ಮಂಗಳೂರು

ಹಾಡು ಹಗಲಲ್ಲೇ ಉದ್ಯಮಿ ಹತ್ಯೆ ➤ ಬೆಚ್ಚಿ ಬೆದ್ದ ಮುಲ್ಕಿ

(ನ್ಯೂಸ್ ಕಡಬ) newskadaba.com ಮುಲ್ಕಿ, ಜೂ.6:  ಮೂಡಬಿದ್ರೆಯಲ್ಲಿ ಚಿನ್ನದ ಮಳಿಗೆ ಹೊಂದಿದ್ದ ಕಾಣಿಯೂರು ಸಮೀಪದ ಮುರುಳ್ಯ ಗ್ರಾಮದ ಯುವಕ ಅಬ್ದುಲ್ ಲತೀಫ್ ರವರನ್ನ ದುಷ್ಕರ್ಮಿಗಳ ತಂಡವೊಮದು ಅಡ್ಡಗಟ್ಟಿ ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಜೂ.5 ರಂದು ಮುಲ್ಕಿಯಲ್ಲಿ ನಡೆದಿದೆ.   ಮೂಡ ಬಿದಿರೆಯ ಅಮರಶ್ರೀ ಚಿತ್ರ ಮಂದಿರದ ಬಳಿ ಅಲೈನ್ ಗೋಲ್ಡ್ ಎಂಬ ಹೆಸರಿನ ಚಿನ್ನದ ಮಳಿಗೆ ನಡೆಸುತ್ತಿದ್ದ ಯುವ ಉದ್ಯಮಿ ಅಬ್ದುಲ್ ಲತೀಫ್ ಅವರು, ತನ್ನ ಮಾನ ಮುನೀರ್ ಹಾಗೂ ಅವರ ಪುತ್ರ ಹಯಾತ್ ಎಂಬುವರ […]

ಹಾಡು ಹಗಲಲ್ಲೇ ಉದ್ಯಮಿ ಹತ್ಯೆ ➤ ಬೆಚ್ಚಿ ಬೆದ್ದ ಮುಲ್ಕಿ Read More »

ಕರಾವಳಿ, ಕರ್ನಾಟಕ, ಕ್ರೈಮ್ ನ್ಯೂಸ್

ವಿಶ್ವ ಪರಿಸರ ದಿನದಂದೇ ಮರಗಳಿಗೆ ಕೊಡಲಿ ಏಟು ➤ ಪರಿಸರ ತಜ್ಞರ ಆಕ್ರೋಶ

(ನ್ಯೂಸ್ ಕಡಬ) newskadaba.com ಉಡುಪಿ ,ಜೂ 05: ವಿಶ್ವ ಪರಿಸರ ದಿನದಂದು ಉಡುಪಿಯಲ್ಲಿ ಮರಗಳ ಮಾರಣಹೋಮ ನಡೆದಿದೆ. ಈ ದಿನ ಗಿಡ ನೆಡದಿದ್ರೂ ಪರವಾಗಿಲ್ಲ ಯಾವುದೇ ಮಾನವೀಯತೆ ಇಲ್ಲದೆ 50- 60 ವರ್ಷ ಬೆಳೆದಿದ್ದ ಮರಗಳನ್ನು ಕತ್ತರಿಸಿ ಬಿಸಾಕಿದ್ದಾರೆ. ಉಡುಪಿ ನಗರದ ಮಧ್ಯ ಭಾಗದಲ್ಲಿರುವ ಬನ್ನಂಜೆಯಲ್ಲಿ ನೂತನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದ ನಿರ್ಮಾಣ ಆಗ್ತಾಯಿದೆ. ಜೊತೆ ಜೊತೆಗೆ ಕಾಂಪೌಡ್ ಸುತ್ತ ಇರುವ ಹತ್ತಾರು ಮರಗಳ ನಿರ್ನಾಮ ಆಗ್ತಾಯಿದೆ. ಅದೂ ವಿಶ್ವ ಪರಿಸರ ದಿನ ಎಂಬ ಸಾಮಾನ್ಯ

ವಿಶ್ವ ಪರಿಸರ ದಿನದಂದೇ ಮರಗಳಿಗೆ ಕೊಡಲಿ ಏಟು ➤ ಪರಿಸರ ತಜ್ಞರ ಆಕ್ರೋಶ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಜೂ. 8ರಿಂದ ಕುಕ್ಕೆ ದೇವಸ್ಥಾನ ಓಪನ್ ➤ ಭಕ್ತರ ದರ್ಶನಕ್ಕೆ ರಾಜ್ಯದ ಶ್ರೀಮಂತ ದೇಗುಲ ಸಜ್ಜು

(ನ್ಯೂಸ್ ಕಡಬ) newskadaba.com ಕುಕ್ಕೆ ಸುಬ್ರಹ್ಮಣ್ಯ ,ಜೂ 05: ಜೂನ್ 8ರಿಂದ ರಾಜ್ಯಾದ್ಯಂತ ಭಕ್ತರಿಗಾಗಿ ದೇವಾಲಯಗಳು ತೆರೆಯಲಿವೆ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗೆ ದೇವರ ದರ್ಶನಕ್ಕಾಗಿ ಎಲ್ಲ ವ್ಯವಸ್ಥೆಯನ್ನು ಮಾಡಲಾಗಿದೆ. ರಾಜ್ಯದ ಅತಿ ಶ್ರೀಮಂತ ದೇವಸ್ಥಾನವೆಂದು ಗುರುತಿಸಲ್ಪಟ್ಟಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದೇಶ-ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯ ಭಕ್ತರು ಪ್ರತೀ ವರ್ಷ ಆಗಮಿಸುತ್ತಾರೆ. ಕಳೆದ ಹತ್ತಾರು ವರ್ಷಗಳಿಂದ ಸತತವಾಗಿ ಅತ್ಯಂತ ಹೆಚ್ಚಿನ ಅದಾಯ ಪಡೆದ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಪ್ರತೀ

ಜೂ. 8ರಿಂದ ಕುಕ್ಕೆ ದೇವಸ್ಥಾನ ಓಪನ್ ➤ ಭಕ್ತರ ದರ್ಶನಕ್ಕೆ ರಾಜ್ಯದ ಶ್ರೀಮಂತ ದೇಗುಲ ಸಜ್ಜು Read More »

ಕರಾವಳಿ, ಕರ್ನಾಟಕ

ಉಡುಪಿಯಲ್ಲಿ ಎರಡು ಮನೆಗಳು ಸೀಲ್ ಡೌನ್ ➤ ಕೋಟೆ ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ

(ನ್ಯೂಸ್ ಕಡಬ) newskadaba.com ಉಡುಪಿ ,ಜೂ 05: ಉಡುಪಿ ಜಿಲ್ಲೆಯ ಕಟಪಾಡಿಯ ಕೋಟೆ ಗ್ರಾಮ ಪಂಚಾಯತಿಯ ಮಟ್ಟುವಿನ ವಿಷ್ಣುಮೂರ್ತಿ ದೇವಸ್ಥಾನದ ಪಕ್ಕದ ಎರಡು ಮನೆಗಳು ಸೀಲ್ ಡೌನ್ ಗೆ ಒಳಗಾಗಿದೆ.   ಲಾಕ್ ಡೌನ್ ಬಳಿಕ ದುಬೈಯಿಂದ ಮಂಗಳೂರಿಗೆ ಬಂದ ಪ್ರಥಮ ವಿಮಾನದಲ್ಲಿ ಬಂದಿದ್ದ ಮಹಿಳೆಯೊರ್ವರು ಕ್ವಾರೆಂಟೈನ್ ಮುಗಿಸಿ ಮನೆಗೆ ಬಂದಿದ್ದರು. ಇದೀಗ ನಿನ್ನೆ (ಗುರುವಾರ) ಅವರಿಗೆ ಕೊವಿಡ್-19 ಸೋಂಕು ದೃಢವಾದ ಹಿನ್ನಲೆ, ಅವರದ ವಾಸದ ಮನೆ ಹಾಗು ಪಕ್ಕದ ಮನೆಯನ್ನು ಅಧಿಕಾರಿಗಳು ಸೀಲ್ ಡೌನ್ ಮಾಡಿದ್ದಾರೆ.

ಉಡುಪಿಯಲ್ಲಿ ಎರಡು ಮನೆಗಳು ಸೀಲ್ ಡೌನ್ ➤ ಕೋಟೆ ವ್ಯಾಪ್ತಿಯಲ್ಲಿ ಹೆಚ್ಚಿದ ಆತಂಕ Read More »

ಕರಾವಳಿ

ಕದನ ವಿರಾಮ ಉಲ್ಲಂಘಿಸಿದ ಪಾಕ್‌‌ ➤ ಓರ್ವ ಭಾರತೀಯ ಯೋಧ ಹುತಾತ್ಮ

(ನ್ಯೂಸ್ ಕಡಬ) newskadaba.com ಶ್ರೀನಗರ,ಜೂ 05: ಪಾಕಿಸ್ತಾನ ತನ್ನ ನೀಚ ಬುದ್ದಿಯನ್ನ ಪ್ರತಿ ಬಾರಿಯು ಪ್ರದರ್ಶಿಸುತ್ತಲೆ ಬಂದಿದೆ. ಪಾಕ್ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿ ಪರಿಣಾಮ ಭಾರತೀಯ ಯೋಧನೊಬ್ಬ ಹುತಾತ್ಮನಾದ ಘಟನೆ ರಾಜೌರಿ ಜಿಲ್ಲೆಯ ಸುಂದರ್ ಬಾನಿ ನಡೆದಿದೆ.     ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಭಾರತೀಯ ಯೋಧನೊಬ್ಬ ಹುತಾತ್ಮನಾದ ಘಟನೆ ರಾಜೌರಿ ಜಿಲ್ಲೆಯ ಸುಂದರ್ ಬಾನಿ ನಡೆದಿದೆ.ಗುರುವಾರ ರಾತ್ರಿ 7 ಗಂಟೆ ಸುಮಾರಿಗೆ

ಕದನ ವಿರಾಮ ಉಲ್ಲಂಘಿಸಿದ ಪಾಕ್‌‌ ➤ ಓರ್ವ ಭಾರತೀಯ ಯೋಧ ಹುತಾತ್ಮ Read More »

ಬ್ರೇಕಿಂಗ್ ನ್ಯೂಸ್, ರಾಷ್ಟ್ರೀಯ ನ್ಯೂಸ್

ಇಂದು ಚಂದ್ರಗ್ರಹಣ ➤ ನಭೋ ಮಂಡಲದಲ್ಲಿ ಕೌತುಕ

(ನ್ಯೂಸ್ ಕಡಬ) newskadaba.com ನವದೆಹಲಿ ,ಜೂ 05: 2020ರ ಅಪರೂಪದ ವಿದ್ಯಮಾನಕ್ಕೆ ನಾವು ಇಂದು ಸಾಕ್ಷಿಯಾಗುತ್ತಿದ್ದು, ವರ್ಷದ ಎರಡನೇ ಚಂದ್ರಗ್ರಹಣ ಇಂದು ರಾತ್ರಿ (ಜೂನ್ 5ಹಾಗೂ 6) ಸಂಭವಿಸಲಿದ್ದು, ಈ ಬಾರಿಯದ್ದು ಸ್ಟ್ರಾಬೆರಿ ಚಂದ್ರಗ್ರಹಣವಾಗಿದೆ.   ಈ ವರ್ಷದ ಜನವರಿ 10ರಂದು ಪ್ರಥಮ ಚಂದ್ರಗ್ರಹಣ ಸುಮಾರು 4ಗಂಟೆ ಐದು ನಿಮಿಷಗಳ ಕಾಲ ಭಾರತದಲ್ಲಿ ಗೋಚರಿಸಿತ್ತು. ಇದೀಗ ಎರಡನೇ  ಚಂದ್ರಗ್ರಹಣ ಜೂನ್ 5ಮತ್ತು 6ರ ರಾತ್ರಿ ಸಂಭವಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಬಾರಿಯ ಚಂದ್ರಗ್ರಹಣವನ್ನು Penumbral Eclipse

ಇಂದು ಚಂದ್ರಗ್ರಹಣ ➤ ನಭೋ ಮಂಡಲದಲ್ಲಿ ಕೌತುಕ Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಕರಾವಳಿಯಲ್ಲಿ ಮಳೆಯ ಸಿಂಚನ ➤ ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು

(ನ್ಯೂಸ್ ಕಡಬ) newskadaba.com  ಮಂಗಳೂರು,ಜೂ 05: ಕರಾವಳಿಯಲ್ಲಿ ನಿರೀಕ್ಷೆಯಂತೆ ನೈರುತ್ಯ ಮುಂಗಾರು ಗುರುವಾರ ಮಧ್ಯಾಹ್ನ ಕರಾವಳಿ ಮೂಲಕ ರಾಜ್ಯ ಪ್ರವೇಶಿಸಿದೆ.ಜೂನ್‌ 1ರಂದು ಕೇರಳ ಪ್ರವೇಶಿಸಿದ್ದ ನೈರುತ್ಯ ಮುಂಗಾರು ರಾಜ್ಯಕ್ಕೂ ಕಾಲಿಟ್ಟಿದ್ದು, ಕರಾವಳಿ ಹಾಗೂ ಮಲೆನಾಡಿನಲ್ಲಿ ಮಳೆಗಾಲದ ಚಿತ್ರಣ ಮೂಡಿಸಿದೆ.   ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಿಗ್ಗೆಯಿಂದಲೇ ಮೋಡ ಕವಿದಿದ್ದು, 2.83 ಸೆಂ.ಮೀ. ಮಳೆಯಾಗಿದೆ. ಘಟ್ಟದ ತಪ್ಪಲಿನ ಸುಳ್ಯ ತಾಲ್ಲೂಕಿನಲ್ಲಿ 4.5 ಸೆಂ.ಮೀ. ಮಳೆಯಾಗಿದೆ. ಗಾಳಿಗೆ ಅಲ್ಲಲ್ಲಿ ಮರದ ರೆಂಬೆ-ಕೊಂಬೆಗಳು ಬಿದ್ದಿವೆ. ಸಮುದ್ರದ ಅಬ್ಬರ ಹೆಚ್ಚಿದೆ. ‘ಮುಂಗಾರು

ಕರಾವಳಿಯಲ್ಲಿ ಮಳೆಯ ಸಿಂಚನ ➤ ರಾಜ್ಯಕ್ಕೆ ಪ್ರವೇಶಿಸಿದ ಮುಂಗಾರು Read More »

ಕರಾವಳಿ, ಕರ್ನಾಟಕ, ರಾಷ್ಟ್ರೀಯ ನ್ಯೂಸ್

ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ,ಜೂ 04: ಜಿಲ್ಲಾಧಿಕಾರಿಗಳ ಆದೇಶದ ಅಣುಗಣವಾಗಿ ಹಾಗೂ ಜಿಲ್ಲಾ ಗೃಹರಕ್ಷಕದಳದ ಜಿಲ್ಲಾ ಕಮಾಡೆಂಟ್ ಡಾ||ಮುರಲೀ ಮೋಹನ್ ಚೂಂತಾರುರವರ ಆದೇಶದಂತೆ  ಈ ಬಾರಿಯೂ ಗೃಹರಕ್ಷಕದಳದ ಪ್ರವಾಹ ರಕ್ಷಣಾ ತಂಡವನ್ನು ಉಪ್ಪಿನಂಗಡಿಯಲ್ಲಿ ರಚಿಸಲಾಗಿದೆ  ಕಾರ್ಯಚರಣೆ ಬಳಸುವ ರಬ್ಬರ್ ದೋಣಿ,,ಲೈಪ್ ಜಾಕೆಟ್, ಆಸ್ಕಲೈಟ್,ಮರಕತ್ತರಿಸುವ ಯಂತ್ರದೊಂದಿಗೆ ತಂಡ ಸಿದ್ದವಾಗಿದೆ  ಜೂನ್ ತಿಂಗಳಿನಿಂದ ಸೆಪೈಂಬರ್  ತಿಂಗಳ ಅಂತ್ಯದವರೆಗೆ ಈ ತಂಡ ಕಾರ್ಯ ನಿರ್ವಹಿಸಲಿದೆ.   ಉಪ್ಪಿನಂಗಡಿ ಗೃಹರಕ್ಷಕದಳದ ಘಟಕದಲ್ಲಿ  ಉಪ್ಪಿನಂಗಡಿ ಪ್ರಭಾರ ಘಟಕಾಧಿಕಾರಿ ದಿನೇಶ್. ಬಿ.ನೇತೃತ್ವದಲ್ಲಿ ಪ್ರವಾಹರಕ್ಷಣಾ ತಂಡ ವನ್ನು

ಉಪ್ಪಿನಂಗಡಿಗೆ ಗೃಹ ರಕ್ಷಕ ದಳದ ಪ್ರವಾಹ ರಕ್ಷಣಾ ತಂಡ ಆಗಮನ Read More »

ಕರಾವಳಿ, ಕರ್ನಾಟಕ

365ರೂಪಾಯಿಗೆ 365 ದಿನ ವ್ಯಾಲಿಡಿಟಿ ➤ ಭರ್ಜರಿ ಆಫರ್ ಘೋಷಿಸಿದ BSNL

(ನ್ಯೂಸ್ ಕಡಬ) newskadaba.com ನವದೆಹಲಿ,ಜೂ 04: ಲಾಕ್ಡೌನ್ ಸಮಯದಲ್ಲಿ ಬಹುತೇಕರಿಗೆ ಡಾಟಾ ಅವಶ್ಯಕತೆ ಹೆಚ್ಚಾಗಿತ್ತು. ಕಾರಣ ಮನೆಯಿಂದ ಕೆಲಸ, ಸೇರಿದಂತೆ ಹಲುವ ಕಾರಣಗಳಿಗೆ ಅತ್ಯುತ್ತಮ ಪ್ಯಾಕ್ ಮೊರೆ ಹೋಗಿದ್ದರು. ಈ ಸಮಯದಲ್ಲಿ BSNL ಹಲವು ಆಫರ್ ಮೂಲಕ ಗ್ರಾಹಕರ ಬೇಡಿಕೆಯನ್ನೂ ಪೂರೈಸಿದೆ. ಇದೀಗ ಅನ್ಲಾಕ್ 1 ಹಂತ ಪ್ರವೇಶಕ್ಕೆ ಮೊದಲು BSNL ಮತ್ತೆ ವಿಶೇಷ ಆಫರ್ ನೀಡುತ್ತಿದೆ. ಕೇವಲ. 356 ರೂಪಾಯಿಗೆ 365 ದಿನ ವ್ಯಾಲಿಟಡಿಟಿ, ವಾಯ್ಸ್ ಕಾಲ್, ಹಾಗೂ ಡಾಟಾ ಆಫರ್ ಇದರ ಜೊತೆಗೆ 600

365ರೂಪಾಯಿಗೆ 365 ದಿನ ವ್ಯಾಲಿಡಿಟಿ ➤ ಭರ್ಜರಿ ಆಫರ್ ಘೋಷಿಸಿದ BSNL Read More »

ರಾಷ್ಟ್ರೀಯ ನ್ಯೂಸ್, ಲೈಫ್‍ಸ್ಟೈಲ್

ವ್ಹೀಲ್ ಲಾಕ್ ಗೆ ಲಾಕ್ ಆದ ವಾಹನಗಳು ➤ ಕಡಬ ಪೊಲೀಸರ ಕಾರ್ಯಚರಣೆ

(ನ್ಯೂಸ್ ಕಡಬ) newskadaba.com ಕಡಬ,ಜೂ 04: ರಸ್ತೆಯ ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ವಾಹನ ನಿಲ್ಲಿಸಿ ತೆರಳಿದವರಿಗೆ ಕಡಬ ಪೊಲೀಸರು ವ್ಹೀಲ್ ಲಾಕ್‌ ಮಾಡುವ ಮೂಲಕ ಶಾಕ್ ನೀಡಿದ್ದಾರೆ.   ಕಡಬ ಪೇಟೆಗೆ ಆಗಮಿಸುತ್ತಿದ್ದ ಕೆಲವರು ವಾಹನಗಳನ್ನು ಬೇಕಾಬಿಟ್ಟಿಯಾಗಿ ರಸ್ತೆಯಲ್ಲೇ ನಿಲ್ಲಿಸಿ ತೆರಳುತ್ತಿದ್ದರು. ಇಂತಹ  ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟಿರುವ ಕಡಬ ಪೊಲೀಸರು ವ್ಹೀಲ್ ಲಾಕ್ ಮಾಡುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ಕಡಬ ಪೊಲೀಸರು ಪೇಟೆಯ ಟ್ರಾಫಿಕ್ ಸಮಸ್ಯೆಗೆ ಕೊಂಚ ಮಟ್ಟಿನ ಪರಿಹಾರವನ್ನು ಕಂಡು ಹುಡುಕಿದ್ದಾರೆ.  

ವ್ಹೀಲ್ ಲಾಕ್ ಗೆ ಲಾಕ್ ಆದ ವಾಹನಗಳು ➤ ಕಡಬ ಪೊಲೀಸರ ಕಾರ್ಯಚರಣೆ Read More »

ಕರಾವಳಿ, ಕರ್ನಾಟಕ
Scroll to Top