ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ
(ನ್ಯೂಸ್ ಕಡಬ) newskadaba.com ಕಡಬ, ನ.7. ರಾಷ್ಟ್ರೀಯ ಸ್ವಯಂ ಸೇವಕ ಸಂಘ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ ಕಾರ್ಯಕ್ರಮ ಭಾನುವಾರ ಸಾಯಂಕಾಲ ನಡೆಯಿತು. ಉಪ್ಪಿನಂಗಡಿ-ಸುಬ್ರಹ್ಮಣ್ಯ ರಾಜ್ಯ ಹೆದ್ದಾರಿಯ ಗೋಕುಲನಗರದಿಂದ ಆರಂಭಗೊಂಡ ಪಥಸಂಚಲನ ಗೋಳಿತ್ತಡಿ ಮೂಲಕ ಸಾಗಿ ಶಾರದನಗರದಲ್ಲಿ ಸಮಾಪನಗೊಂಡಿತ್ತು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯವಾಹ ಶ್ರೀನಿವಾಸ್ ಉಬರಡ್ಕ ಬೌದ್ದಿಕ್ ನೀಡಿದರು. ಪುಷ್ಪರಾಜ್ ಹಳೆನೇರಿಂಕಿ ಸಂಘದ ಪ್ರಾಥನೆ ಹಾಡಿದರು. ಮುಖ್ಯಶಿಕ್ಷಕ ಚರಣ್ ಉಪಸ್ಥಿತರಿದ್ದರು.
ಆರೆಸ್ಸೆಸ್ ರಾಮಕುಂಜ ಮಂಡಲ ವತಿಯಿಂದ ಪಥ ಸಂಚಲನ Read More »
ಕರಾವಳಿ
