Kadaba News

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಕಡಬ. ಆ,26:  ರಾಜ್ಯದ ಪ್ರಸಿದ್ದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ ನಡೆಯಿತು.   ಬೆಳಿಗ್ಗೆ ದೇವರಿಗೆ ಮಹಾಭಿಷೇಕ ಹಾಗೂ ಕದಿರು ಪೂಜೆ ದೇವತಾ ಕಾರ್ಯಗಳು ನಡೆದವು. ಬೆಳಿಗ್ಗೆ ಗಂಟೆ 5.30ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಗಂಟೆ 8ಕ್ಕೆ ತೆನೆ ತಂದು, ಬಳಿಕ ಕದಿರು ಪೂಜೆ, ಗಂಟೆ 9ಕ್ಕೆ ದೇವಲದ ನೌಕರರಿಗೆ ಹಾಗೂ ಸ್ಥಳೀಯ ಭಕ್ತಾಧಿಗಳಿಗೆ ಕದಿರು ವಿತರಣೆ ನಡೆಯಿತು. ಪ್ರದಾನ ಅರ್ಚಕ ಸೀತಾರಾಮ […]

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ Read More »

ಕರಾವಳಿ, ಕರ್ನಾಟಕ

ಹುಟ್ಟಿದ 3 ಗಂಟೆಯಲ್ಲೇ ಕೊರೊನಾಗೆ ಬಲಿಯಾದ ನವಜಾತ ಶಿಶು…!

(ನ್ಯೂಸ್ ಕಡಬ) newskadaba.com ಬೆಂಗಳೂರು, ಆ.26:  ಜನಿಸಿದ ಮೂರು ಗಂಟೆಯಲ್ಲೇ ಕೊರೊನಾ ಸೋಂಕಿನಿಂದ ನವಜಾತ ಶಿಶು ಸಾವನ್ನಪ್ಪಿದ ಕರುಣಾಜನಕ ಘಟನೆ ನಗರದ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ನಡೆದಿದೆ. ದೊಡ್ಡಬಳ್ಳಾಪುರ ಮೂಲದ ದಂಪತಿಗೆ ಕೊರೊನಾ ಪಾಸಿಟಿವ್ ಇತ್ತು. ಈ ನಡುವೆ ಈ ದಂಪತಿಗೆ ಜನಿಸಿದ ಮಗುವಿಗೂ ಕೊರೊನಾ ಸೋಂಕು ತಗುಲಿದ್ದು ಜನಿಸಿದ 3 ಗಂಟೆಯಲ್ಲೇ ಪ್ರಾಣ ಬಿಟ್ಟಿದ್ದು ಕಣ್ಣು ಬಿಟ್ಟು ನೋಡುವುದರೊಳಗಾಗಿ ಕೊರೊನಾ ಬಲಿ ತೆಗೆದುಕೊಂಡಿತು. ದುರಂತವೆಂದರೆ ಈ ಮಗುವನ್ನು ಪೋಷಕರು, ಸಂಬಂಧಿಕರು ಯಾರೂ ನೋಡಲಾಗಲಿಲ್ಲ, ಅಂತ್ಯಸಂಸ್ಕಾರವನ್ನೂ ಮಾಡಲಾಗಲಿಲ್ಲ. ಚಾಮರಾಜಪೇಟೆಯ

ಹುಟ್ಟಿದ 3 ಗಂಟೆಯಲ್ಲೇ ಕೊರೊನಾಗೆ ಬಲಿಯಾದ ನವಜಾತ ಶಿಶು…! Read More »

ಕರಾವಳಿ, ಕರ್ನಾಟಕ

ನಕ್ಷತ್ರ ಆಮೆ ಮಾರಾಟಟಕ್ಕೆ ಯತ್ನ ➤ ಪೋಲಿಸರ ಅತಿಥಿಯಾದ ಆರೋಪಿ

(ನ್ಯೂಸ್ ಕಡಬ) newskadaba.com ಮಡಿಕೇರಿ. ಆ,26:  ನಕ್ಷತ್ರ ಆಮೆ ಮಾರಾಟ ಮಾಡಿ ಲಕ್ಷಾಧಿಪತಿ ಆಗಲು ಯತ್ನಿಸಿದ ಕಿರಾತಕ ಈಗ ಪೋಲಿಸರ ಅತಿಥಿಯಾದ ಘಟನೆ ಮಡಿಕೇರಿಯಲ್ಲಿ ನಡೆದಿದೆ. ಆಮೆಗಳ ಮಾರಾಟಕ್ಕೆ ಯತ್ನಿಸುತ್ತಿರುವ ಬಗ್ಗೆ ಮಾಲಗಳಿಂದ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ, ಮಡಿಕೇರಿ ಅರಣ್ಯ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ನಕ್ಷತ್ರ ಆಮೆ ಬಹಳ ಅಪರೂಪವಾಗಿ ಕಂಡು ಬರುವ ಇನ್ನೊಂದು ಆಮೆಯನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯನ್ನು ಬಂಧಿಸಿ ವನ್ಯ ಜೀವಿ ಸಂರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆರೋಪಿ

ನಕ್ಷತ್ರ ಆಮೆ ಮಾರಾಟಟಕ್ಕೆ ಯತ್ನ ➤ ಪೋಲಿಸರ ಅತಿಥಿಯಾದ ಆರೋಪಿ Read More »

ಕರಾವಳಿ

ಹೃದಯಘಾತದಿಂದ ಮೃತ್ಯು

(ನ್ಯೂಸ್ ಕಡಬ) newskadaba.com ಪುತ್ತೂರು. ಆ,26: ಸಾವು ಹೇಗೆ ಎಲ್ಲಿ ಬೇಕಾದರೂ ಬರಬಹುದು.ಇದನ್ನು ಯಾರಿಂದಲೂ ಊಹಿಸಲು ಸಾಧ್ಯವಿಲ್ಲ. ಇಂದು ಬ್ಯಾಂಕ್‌ ವ್ಯಕ್ತಿಯೊಬ್ಬರು ಹೃದಯಘಾತದಿಂದ ಮೃತಪಟ್ಟ ಘಟನೆ ಕುಂಬ್ರದಲ್ಲಿ ನಡೆದಿದೆ. ಕೆದಂಬಾಡಿ ಗ್ರಾಮದ ಕೋರಿಕ್ಕಾರು ನಿವಾಸಿ ಕೆಎಸ್‌ಆರ್ ಟಿ ಸಿ ನಿವೃತ ಟಿಸಿ ರಘುನಾಥ ರೈ ಮೃತಪಟ್ಟವರು.ಇವರು ಇಂದು ಕುಂಬ್ರದಲ್ಲಿರುವ ಡಿಸಿಸಿ ಬ್ಯಾಂಕಿಗೆಯೆಂದು ಬಂದು ನಡೆದುಕೊಂಡು ಹೋಗುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.  

ಹೃದಯಘಾತದಿಂದ ಮೃತ್ಯು Read More »

ಕರಾವಳಿ, ಕರ್ನಾಟಕ

ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಬಸ್ ತಂಗುದಾಣ ಲೋಕಾರ್ಪಣೆ

(ನ್ಯೂಸ್ ಕಡಬ) newskadaba.com ಬಂಟ್ವಾಳ. ಆ,26:  ವಿಶ್ವ ಹಿಂದೂ ಪರಿಷತ್ ಭಜರಂಗದಳ ಹನುಮಾನ್ ನಗರ ಇದರ ವತಿಯಿಂದ ಬಂಟ್ವಾಳದ ಪೊಡಿಕಲ ಕಂಬ್ಲ ಗ್ರಾಮದ ಹನುಮಾನ್ ನಗರ ಹನುಮಾನ್ ಶಾಖೆಯ ಕಾರ್ಯಕರ್ತರು , ಪರಿಶ್ರಮವಹಿಸಿ ನಿರ್ಮಿಸಿದ ಬಸ್ ತಂಗುದಾಣವನ್ನು ಸಾರ್ವಜನಿಕ ಕಾರ್ಯಗಳಿಗೆ ಲೋಕಾರ್ಪಣೆ ಮಾಡಲಾಯಿತು.   ಈ ಸಂದರ್ಭದಲ್ಲಿ ಭಜರಂಗದಳದ ನಾಯಕರು ಕಾರ್ಯಕರ್ತರು ಹಾಗೂ ಸ್ಥಳಿಯರು ಉಪಸ್ಥಿತರಿದ್ದರು.  

ಬಂಟ್ವಾಳ : ವಿಶ್ವ ಹಿಂದೂ ಪರಿಷತ್ ಭಜರಂಗದಳ ವತಿಯಿಂದ ಬಸ್ ತಂಗುದಾಣ ಲೋಕಾರ್ಪಣೆ Read More »

ಕರ್ನಾಟಕ

ಸ್ನಾನಕ್ಕಿಳಿದು ನೀರು ಪಾಲಾದ ಯುವಕನ ಮೃತ ದೇಹ ಪತ್ತೆ

ಸ್ನಾನ ಮಾಡುತ್ತಿದ್ದಾಗ ಹೊಳೆ ಪಾಲಾಗಿ ಮಂಗಳೂರು ನಿವಾಸಿಯೋರ್ವ ಮೃತಪಟ್ಟ ಘಟನೆ ಮಧೂರು ಬಳಿ ನಡೆದಿದೆ. ಮೃತಪಟ್ಟವರನ್ನು ಮಂಗಳೂರು ಎಕ್ಕೂರಿನ ವಿನೋದ್ ( 35 ) ಎಂದು ಗುರುತಿಸಲಾಗಿದೆ.ಆದಿತ್ಯವಾರ ಸಂಜೆ ಘಟನೆ ನಡೆದಿತ್ತು.     ಮಧೂರಿನ ತೋಟವೊಂದರಲ್ಲಿ ಕೆಲಸ ನಿರ್ವಹಿಸಿ ಮಧೂರು ಸೇತುವೆ ಬಳಿಯ ಹೊಳೆ ಯಲ್ಲಿ ಸ್ನಾನಕ್ಕಿಳಿದ ಸಂದರ್ಭದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇದನ್ನು ಗಮನಿಸಿದ ಪ್ರತ್ಯಕ್ಷದರ್ಶಿಗಳು ಪೊಲೀಸ್, ಅಗ್ನಿಶಾಮಕ ದಳದ ಸಿಬಂದಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿ ಶೋಧ ನಡೆಸಿದರೂ ಪತ್ತೆ ಹಚ್ಚಲು ಸಾಧ್ಯವಾಗಲಿಲ್ಲ. ಎರಡು ದಿನಗಳ

ಸ್ನಾನಕ್ಕಿಳಿದು ನೀರು ಪಾಲಾದ ಯುವಕನ ಮೃತ ದೇಹ ಪತ್ತೆ Read More »

ಕರಾವಳಿ, ಕರ್ನಾಟಕ

ಪದವಿ ಕಾಲೇಜುಗಳು ‌ಅಕ್ಟೋಬರ್ ಒಂದರಿಂದ ಪುನರಾರಂಭ..!

(ನ್ಯೂಸ್ ಕಡಬ) newskadaba.com ಬೆಂಗಳೂರು. ಆ,25: ಕೋವಿಡ್‍ನಿಂದ ಮುಂದೂಡಲಾಗಿದ್ದ ಶಾಲಾಕಾಲೇಜುಗಳ ತರಗತಿಗಳು ಅಕ್ಟೋಬರ್ ನಿಂದ ಪುನರಾರಂಭಗೊಳ್ಳಲಿದೆ. ಸೆಪ್ಟೆಂಬರ್ ವರೆಗೂ ಆನ್‍ಲೈನ್ ತರಗತಿಗಳು ಮುಂದುವರೆಯಲಿವೆ ಎಂದು ತಿಳಿದುಬಂದಿದೆ. ಅನ್ಲಾಕ್ 4.0ನಲ್ಲಿ ಹಂತ ಹಂತವಾಗಿ ಶಾಲೆ ಕಾಲೇಜು ತೆರೆಯುವ ಸಾಧ್ಯತೆ ಇದ್ದು, ಸೆಪ್ಟೆಂಬರ್ 1ರಿಂದ ಪದವಿ ವಿದ್ಯಾರ್ಥಿಗಳಿಗೆ ಆನ್‍ಲೈನ್ ತರಗತಿಗಳು ಆರಂಭವಾಗಲಿದೆ. ಅಕ್ಟೋಬರ್ 1ರಿಂದ ಪದವಿ ಕಾಲೇಜುಗಳು ತೆರೆಯಲಿವೆ. ಇದರಂತೆ ಪದವಿ, ಪಿಯು, ಹೈಸ್ಕೂಲ್ ಬಳಿಕ ಪ್ರಾಥಮಿಕ ಶಾಲೆ ತೆರೆಯುವ ಚಿಂತನೆ ಮಾಡಲಾಗಿದೆ. ಸಾಮಾನ್ಯ ವರ್ಷಗಳಲ್ಲಿ ಈ ವೇಳೆಗೆ ಶಾಲೆಗಳು

ಪದವಿ ಕಾಲೇಜುಗಳು ‌ಅಕ್ಟೋಬರ್ ಒಂದರಿಂದ ಪುನರಾರಂಭ..! Read More »

ಕರಾವಳಿ, ಕರ್ನಾಟಕ

ಕೊಡಗು – ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ..!

(ನ್ಯೂಸ್ ಕಡಬ) newskadaba.com ಕೊಡಗು . ಆ,26:  ಕೊಡಗು ಗಡಿಯಲ್ಲೂ ಕೇರಳ ಕ್ಯಾತೆ ತೆಗೆದಿದ್ದು, ಕನ್ನಡಿಗರ ವಿರುದ್ಧ ಕೇರಳದ ಜಿದ್ದು ಸಾಧಿಸುತ್ತಿದೆ. ಕೊಡಗು ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ ಹೇರಿದೆ. ಕಾಸರಗೋಡಿನ ಪಣತ್ತಡಿ ಪಂಚಾಯಿತಿ ಈ ನಿರ್ಬಂಧ ಹೇರಿದ್ದು, ಕೇಂದ್ರ ಸರ್ಕಾರ ಅನುಮತಿ ಕೊಟ್ಟರೂ ಸಹ ಕೇರಳ ಸಂಚಾರಕ್ಕೆ ಅವಕಾಶ ಕೊಡದೆ ಗಡಿ ಬಂದ್ ಮಾಡಿದೆ ಎನ್ನಲಾಗಿದೆ.     ಇದರಿಂದ ಕನ್ನಡಿಗರು ಪರದಾಡುವಂತಾಗಿದೆ. ಈ ಹಿನ್ನಲೆಯಲ್ಲಿ ಕೇರಳದ ವಿರುದ್ಧ ಬಿಜೆಪಿ ಕಾರ್ಯಕರ್ತರ ಆಕ್ರೋಶ ವ್ಯಕ್ತಪಡಿಸಿ ಕೇರಳ

ಕೊಡಗು – ಕೇರಳ ಗಡಿಯಲ್ಲಿ ಸಂಚಾರಕ್ಕೆ ನಿರ್ಬಂಧ..! Read More »

ಕರ್ನಾಟಕ

ನಿರ್ಗತಿಕ ಮಹಿಳೆಯ ಮೇಲೆ ಕಾಮುಕನ ಅಟ್ಟಹಾಸ ➤ ವಿಕೃತಕಾಮಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ

(ನ್ಯೂಸ್ ಕಡಬ) newskadaba.com ಹಾಸನ. ಆ,26:  ಆಶ್ರಯವಿಲ್ಲದ ಆಕೆ ಹಾಸನದ ಬಿಎಂ ರಸ್ತೆಯ ಪಕ್ಕದಲ್ಲೇ ಇದ್ದ ಅಂಗಡಿಯೊಂದರ ಮುಂದೆ ಅನಾಥವಾಗಿ ಮಲಗಿದ್ದಳು. ಹೀಗೆ ಅನಾಥವಾಗಿ ಮಲಗಿದ್ದವಳ ಮೇಲೆ ಕಾಮುಕನ ಕಣ್ಣು ಬಿದ್ದಿತ್ತು. ಮೊದಲು ಆಕೆಯನ್ನು ಅತ್ಯಾಚಾರ ಮಾಡಲು ಯತ್ನಿಸಿದ ಕಾಮುಕ ಆಕೆ ಒಪ್ಪದಿದ್ದಾಗ ಆಕೆಯ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಸಾಯಿಸಿ ಸತ್ತವಳ ದೇಹದ ಮೇಲೆ ಮೃಗದ ರೀತಿ ಅತ್ಯಾಚಾರ ಎಸಗಿದ್ದಾನೆ. ಇಡೀ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹಾಸನ ನಗರದ ಜನ ಬೆಚ್ಚಿಬಿದ್ದಿದ್ದಾರೆ.     ಸೋಮವಾರ

ನಿರ್ಗತಿಕ ಮಹಿಳೆಯ ಮೇಲೆ ಕಾಮುಕನ ಅಟ್ಟಹಾಸ ➤ ವಿಕೃತಕಾಮಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆ Read More »

ಕರ್ನಾಟಕ, ಕ್ರೈಮ್ ನ್ಯೂಸ್

ಕಡಬ: ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾಗಿ ➤ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮೋಹನ್‌ ಕೆರೆಕೋಡಿ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ. ಆ,26: ಶ್ರೀರಾಮ ಸೇನೆ ಪುತ್ತೂರು ಇದರ ಜಿಲ್ಲಾ ಅಧ್ಯಕ್ಷರಾಗಿ ಮೋಹನ್‌ ಕೆರೆಕೋಡಿ ರವರು ಆಯ್ಕೆಯಾಗಿದ್ದಾರೆ. ಇವರು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದು, ಶ್ರೀ ರಾಮ ಯುವಕ ಮಂಡಲ ರಾಮನಗರ ಇದರ ಸ್ಥಾಪಕಾಧ್ಯಕ್ಷರಾಗಿದ್ದಾರೆ. ಜೊತೆಗೆ ಶ್ರೀರಾಮ ಸೇನೆಯ ಸಕ್ರೀಯ ಸದಸ್ಯನಾಗಿ, ಅಧ್ಯಕ್ಷನಾಗಿ ಸಂಘವನ್ನು ಯಶಸ್ವಿಯಾಗಿ ಮುನ್ನಡೆಸಿದರು.ಇದೀಗ ಮುಂದೆ ಶ್ರೀರಾಮ ಸೇನೆ ಪುತ್ತೂರು ಜಿಲ್ಲೆಯ, ಅಧ್ಯಕ್ಷ ಜವಾಬ್ದಾರಿಯನ್ನು ವಹಿಸಿ ಕಾರ್ಯನಿರ್ವಹಿಸಲಿದ್ದಾರೆ.      

ಕಡಬ: ಶ್ರೀರಾಮ ಸೇನೆಯ ಜಿಲ್ಲಾ ಅಧ್ಯಕ್ಷರಾಗಿ ➤ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಮೋಹನ್‌ ಕೆರೆಕೋಡಿ ಆಯ್ಕೆ Read More »

ಕರಾವಳಿ
Scroll to Top