ಮಹಿಳಾ ಘಟಕಕ್ಕೆ ➤ ರಾಜ್ಯಾಧ್ಯಕ್ಷರಾಗಿ ಲೀಲಾದೇವಿ ಆರ್.ಪ್ರಸಾದ್ ಆಯ್ಕೆ Read More »

ಕರ್ನಾಟಕ

ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು

(ನ್ಯೂಸ್ ಕಡಬ) newskadaba.com ಬೆಂಗಳೂರು, ಜುಲೈ.1.ಭಾನುವಾರ ಜೆ.ಪಿ ಭವನದಲ್ಲಿ ನಡೆದ ಬೆಂಗಳೂರು ನಗರ ಜೆಡಿಎಸ್ ಪದಾಧಿಕಾರಿಗಳ ಸಭೆಯಲ್ಲಿ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಎದುರೇ ಆಕ್ರೋಶ ಹೊರಹಾಕಿದ ಕಾರ್ಯಕರ್ತರು, ಸರ್ಕಾರ ಬಂದು ವರ್ಷವಾಗಿದೆ. ನಿಗಮ-ಮಂಡಳಿ ಸ್ಥಾನ ಏಕೆ ಭರ್ತಿ ಮಾಡಿಲ್ಲ? ಶಾಸಕರಿಗೆ ನಿಗಮ-ಮಂಡಳಿ ಕೊಡುತ್ತಿದ್ದೀರಿ. ನಾವು ಪಕ್ಷಕ್ಕೆ ದುಡಿದಿಲ್ಲವೇ? ನಮಗೂ ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕೆಲವರು ಒತ್ತಾಯಿಸಿದ್ದಕ್ಕೆ ದೇವೇಗೌಡರು ಒಂದು ಕ್ಷಣ ತಬ್ಬಿಬ್ಬಾದರು. ಕಾರ್ಯಕರ್ತರ ಆಕ್ರೋಶಕ್ಕೆ ಉತ್ತರಿಸಲಾಗದೆ ಸುಮ್ಮನೆ ಕುಳಿತರು. ಕೊನೆಗೆ ಪದಾಧಿಕಾರಿಗಳು ಹಾಗೂ

ನಿಗಮ-ಮಂಡಳಿ ಸ್ಥಾನ ಕೊಡಿ ಎಂದು ಕಾರ್ಯಕರ್ತರ ಒತ್ತಾಯ ➤ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರು ತಬ್ಬಿಬ್ಬು Read More »

ಕರ್ನಾಟಕ

ಏಲಕ್ಕಿ ಕೆ.ಜಿ ಗೆ 2,900 ರೂ.➤ ಬೆಳೆಗಾರರ ಮೊಗದಲ್ಲಿ ಮಂದಹಾಸ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಸಾಂಬಾರ ರಾಣಿ ಮೊದಲ ದರ್ಜೆಯ ಏಲಕ್ಕಿ ಕೆ.ಜಿ.ಗೆ 2900 ರೂ.ದಾಟಿದ್ದು, ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿದೆ.ಗ್ವಾಟೆಮಾಲಾ ಪ್ರಪಂಚದಲ್ಲಿಯೇ ಅತಿ ಹೆಚ್ಚು ಪ್ರಮಾಣದಲ್ಲಿ ಏಲಕ್ಕಿ ಬೆಳೆಯುವ ದೇಶ. ಅಲ್ಲಿ ಪ್ರಾಕೃತಿಕ ವಿಕೋಪದಿಂದ ಉತ್ಪಾದನೆ ಕುಸಿದಿದೆ. ಕಳೆದ ವರ್ಷದ ಪ್ರವಾಹದಿಂದಾಗಿ ಬೆಳೆ ನಾಶ, ಧಾರಣೆ ಏರಿಕೆಗೆ ಕಾರಣ.ಏಲಕ್ಕಿ ನೆರಳನ್ನು ಬಹುವಾಗಿ ಬಯಸುವ ಬೆಳೆ. ಉಷ್ಣತೆ ಹೆಚ್ಚಿದಂತೆ ಬೆಳೆ ನಾಶದ ಹಂತ ತಲುಪುತ್ತದೆ. ದೇಶೀಯವಾಗಿ ಕೇರಳದಲ್ಲಿ ಇಡುಕ್ಕಿ, ವಯನಾಡಿನಲ್ಲಿ ಗರಿಷ್ಠ ಪ್ರಮಾಣದಲ್ಲಿ ಏಲಕ್ಕಿ ಬೆಳೆಸಲಾಗುತ್ತದೆ. ಹಿಂದೆ

ಏಲಕ್ಕಿ ಕೆ.ಜಿ ಗೆ 2,900 ರೂ.➤ ಬೆಳೆಗಾರರ ಮೊಗದಲ್ಲಿ ಮಂದಹಾಸ Read More »

ಕರಾವಳಿ

ವಿಚಿತ್ರವೆನಿಸಿದೆ ಶಿವಮೊಗ್ಗ ಮೂಲದ ಕುಮಾರ್ ಅವರ ಆಹಾರ ಪದ್ಧತಿ!

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಶಬರಿಮಲೆ ಅಯ್ಯಪ್ಪ ವ್ರತಧಾರಿ ಮಧ್ಯವಯಸ್ಕ ವ್ಯಕ್ತಿ ಆಯಿಲ್, ಪೇಪರ್‌ ಹಿಡಿದು ಇದೇ ನನ್ನ ಆಹಾರ ಎಂದೆನ್ನುತ್ತಿದ್ದ ದೃಶ್ಯ ಜನರಲ್ಲಿ ಅಚ್ಚರಿ ಮೂಡಿಸಿತು. ಈ ದೃಶ್ಯ ಕಂಡುಬಂದದ್ದು ಸುಳ್ಯ ರಿಕ್ಷಾ ನಿಲ್ದಾಣದಲ್ಲಿ. ದಾಹಕ್ಕೆ ನೀರಿನ ಬದಲು ಆಯಿಲ್, ಹಸಿವಾದರೆ ಸುಟ್ಟ ಪೇಪರ್‌ ಸೇವಿಸುವ ಶಿವಮೊಗ್ಗ ಮೂಲದ ಕುಮಾರ್‌ ಅವರು ತನ್ನ ಆಹಾರ ಸೇವನೆಯ ಕರಾಮತ್ತು ಪ್ರದರ್ಶಿಸಿ ಅಲ್ಲಿದ್ದವರನ್ನು ಅಚ್ಚರಿಮೂಡಿಸಿತು.ಬಾಲಕನಾಗಿದ್ದಾಗಲೇ ಅವರನ್ನು ಶಿವಮೊಗ್ಗದಲ್ಲಿ ಹೆತ್ತವರು ಬಿಟ್ಟು ಹೋಗಿದ್ದರಂತೆ. ತಿರುಗಾಡುತ್ತ, ಅಲ್ಲಲ್ಲಿ ಕೆಲಸ ಮಾಡುತ್ತ ಕುಮಾರ್‌

ವಿಚಿತ್ರವೆನಿಸಿದೆ ಶಿವಮೊಗ್ಗ ಮೂಲದ ಕುಮಾರ್ ಅವರ ಆಹಾರ ಪದ್ಧತಿ! Read More »

ಕರಾವಳಿ

ಎಂಟು ಲಕ್ಷಕ್ಕೂ ಅಧಿಕ ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ ➤ ಡಾ. ಎ.ಟಿ. ರಾಮಚಂದ್ರ ನಾಯ್ಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ದಕ್ಷಿಣ ಕನ್ನಡ ಜಿಲ್ಲೆಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ಇತ್ತೀಚೆಗೆ ತಂಬಾಕು ಮುಕ್ತ ದಿನ ಆಚರಿಸಲಾಯಿತು. ಈ ವಿಶೇಷ ದಿನದ ಸಂದರ್ಭದಲ್ಲಿ ತಂಬಾಕು ಸೇವನೆಯನ್ನು ಸಂಪೂರ್ಣವಾಗಿ ಕಡಿತಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರದಿಂದ ನಿರ್ದೇಶಿಸಲ್ಪಟ್ಟ ಪ್ರತಿಜ್ಞೆಯನ್ನು ಅಧ್ಯಕ್ಷತೆ ವಹಿಸಿ ಮಾತನಾಡಿದ ಮೀನುಗಾರಿಕಾ ಕಾಲೇಜಿನ ಡೀನ್ ಡಾ ಸೆಂಥಿಲ್ ವೆಲ್ ಎ. ಅವರು ಕೇಂದ್ರದ ಮತ್ತು ಮೀನುಗಾರಿಕಾ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ನೆರವೇರಿಸಿದರು. ಕೃಷಿ ವಿಜ್ಞಾನ ಕೇಂದ್ರದ ಪ್ರಧಾನ ವಿಜ್ಞಾನಿ ಮತ್ತು

ಎಂಟು ಲಕ್ಷಕ್ಕೂ ಅಧಿಕ ಪರೋಕ್ಷ ಧೂಮಪಾನಿಗಳು ಸಾವನ್ನಪ್ಪುತ್ತಿದ್ದಾರೆ ➤ ಡಾ. ಎ.ಟಿ. ರಾಮಚಂದ್ರ ನಾಯ್ಕ Read More »

ಕರಾವಳಿ

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ಮಂಗಳೂರು ➤ ಗುತ್ತಿಗೆ ಆಧಾರದಲ್ಲಿ ವಾಹನಗಳ ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ಮಂಗಳೂರು ಇಲ್ಲಿ 2019-20ನೇ ಸಾಲಿನಲ್ಲಿ ವಯಸ್ಕರ ಶಿಕ್ಷಣ ಕಾರ್ಯಕ್ರಮಕ್ಕ್ಕೆ ಸಂಬಂಧಿಸಿದಂತೆ ಅಧಿಕೃತ ಸರಕಾರಿ ಕೆಲಸಕ್ಕಾಗಿ ಗುತ್ತಿಗೆ ಆಧಾರದಲ್ಲಿ ವಾಹನವನ್ನು ಒದಗಿಸುವ ಕುರಿತು ಟೆಂಡರ್ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಜುಲೈ 2 ರಿಂದ 8 ರ ವರೆಗೆ ಕಚೇರಿ ಸಮಯದಲ್ಲಿ ವಿತರಿಸಲಾಗುವುದು. ತುಂಬಿಸಿದ ಅರ್ಜಿಗಳನ್ನು ಪಡೆಯಲು ಕೊನೆ ದಿನ ಜುಲೈ 10 ರಂದು ಸಂಜೆ 5 ಗಂಟೆ.ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ

ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಕಚೇರಿ ಜಿಲ್ಲಾ ಪಂಚಾಯತ್ ಮಂಗಳೂರು ➤ ಗುತ್ತಿಗೆ ಆಧಾರದಲ್ಲಿ ವಾಹನಗಳ ಟೆಂಡರ್ ಆಹ್ವಾನ Read More »

ಕರಾವಳಿ

ಹಜ್ಜಾಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು ಲಸಿಕೆಗೆ ಚಾಲನೆ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಸರಕಾರದ ಹಜ್ ಸಮಿತಿ ವತಿಯಿಂದ ಪವಿತ್ರ ಹಜ್‍ಗೆ ತೆರಳುವ ದಕ್ಷಿಣ ಕನ್ನಡ ಜಿಲ್ಲೆಯ 683 ಹಜ್ಜಾಜ್‍ ಯಾತ್ರಾರ್ಥಿಗಳಿಗೆ ಸರಕಾರದ ವತಿಯಿಂದ ನೀಡಲಾಗುವ ಚುಚ್ಚುಮದ್ದು ಹಾಗೂ ಲಸಿಕೆ ಕಾರ್ಯಕ್ರಮಕ್ಕೆ ಶನಿವಾರ ಮಂಗಳೂರು ಕೊಡಿಯಾಲ್ ಬೈಲ್ ಯೇನಪೋಯ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಯಿತು. ಮಂಗಳೂರು ಹಜ್ ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಯೇನಪೋಯ ಮಹಮ್ಮದ್ ಕುಂಞ ಅವರು ಅಧ್ಯಕ್ಷತೆ ವಹಿಸಿದರು. ಬಂದರು ಕೇಂದ್ರ ಜುಮಾ ಮಸೀದಿ ಖತೀಬರಾದ ಸದಕತುಲ್ಲಾ ಫೈಝಿ ದುಆ ಪ್ರಾರ್ಥನೆ ನೆರವೇರಿಸಿದರು. ಹಜ್‍ಗೆ ತೆರಳುವ

ಹಜ್ಜಾಜ್ ಯಾತ್ರಾರ್ಥಿಗಳಿಗೆ ಚುಚ್ಚುಮದ್ದು ಲಸಿಕೆಗೆ ಚಾಲನೆ Read More »

ಕರಾವಳಿ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ನಡ್ಸಾಲು ಗ್ರಾಮದ ಹೊಸದಾಗಿ ನಿರ್ಮಿತವಾಗಿರುವ ಸಾಚಿ ರಾಯಲ್ ಅಪಾರ್ಟ್‍ಮೆಂಟ್‍ಗೆ ಕೇಂದ್ರ ಸ್ಥಿರಾಸ್ತಿ ಮಾರುಕಟ್ಟೆ ದರ ನಿರ್ಧರಣಾ ಸಮಿತಿಯು(c.v.c) ರೂ 22000 ದರ ನಿಗದಿ ಪಡಿಸಲು ತಾತ್ವಿಕ ಅನುಮೋದನೆ ನೀಡಿದೆ. ಇದಕ್ಕೆ  c.v.c  ನಿಯಮಾವಳಿ 2003 ರ ಅನ್ವಯ ಸಾರ್ವಜನಿಕರ ಆಕ್ಷೇಪಣೆಗಳ ಪರಿಶೀಲನೆಗಾಗಿ ತಾಲೂಕು ಕಚೇರಿ ಮಂಗಳೂರು, ಮಹಾನಗರಪಾಲಿಕೆ ಸುರತ್ಕಲ್, ವಿಶೇಷ ತಹಶೀಲ್ದಾರರ ಕಚೇರಿ ಮುಲ್ಕಿ, ಉಪನೋಂದಣಿ ಕಚೇರಿ ಮುಲ್ಕಿ, ಕಂದಾಯ ನೀರೀಕ್ಷಕರ ಕಚೇರಿ

ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಉಪನೋಂದಣಾ ಕಚೇರಿ ➤ ಆಕ್ಷೇಪಣೆಗೆ ಅವಕಾಶ Read More »

ಕರಾವಳಿ

ವೃತ್ತಿರಂಗಭೂಮಿಗಾಗಿ ಶಿಷ್ಯವೇತನ ➤ ಮೌಖಿಕ ಸಂದರ್ಶನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ವೃತ್ತಿರಂಗಭೂಮಿಯಲ್ಲಿ ತರಬೇತಿ ಪಡೆದು, ಅದೇ ಮಾಧ್ಯಮದಲ್ಲಿ ತೊಡಗಿಸಿಕೊಳ್ಳಲು ಆಸಕ್ತರಾಗಿರುವ ಯುವಕ/ಯುವತಿಯರಿಂದ ಶಿಷ್ಯವೇತನಕ್ಕಾಗಿ ಮೌಖಿಕ ಸಂದರ್ಶನ ನಡೆಸಲಾಗುತ್ತದೆ. ಶಿಷ್ಯವೇತನವನ್ನು 6 ತಿಂಗಳಿಗೆ ನೀಡಲಾಗುತ್ತದೆ. ಜುಲೈ 11 ರಂದು ಬೆಳಿಗ್ಗೆ 10.30 ರಿಂದ ಧಾರವಾಡದ ರಂಗಾಯಣದ ಆವರಣದಲ್ಲಿ ಮೌಖಿಕ ಸಂದರ್ಶನ ಏರ್ಪಡಿಸಿದೆ. ಆಸಕ್ತ ಯುವಕ ಯುವತಿಯರು ನೇರವಾಗಿ ಸಂದರ್ಶನದಲ್ಲಿ ಭಾಗವಹಿಸಬಹುದು. ಒಟ್ಟು 15 ಜನ ಯುವಕ/ಯುವತಿಯರಿಗೆ ರೂ. 10,000/-ಗಳನ್ನು 6 ತಿಂಗಳುಗಳ ಕಾಲ ಶಿಷ್ಯವೇತನವಾಗಿ ನೀಡಲಾಗುತ್ತದೆ. ಆಯ್ಕೆಯಾದ ಅಭ್ಯರ್ಥಿಗಳು 6 ತಿಂಗಳುಗಳ ಕಾಲ ಅಕಾಡೆಮಿ

ವೃತ್ತಿರಂಗಭೂಮಿಗಾಗಿ ಶಿಷ್ಯವೇತನ ➤ ಮೌಖಿಕ ಸಂದರ್ಶನ Read More »

ಕರಾವಳಿ

ಮಂಗಳೂರು ಮಹಾನಗರ ಪಾಲಿಕೆ ➤ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜುಲೈ.1.ಮಂಗಳೂರು ಮಹಾನಗರ ಪಾಲಿಕೆಯ ನಗರ ಬಡತನ ನಿರ್ಮೂಲನಾ ಕೋಶದಲ್ಲಿ 24.10% ಪ.ಜಾ/ಪಂ ಕಲ್ಯಾಣ ಕಾರ್ಯಕ್ರಮ, 7.25% ಇತರೆ ಬಡಜನರ ಕಲ್ಯಾಣ ಕಾರ್ಯಕ್ರಮ ಮತ್ತು 5% ವಿಕಲ ಚೇತನರ ಕಲ್ಯಾಣ ಕಾರ್ಯಕ್ರಮದಡಿ 2019-20 ನೇ ಸಾಲಿನಲ್ಲಿ ವ್ಯಕ್ತಿ ಸಂಬಂಧಿಸಿದ ಕಾರ್ಯಕ್ರಮಗಳ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಸವಲತ್ತುಗಳನ್ನು ಪಡೆಯಲು ಕುಟುಂಬದ ವಾರ್ಷಿಕ ಆದಾಯ ರೂ 2.50.ಲಕ್ಷ ಮೀರಿರಬಾರದು, ಇತರೆ ಸಾಮಾನ್ಯ ಸೌಲಭ್ಯ ಪಡೆಯಲು ಕುಟುಂಬದ ವಾರ್ಷಿಕ ಆದಾಯ

ಮಂಗಳೂರು ಮಹಾನಗರ ಪಾಲಿಕೆ ➤ ವಿವಿಧ ಸೌಲಭ್ಯ ಪಡೆಯಲು ಅರ್ಜಿ ಆಹ್ವಾನ Read More »

ಕರಾವಳಿ
Scroll to Top