ಒಬ್ಬ ವಿದ್ಯಾರ್ಥಿಗೆ ಮುಂದಿನ ವಿದ್ಯಾಭ್ಯಾಸಕ್ಕೆಂದು ಸ್ಕಾಲರ್ ಶಿಪ್ ಹಣ ನೀಡಿ ➤ ಮಾದರಿ ಎನಿಸಿಕೊಂಡಿದ್ದ ಬಿಎಸ್ಸಿ ವಿದ್ಯಾರ್ಥಿನಿ.
(ನ್ಯೂಸ್ ಕಡಬ) newskadaba.com ಸುಳ್ಯ. ಆ,23: ಡಿಸ್ಟಿಂಕ್ಷನ್ ಮಾರ್ಕ್ನೊಂದಿಗೆ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾದ ಅಜ್ಜಾವರ ಪ್ರೌಢ ಶಾಲಾ ವಿದ್ಯಾರ್ಥಿ,ಅಜ್ಜಾವರ ಬಯಂಬು ಕಾಲನಿಯ ರಮೇಶ್- ಜಾನಕಿ ದಂಪತಿಗಳ ಪುತ್ರ ರಕ್ಷಿತ್ ಬಿ.ಆರ್. ರವರ ಮುಂದಿನ ವಿದ್ಯಾಭ್ಯಾಸಕ್ಕೆ ತನಗೆ ಬಂದ್ದಿದ್ದ ಸ್ಕಾಲರ್ ಶಿಪ್ ಹಣ ನೀಡಿ ವಿದ್ಯಾರ್ಥಿಯೊಬ್ಬಳು ಮಾದರಿ ಎನಿಸಿಕೊಂಡಿದ್ದಾಳೆ. ರಕ್ಷಿತ್ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 563 ಅಂಕ ಪಡೆದು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ. ಬಡ ಕುಟುಂಬದ ಹುಡುಗನಾದ ರಕ್ಷಿತ್ನ ಸಾಧನೆಯನ್ನು ನೋಡಿದ ನೇಲ್ಯಡ್ಕದ ಅಬ್ದುಲ್ ಕುಂಇಯವರ ಪುತ್ರಿ ಪುತ್ತೂರು ವಿವೇಕಾನಂದ ವಿದ್ಯಾಸಂಸ್ಥೆಯ […]










