Kadaba News

ಕರಾವಳಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 2.900 ಕೋಟಿ ರೂ ➤ ಸಚಿವ ಜೆ.ಸಿ. ಮಾಧುಸ್ವಾಮಿ

(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಪಶ್ಚಿಮವಾಹಿನಿ ಯೋಜನೆಯಲ್ಲಿ ಕರಾವಳಿಯ ಮೂರು ಜಿಲ್ಲೆಯಲ್ಲಿ ಸುಮಾರು 2.900 ಕೋಟಿ ರೂ. ವೆಚ್ಚದಲ್ಲಿ ತಲಾ 400 ಕಿಂಡಿ ಅಣೆಕಟ್ಟು ನಿರ್ಮಾಣ ಮಾಡುವ ಮೂಲಕ ಉಪ್ಪು ನೀರಿನಿಂದ ಕಂಗೆಟ್ಟ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಅಂತರ್ಜಲ ವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಕಾನೂನು, ಸಂಸದೀಯ ಹಾಗೂ ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದ್ದಾರೆ. ಕರಾವಳಿ ಜಿಲ್ಲೆಗಳಲ್ಲಿ ಪಶ್ಚಿಮ ಘಟ್ಟದ ನದಿಗಳಿಗೆ ಅಡ್ಡಲಾಗಿ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸುವ ಚಿಂತನೆ ನಡೆಸಿದ್ದು, […]

ಕರಾವಳಿಯಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 2.900 ಕೋಟಿ ರೂ ➤ ಸಚಿವ ಜೆ.ಸಿ. ಮಾಧುಸ್ವಾಮಿ Read More »

ಕರಾವಳಿ

ವೇಣೂರು: ಯುವಕ ಆತ್ಮಹತ್ಯೆ

(ನ್ಯೂಸ್ ಕಡಬ) newskadaba.com ವೇಣೂರು ನ. 25: ಬಜಿರೆ ಬೆಳ್ಳಿಬೆಟ್ಟು ನಿವಾಸಿಯೋರ್ವರು ಅನಾರೋಗ್ಯದಿಂದ ಬಳಲುತ್ತಿದ್ದು, ಇವರು ಮನೆಯ ಕೋಣೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಳೆದ ದಿನ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ರಾಜೇಶ್(27) ಎಂದು ಗುರುತಿಸಲಾಗಿದೆ.     ಇತ್ತೀಚಿನಿಂದ ಎರಡೂ ಕಾಲು ಬಲಹೀನವಾಗಿ ನಡೆಯಲು ಕಷ್ಟವಾಗಿತ್ತು. ಅದಲ್ಲದೇ ಇವರು ಮೇಸ್ತ್ರಿ ಕೆಲಸ ಮಾಡಿಕೊಂಡಿದ್ದ ಇವರಿಗೆ ಕಳೆದೆರಡು ತಿಂಗಳಿನಿಂದ ತಲೆಯ ಎಡ ಭಾಗದಲ್ಲಿ ಗುಳ್ಳೆಯೊಂದು ಎದ್ದಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಮನೆಮಂದಿ ಮಲಗಿರುವ ವೇಳೆ ಈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವೇಣೂರು: ಯುವಕ ಆತ್ಮಹತ್ಯೆ Read More »

ಕರಾವಳಿ

ಸುಬ್ರಹ್ಮಣ್ಯ :ಅಶಕ್ತ ಕುಟುಂಬದ ಐದರ ಬಾಲೆಯ ಹುಟ್ಟುಹಬ್ಬ ಆಚರಿಸಿದ ಕುಕ್ಕೆಯ ‘ಪೈ’ ದಂಪತಿ

(ನ್ಯೂಸ್ ಕಡಬ) newskadaba.com ಸುಬ್ರಹ್ಮಣ್ಯ ನ. 25: ದೈಹಿಕ ನ್ಯೂನತೆಯಿಂದ ಬಳಲುತ್ತಿದ್ದ ಬಡ ದಂಪತಿಯ ಐದರ ಹರೆಯ ಪುತ್ರಿ ಪ್ರತೀಕ್ಷಾಳ ಹುಟ್ಟು ಹಬ್ಬವನ್ನು ಕುಕ್ಕೆ ಸುಬ್ರಹ್ಮಣ್ಯ ಮಹಾವಿದ್ಯಾಲಯದ ಉಪನ್ಯಾಸಕರಾದ ಬಾಲಕೃಷ್ಣ ಪೈ ದಂಪತಿಗಳು ಆಕೆಯ ಮನೆಯಲ್ಲಿ ಕಳೆದ ದಿನ (ನ.24) ಆಚರಿಸಿದರು.   ಈ ಹಿಂದೆ ಈ ಅಶಕ್ತ ಕುಟುಂಬದ ಕರುಳ ಕುಡಿಯ ಶಿಕ್ಷಣದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಮೂಲಕ ಸುಬ್ರಹ್ಮಣ್ಯದ ದಂಪತಿ ದೀಪಾವಳಿಯನ್ನು ವಿಶಿಷ್ಟವಾಗಿ ಆಚರಿಸಿಕೊಂಡಿದ್ದರು ಕಾರ್ಕಳ ತಾಲೂಕು ಡೊಂಕುಬೆಟ್ಟು ನಿವಾಸಿಗಳಾಗಿರುವ ಲಕ್ಷ್ಮಣ ನಾಯಕ್‌(48) -ರೇವತಿ (38) ದಂಪತಿಯ

ಸುಬ್ರಹ್ಮಣ್ಯ :ಅಶಕ್ತ ಕುಟುಂಬದ ಐದರ ಬಾಲೆಯ ಹುಟ್ಟುಹಬ್ಬ ಆಚರಿಸಿದ ಕುಕ್ಕೆಯ ‘ಪೈ’ ದಂಪತಿ Read More »

ಕರಾವಳಿ, ಕರ್ನಾಟಕ

ನಾವೂರು: ಅಂಗಡಿ ಮಾಲಕರಿಗೆ ಹಲ್ಲೆ ➤ ರೂ 1.50 ಲಕ್ಷ ನಗದು ದೋಚಿ ಪರಾರಿ

(ನ್ಯೂಸ್ ಕಡಬ) newskadaba.com ನಾವೂರು ನ. 25: ಕಳೆದ ದಿನ ಕೈಕಂಬ ಬಸ್ ತಂಗುದಾಣದಲ್ಲಿ ವ್ಯಾಪಾರ ನಡೆಸುತ್ತಿದ್ದ ಕೃಷ್ಣಪ್ಪ ಗೌಡ ದಡ್ಡು ಇವರು ಅಂಗಡಿ ಬಾಗಿಲು ಹಾಕಿ ಹೊರಡುವ ಸಂದರ್ಭದಲ್ಲಿ ಹಲ್ಲೆಗೈದು, ವ್ಯಾಪಾರವಾದ ಸುಮಾರು 1.50 ಲಕ್ಷ ರೂ ನಗದು ದೋಚಿ ಪರಾರಿಯಾದ ಘಟನೆ ನಡೆದಿದೆ.   ಕೃಷ್ಣಪ್ಪ ರವರು 10 ಗಂಟೆಯ ಸುಮಾರಿಗೆ ಅಂಗಡಿಗೆ ಬೀಗ ಹಾಕಿ ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಡುವ ಸಂದರ್ಭದಲ್ಲಿ 2 ಮಂದಿ ದರೋಡೆಕೋರರು ಕೃಷ್ಣಪ್ಪ ರವರ ಕಣ್ಣಿಗೆ ಖಾರ ಪುಡಿ ಎರಚಿ,

ನಾವೂರು: ಅಂಗಡಿ ಮಾಲಕರಿಗೆ ಹಲ್ಲೆ ➤ ರೂ 1.50 ಲಕ್ಷ ನಗದು ದೋಚಿ ಪರಾರಿ Read More »

ಕರಾವಳಿ, ಕ್ರೈಮ್ ನ್ಯೂಸ್

ಮಂಗಳೂರು: ಬೈಕ್-ಮೀನಿನ ಲಾರಿ ನಡುವೆ ಅಪಘಾತ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಸುರತ್ಕಲ್ ಸಮೀಪದ ಎನ್ ಐಟಿಕೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕಳೆದ ದಿನ ಮೀನಿನ ಲಾರಿಯೊಂದು ಬೈಕ್ ಸವಾರನಿಗೆ ಢಿಕ್ಕಿಯಾದ ಪರಿಣಾಮದಿಂದಾಗಿ ಬೈಕ್ ಸವಾರ ದಾರುಣ ಸಾವನ್ನಪ್ಪಿರುವ ಘಟನೆ ನಡೆದಿದೆ. ಮೃತಪಟ್ಟ ವ್ಯಕ್ತಿಯನ್ನು ಸೂರಿಂಜೆ ನಿವಾಸಿ ಕುಮಾರ್(45) ಎಂದು ಗುರುತಿಸಲಾಗಿದೆ.     ಮಂಗಳೂರು ಕಡೆಯಿಂದ ಉಡುಪಿ ಕಡೆ ತೆರಳುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ವಾಹನ ಎನ್ ಐ ಟಿಕೆ ಸಮೀಪ ಈ ದುರಂತ ಸಂಭವಿಸಿದೆ. ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಮಂಗಳೂರು

ಮಂಗಳೂರು: ಬೈಕ್-ಮೀನಿನ ಲಾರಿ ನಡುವೆ ಅಪಘಾತ ➤ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು Read More »

ಕರಾವಳಿ

ಮಂಗಳೂರು: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ

(ನ್ಯೂಸ್ ಕಡಬ) newskadaba.com ಮಂಗಳೂರು ನ. 25: ಇಲ್ಲಿನ ಪಚ್ಚನಾಡಿ ರೈಲು ಹಳಿಯಲ್ಲಿ ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದೆ.     ಮೃತದೇಹವನ್ನು ಕಂಡ ಸ್ಥಳೀಯರು ರೈಲ್ವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರುಂಡ ಮುಂಡ ಸಂಪೂರ್ಣ ಬೇರ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವುದನ್ನು ಗಮನಿಸಿದರೆ ಈ ವ್ಯಕ್ತಿ ಆತ್ಮಹತ್ಯೆ ಮಾಡಿಕೊಳ್ಳಲೆಂದೇ ರೈಲ್ವೇ ಹಳಿ ಮೇಲೆ ಬಂದು ಮಲಗಿದಂತೆ ಕಂಡು ಬರುತ್ತಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆಯೇ ಅಥವಾ ಕೊಲೆಯೇ ಅನ್ನೋದು ಪೊಲೀಸರ ತನಿಖೆಯಿಂದಷ್ಟೇ

ಮಂಗಳೂರು: ರುಂಡ ಮುಂಡ ಬೇರ್ಪಟ್ಟ ಸ್ಥಿತಿಯಲ್ಲಿ ಅಪರಿಚಿತ ಶವ ಪತ್ತೆ Read More »

ಕರಾವಳಿ, ಕ್ರೈಮ್ ನ್ಯೂಸ್

ಗೋಹತ್ಯೆ ನಿಷೇಧ ಕಾಯ್ದೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮಂಡನೆ ➤ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 25: ಗೋಹತ್ಯೆ ನಿಷೇಧ ಕಾಯ್ದೆಯನ್ನು ರಾಜ್ಯದಲ್ಲಿ ಜಾರಿಗೊಳಿಸುವ ಸಂಬಂಧ ಬರುವ ಡಿ.7ರಿಂದ ಆರಂಭವಾಗುವ ಚಳಿಗಾಲದ ಅಧಿವೇಶನದಲ್ಲಿ ವಿಧೇಯಕವನ್ನು ಮಂಡನೆ ಮಾಡಲು ಅಗತ್ಯ ಸಿದ್ಥತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ ಅವರು ಹೇಳಿದ್ದಾರೆ.   ರಾಜ್ಯಸ್ಥಾನ, ಆಂಧ್ರಪ್ರದೇಶ, ತೆಲಂಗಾಣ, ಅಸ್ಸಾಂ, ಬಿಹಾರ ಸೇರಿದಂತೆ ಹಲವು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಯಾಗಿದೆ. ಬೇರೆ ಬೇರೆ ರಾಜ್ಯದಲ್ಲಿ ಅನುಷ್ಠಾನಗೊಂಡಿರುವ ಕಾಯ್ದೆಯ ಅಧ್ಯಯನ ನಡೆಸಲಾಗಿದ್ದು, ಈ ಬಗ್ಗೆ ಇಲಾಖಾ ಅಧಿಕಾರಿಗಳ ಮಟ್ಟದಲ್ಲಿ ಮತ್ತು

ಗೋಹತ್ಯೆ ನಿಷೇಧ ಕಾಯ್ದೆ ಮುಂಬರುವ ಚಳಿಗಾಲ ಅಧಿವೇಶನದಲ್ಲಿ ಮಂಡನೆ ➤ ಪಶುಸಂಗೋಪನೆ ಸಚಿವ ಪ್ರಭು ಚೌವ್ಹಾಣ್ Read More »

ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಬೆಳ್ಳಾರೆ: ಬೆಳಕು ಕಾಣದ ಮನೆಗೆ ಸೋಲಾರ್ ಲೈಟ್ ಸಿಸ್ಟಮ್ ಕೊಡುಗೆ

(ನ್ಯೂಸ್ ಕಡಬ) newskadaba.com ಬೆಳ್ಳಾರೆ ನ. 25: ಬೆಳ್ಳಾರೆ ವಲಯದ ಬೆಳ್ಳಾರೆ ಒಕ್ಕೂಟದ ಸ್ವಾಮಿ ಕೊರಗಜ್ಜ ಸಂಘದ ಸದಸ್ಯರಾದ ಶ್ರೀಮತಿ ಫಾತೀಮರವರು ಉಪ್ಪಂಗಳ ಎಂಬ ಗುಡ್ಡ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ.     ಇವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲ. ಇದನ್ನು ಮನಗಂಡು ಇವರಿಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೆಲ್ಕೋ ಸೋಲಾರ್ ಸಂಸ್ಥೆಯ ಸಹಯೋಗದೊಂದಿಗೆ ಸೋಲಾರ್ ಲೈಟ್ ಸಿಸ್ಟಮ್ ನ್ನು ಕೊಡುಗೆಯಾಗಿ ನೀಡಿ ಕಳೆದ ದಿನ ಅವರ ಮನೆಗೆ ಅಳವಡಿಸಲಾಗಿತ್ತು. ಶ್ರೀ ಕ್ಷೇತ್ರ ಧ.ಗ್ರಾ.ಯೋ. ಬೆಳ್ಳಾರೆ ವಲಯ ಮೇಲ್ವಿಚಾರಕ

ಬೆಳ್ಳಾರೆ: ಬೆಳಕು ಕಾಣದ ಮನೆಗೆ ಸೋಲಾರ್ ಲೈಟ್ ಸಿಸ್ಟಮ್ ಕೊಡುಗೆ Read More »

ಕರಾವಳಿ

ಉಡುಪಿ: ಆನ್‍ಲೈನ್ ನಲ್ಲಿ ಆರ್ಡರ್ ಮಾಡಿದ್ದು “ಕುಕ್ಕರ್” ಮನೆಗೆ ಬಂದಿದ್ದು “ಇಟ್ಟಿಗೆ”

(ನ್ಯೂಸ್ ಕಡಬ) newskadaba.com ಉಡುಪಿ, ನ. 25:  ಆನ್ಲೈನ್ ಕಂಪನಿಗಳನ್ನು ಹೇಗೆ ನಂಬುವುದು ಎಂದು ಜನ ಇದೀಗ ಮತ್ತೆ ಭೀತಿಗೊಳಗಾಗಿದ್ದಾರೆ.ಜನರು ಮನೆಯಲ್ಲಿ ಕೂತು ಮೊಬೈಲ್ ಮೂಲಕ ಆನ್‌ಲೈನ್‌ ಆರ್ಡರ್ ಮಾಡಿದರೆ ಮನೆಗೆ ವಸ್ತುಗಳು ಬಂದುಬಿಡುತ್ತದೆ.ಮನೆ ಹತ್ತಿರದಲ್ಲಿರುವ ಅಂಗಡಿಗಳಿಗೆ ತೆರಳದ ಆನ್ ಲೈನ್ ಮೂಲಕ ವ್ಯವಹಾರ ಮಾಡಿಕೊಂಡು ಜೀವನ ನಡೆಸುತ್ತಾರೆ.   ಈ ಆನ್ಲೈನ್ ಆರ್ಡರ್ ಮೂಲಕ ಕೂಡ ಮೋಸ ಹೋಗುತ್ತಾರೆ ಅನ್ನೋದೆ ನಿದರ್ಶವಾಗಿದೆ. ಮಣಿಪಾಲದ ಮಹಿಳೆಯೊಬ್ಬರು ಆನ್‍ಲೈನ್ ನಲ್ಲಿ ಕುಕ್ಕರ್ ಆರ್ಡರ್ ಮಾಡಿದ್ದಾರೆ. ಆದರೆ ಅವರಿಗೆ ಕುಕ್ಕರ್ ಬದಲು

ಉಡುಪಿ: ಆನ್‍ಲೈನ್ ನಲ್ಲಿ ಆರ್ಡರ್ ಮಾಡಿದ್ದು “ಕುಕ್ಕರ್” ಮನೆಗೆ ಬಂದಿದ್ದು “ಇಟ್ಟಿಗೆ” Read More »

ಕರಾವಳಿ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಶಾಲೆಗಳ ದತ್ತು ಸ್ವೀಕಾರ

(ನ್ಯೂಸ್ ಕಡಬ) newskadaba.com ಬೆಂಗಳೂರು ನ. 25: ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆದ ಸರಕಾರಿ ಶಾಲೆಗಳನ್ನು ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದ ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ ಸುರೇಂದ್ರ ಕುಮಾರ್ ಅವರು ಉದ್ಘಾಟಿಸಿದರು.     ಕಾರ್ಯಕ್ರಮದಲ್ಲಿ ಎಸ್ ಡಿ ಎಂ ವಿಶ್ವವಿದ್ಯಾನಿಲಯ ಧಾರವಾಡ ವತಿಯಿಂದ 10 ಶಾಲೆಗಳನ್ನು ದತ್ತು ಸ್ವೀಕರಿಸಿ, ಅಭಿವೃದ್ಧಿ ಪಡಿಸುವ ಕುರಿತು ಚರ್ಚಿಸಲಾಯಿತು. ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ರವರು ರಾಜ್ಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುತ್ತಿರುವ ಅಭಿವೃದ್ಧಿ ಕೆಲಸ ಕಾರ್ಯಗಳ

ಬೆಂಗಳೂರು: ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಶಾಲೆಗಳ ದತ್ತು ಸ್ವೀಕಾರ Read More »

ಕರ್ನಾಟಕ
Scroll to Top