ಕಡಬ ನ್ಯೂಸ್

ಮಂಗಳೂರು ವಿಮಾನ ದುರಂತ ➤ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಣೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.23.ವಿಮಾನ ದುರಂತದಲ್ಲಿ ಮೃತಪಟ್ಟವರ ಸ್ಮರಣಾರ್ಥ ಕುಟುಂಬದವರಂತೆ ಪ್ರತಿ ವರ್ಷ ನಾವೆಲ್ಲರೂ ಶ್ರದ್ಧಾಂಜಲಿ ಅರ್ಪಿಸುತ್ತಿದ್ದು, ಈ ದುರಂತ ನಮಗೊಂದು ಪಾಠವಾಗಿದೆ ಎಂದು ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಹೇಳಿದರು. ಅವರಿಂದು ಕೂಳೂರು ತಣ್ಣೀರು ಬಾವಿ ಸಮೀಪ ಮಂಗಳೂರು ವಿಮಾನ ದುರಂತದಲ್ಲಿ ಮೃತಪಟ್ಟವರ ನೆನಪಿಗಾಗಿ ನಿರ್ಮಾಣ ಮಾಡಿರುವ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ದುರಂತ ಸಂಭವಿಸಿ ಇಂದಿಗೆ 9 ವರ್ಷಗಳು ಸಂದಿವೆ. ದುರ್ಘಟನೆಯ ವೇಳೆ ಮಂಗಳೂರಿಗರು ಒಂದಾಗಿ ನಿಂತು ನೀಡಿದ ಸಹಕಾರವನ್ನು ಈ ಸಂದರ್ಭದಲ್ಲಿ […]

ಮಂಗಳೂರು ವಿಮಾನ ದುರಂತ ➤ ಜಿಲ್ಲಾಡಳಿತದಿಂದ ಶ್ರದ್ಧಾಂಜಲಿ ಅರ್ಪಣೆ Read More »

ಕರಾವಳಿ

ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳು

(ನ್ಯೂಸ್ ಕಡಬ) newskadaba.com ಅಡುಗೆ ಮಾಹಿತಿ.ಹಣ್ಣುಗಳ ರಾಜ ಎಂದೆ ಹೆಸರುವಾಸಿಯಾದ ಮಾವಿನ ಹಣ್ಣನ್ನು ಹಾಗೇ ಸವಿದು ಸಂಭ್ರಮಿಸಬಹುದು. ಜೊತೆಗೆ ಜ್ಯೂಸು, ಹಲ್ವ, ರಸಾಯನ ಮುಂತಾದ ಸಿಹಿ ಪದಾರ್ಥಗಳನ್ನೂ ಮಾಡಬಹುದು. ಇನ್ನು ಕಾಯಿಯಿಂದಲೂ ಅಷ್ಟೇ ವಿಧಧ ವ್ಯಂಜನಗಳನ್ನು ತಯಾರಿಸಲು ಸಾಧ್ಯವಿದೆ. 1.ಮಾವಿನಕಾಯಿತೊವ್ವೆ  ಬೇಕಾಗುವ ಸಾಮಗ್ರಿ: ಸಣ್ಣಗೆ ಹೆಚ್ಚಿದ ಮಾವಿನಕಾಯಿ, ಹೆಸರುಬೇಳೆ- ಕಾಲು ಕಪ್‌, ತೊಗರಿಬೇಳೆ- ಕಾಲು ಕಪ್‌, ಸಣ್ಣಗೆ ಹೆಚ್ಚಿದ ಟೊಮೇಟೊ-ಕಾಲು ಕಪ್‌, ಹಸಿ ಮೆಣಸು- 4, ಅರಿಶಿನಪುಡಿ, ಚಿಟಿಕಿ ಇಂಗು, ಕರಿಬೇವು, ಕೊತ್ತಂಬರಿ ಸೊಪ್ಪು, ಉಪ್ಪು. ಮಾಡುವ ವಿಧಾನ

ಮಾವಿನ ಹಣ್ಣಿನಿಂದ ತಯಾರಿಸಬಹುದಾದ ಖಾದ್ಯಗಳು Read More »

ಕರಾವಳಿ

ದ.ಕ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಷೆ ಜಾರಿ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22.ದಕ್ಷಿಣ ಕನ್ನಡ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಲ್ಲಿ ವಿವಿಧ ಕಾರಣಗಳಿಂದ ತೆರವಾಗಿರುವ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ 2019 ನಡೆಯಲಿದ್ದು ಈ ಸಮಯ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗೃತ ಕ್ರಮವಾಗಿ ಕಾನೂನು ಸುವ್ಯವಸ್ಥೆ ಕಾಪಾಡುವ ಹಿತದೃಷ್ಠಿಯಿಂದ ಚುನಾವಣೆ ನಡೆಯುವ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಕರ್ನಾಟಕ ಅಬಕಾರಿ ಸನ್ನದುಗಳ (ಸಾಮಾನ್ಯ ಷರತ್ತುಗಳು) ನಿಯಮ 1967 ರ ನಿಯಮ 10-ಬಿ ಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ಪುರಸಭೆಯ

ದ.ಕ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಉಪ ಚುನಾವಣೆ ಹಿನ್ನೆಲೆ ಮುಂಜಾಗೃತ ಕ್ರಮವಾಗಿ ನಿಷೇಧಾಜ್ಷೆ ಜಾರಿ Read More »

ಕರಾವಳಿ

ಭದ್ರತಾ ಪಡೆಗಳಿಂದ ಎನ್ ಕೌಂಟರ್ ➤ ಇಬ್ಬರು ಹಿಜ್ಬುಲ್ ಉಗ್ರಗಾಮಿಗಳು ಮಟಾಶ್

(ನ್ಯೂಸ್ ಕಡಬ) newskadaba.com ಗೋಪಾಲ್ ಪೋರಾ,ಮೇ.22.ಬುಧವಾರ ಬೆಳಗ್ಗೆ ಭದ್ರತಾ ಪಡೆಯ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಬಲಿಯಾಗಿರುವ ಘಟನೆ ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಗೋಪಾಲ್ ಪೋರಾ ಪ್ರದೇಶದಲ್ಲಿ ನಡೆದಿದೆ.ಗೋಪಾಲ್ ಪೋರಾ ಗ್ರಾಮದಲ್ಲಿ ಉಗ್ರರು ಅಡಗಿದ್ದಾರೆಂಬ ಮಾಹಿತಿ ಮೇರೆಗೆ ಭದ್ರತಾಪಡೆ ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿದ್ದರು.   ಈ ವೇಳೆ ಭಯೋತ್ಪಾದಕರು ಭದ್ರತಾಪಡೆ ಮೇಲೆ ಗುಂಡಿನ ದಾಳಿ ನಡೆಸಿದಾಗ ಪ್ರತಿಯಾಗಿ ನಡೆಸಿದ ಎನ್ ಕೌಂಟರ್ ಗೆ ಇಬ್ಬರು ಉಗ್ರರು ಹತರಾಗಿರುವುದಾಗಿ ವರದಿ ತಿಳಿಸಿದೆ.ಬಲಿಯಾಗಿರುವ ಉಗ್ರರನ್ನು ಇನ್ನಷ್ಟೇ

ಭದ್ರತಾ ಪಡೆಗಳಿಂದ ಎನ್ ಕೌಂಟರ್ ➤ ಇಬ್ಬರು ಹಿಜ್ಬುಲ್ ಉಗ್ರಗಾಮಿಗಳು ಮಟಾಶ್ Read More »

ರಾಷ್ಟ್ರೀಯ ನ್ಯೂಸ್

ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ

(ನ್ಯೂಸ್ ಕಡಬ) newskadaba.com ಮೈಸೂರು, ಮೇ.22.  ಮೈಸೂರಿನಲ್ಲಿರುವ ಕೇಂದ್ರಿಯ ಪ್ಲಾಸ್ಟಿಕ್ ತಂತ್ರಜ್ಞಾನ ಸಂಸ್ಥೆ ಸಿಪೆಟ್ (ಕೌಶಲ್ಯ ಮತ್ತು ತಾಂತ್ರಿಕ ತರಬೇತಿ ಕೇಂದ್ರ) ಸಿಪೆಟ್ ಸಂಸ್ಥೆಯು ಭಾರತ ಸರ್ಕಾರದ ರಸಾಯನ ಪಟ್ರೋರಸಾಯನ ಮತ್ತು ರಸಗೊಬ್ಬರ ಸಚಿವಾಲಯದ ಸ್ವಾಯತ್ತ ಸಂಸ್ಥೆಯಾಗಿದೆ. ಸಂಸ್ಥೆಯು ದೇಶದ ಪ್ಲಾಸ್ಟಿಕ್ ಕೈಗಾರಿಕಾ ವಲಯಕ್ಕೆ ಬೇಕಾದ ಮಾನವ ಸಂಪನ್ಮೂಲಕ್ಕೆ ಶೈಕ್ಷಣಿಕ ತರಬೇತಿ ನೀಡಲಾಗುತ್ತಿದೆ. 2019-20 ನೇ ಸಾಲಿನ ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್ ಮಾಲಕ ಅರ್ಜಿ ಆಹ್ವಾನಿಸಿದೆ.ಅರ್ಜಿ ಸಲ್ಲಿಸಲು ಜೂನ್ 30 ಕೊನೆಯ ದಿನ.

ಡಿಪ್ಲೋಮಾ ಮತ್ತು ಪೋಸ್ಟ್ ಡಿಪ್ಲೋಮಾ ಪ್ರವೇಶಕ್ಕೆ ಆನ್‍ಲೈನ್‍ನಲ್ಲಿ ಅರ್ಜಿ ಆಹ್ವಾನ Read More »

ಕರಾವಳಿ

ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಗಿರಿಜನ ರೇಷ್ಮೆ ವಿಸ್ತರಣಾ ಕೇಂದ್ರ ಪುತ್ತೂರು➤ ಹಳೆಯ ಅನುಪಯುಕ್ತ ವಸ್ತುಗಳಬಹಿರಂಗ ಹರಾಜು

  (ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22.ಸರಕಾರಿ ರೇಷ್ಮೆ ಕೃಷಿ ಕ್ಷೇತ್ರ ಕೊಯಿಲಾ, ಪುತ್ತೂರು ತಾಲೂಕು, ದಕ್ಷಿಣ ಕನ್ನಡ , ಇಲ್ಲಿರುವ ಇಲಾಖೆಯ ಹಳೆಯ ಅನುಪಯುಕ್ತ ವಸ್ತುಗಳನ್ನು ಮೇ 27 ರಂದು ಪೂರ್ವಾಹ್ನ 11.30 ಗಂಟೆಗೆ ಸರಕಾರಿ ರೇಷ್ಮೆ ಕೃಷಿ ಕ್ಷೇತ್ರ ಕೊಯಿಲಾದಲ್ಲಿ ಬಹಿರಂಗವಾಗಿ ಹರಾಜು ಮಾಡಲಾಗುವುದು. ಆಸಕ್ತಿಯುಳ್ಳ ಬಿಡ್ಡುದಾರರು ಹರಾಜಿನಲ್ಲಿ ಭಾಗವಹಿಸಬಹುದು ಎಂದು ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಗಿರಿಜನ ರೇಷ್ಮೆ ವಿಸ್ತರಣಾ ಕೇಂದ್ರ ಪುತ್ತೂರು ದಕ್ಷಿಣ ಕನ್ನಡ ಇವರ ಪ್ರಕಟಣೆ ತಿಳಿಸಿದೆ.

ರೇಷ್ಮೆ ಕೃಷಿ ವಿಸ್ತರಣಾಧಿಕಾರಿ ಗಿರಿಜನ ರೇಷ್ಮೆ ವಿಸ್ತರಣಾ ಕೇಂದ್ರ ಪುತ್ತೂರು➤ ಹಳೆಯ ಅನುಪಯುಕ್ತ ವಸ್ತುಗಳಬಹಿರಂಗ ಹರಾಜು Read More »

ಕರಾವಳಿ

ಮಾವು ಬೆಳೆಗಾರರಿಗೊಂದು ಸಿಹಿ ಸುದ್ದಿ➤ಮಧ್ಯವರ್ತಿ ವ್ಯವಹಾರವಿಲ್ಲದೆ ನೇರವಾಗಿ ಬಳಕೆದಾರರಿಗೆ ಮಾರಾಟ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.22.ಮಾವು ಅಭಿವೃದ್ದಿ ಹಾಗೂ ಮಾರಾಟ ಮಂಡಳಿ, ಬೆಂಗಳೂರು ರವರ ಸಹಯೋಗದಲ್ಲಿ ಮಾವು ಬೆಳೆಗಾರರಿಂದ ನೇರವಾಗಿ ಬಳಕೆದಾರರಿಗೆ ಮಾರಾಟ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಮೇ 24 ರಂದು ಕದ್ರಿ ಉದ್ಯಾನವನ, ಮಂಗಳೂರು ಇಲ್ಲ್ಲಿ ರೈತರಿಂದ ನೇರವಾಗಿ ಬಳಕೆದಾರರಿಗೆ ಮಾವು ಮಾರಾಟ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತಿದೆ. ಸಾರ್ವಜನಿಕರು ಈ ಮಾವು ಮಾರಾಟದ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ಭಾಗವಹಿಸಿದ ರೈತರಿಗೆ ಪ್ರೋತ್ಸಾಹಿಸಲು ಸಾರ್ವಜನಿಕರಲ್ಲಿ ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ, ಮಂಗಳೂರು ಇವರ ತಿಳಿಸಿದ್ದಾರೆ.

ಮಾವು ಬೆಳೆಗಾರರಿಗೊಂದು ಸಿಹಿ ಸುದ್ದಿ➤ಮಧ್ಯವರ್ತಿ ವ್ಯವಹಾರವಿಲ್ಲದೆ ನೇರವಾಗಿ ಬಳಕೆದಾರರಿಗೆ ಮಾರಾಟ Read More »

ಕರಾವಳಿ

ವಾಲ್ನಟ್ ಸೇವನೆಯಿಂದ ದೂರವಾಗುತ್ತದೆ, ಹೃದಯ ಸಂಬಂಧಿ ಕಾಯಿಲೆ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.ಆರೋಗ್ಯ ಮಾಹಿತಿ. ಅಮೆರಿಕನ್‌ ಹಾರ್ಟ್‌ ಅಸೋಸಿಯೇಶನ್‌ ಜರ್ನಲ್ನಲ್ಲಿ ಪ್ರಕಟವಾದ ಅಧ್ಯಯನ ದಲ್ಲಿ ಡಯೆಟ್‌ನಲ್ಲಿ ವಾಲ್ನಟ್ ಸೇರಿಸಿದರೆ ಸ್ಯಾಚುರೇಟೆಡ್‌ ಕೊಬ್ಬಿನ ಬದಲಾವಣೆ ಅಂಶವನ್ನು ಪರೀಕ್ಷಿಸಲಾಯಿತು.ಪ್ರತಿದಿನ ವಾಲ್ನಟ್ ಸೇವಿಸುವವರಲ್ಲಿ ಕೆಳಮಟ್ಟದ ಸ್ಯಾಚುರೇಟೆಡ್‌ ಕೊಬ್ಬು ತುಂಬಿರುತ್ತದೆ. ಇವರಲ್ಲಿ ರಕ್ತದೊತ್ತಡವು ಕೂಡ ಕೆಳಮಟ್ಟದಲ್ಲಿರುತ್ತದೆ. ಈ ಸಂಶೋಧನೆಗಾಗಿ ಸಂಶೋಧಕರು 30-65 ವರ್ಷಗಳ ನಡುವಿನ ಅಧಿಕ ತೂಕ, ಸ್ಥೂಲಕಾಯ ಹೊಂದಿರುವವರನ್ನು ಪರೀಕ್ಷೆಗೆ ಒಳಪಡಿಸಲಾಯಿತು. ಪ್ರತಿದಿನ ಒಂದಷ್ಟು ವಾಲ್ನಟ್ ಸೇವಿಸುವುದರಿಂದ ಹೃದಯ ಸಂಬಂಧಿಸಿ ಕಾಯಿಲೆ ಗಳಿಂದ ದೂರವಿರಬಹುದು ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ.

ವಾಲ್ನಟ್ ಸೇವನೆಯಿಂದ ದೂರವಾಗುತ್ತದೆ, ಹೃದಯ ಸಂಬಂಧಿ ಕಾಯಿಲೆ Read More »

ಆರೋಗ್ಯ ಮಾಹಿತಿ

ಕೊರಿಯಾವನ್ನು ಕೆಡವಿದ ಭಾರತ,ವನಿತಾ ಹಾಕಿ ಸರಣಿ

(ನ್ಯೂಸ್ ಕಡಬ) newskadaba.com ದಕ್ಷಿಣ ಕೊರಿಯಾ,ಮೇ.21. ಸೋಮವಾರದ ಮೊದಲ ಪಂದ್ಯದಲ್ಲಿ 2-1 ಗೋಲುಗಳ ಜಯ ದಾಖಲಿಸಿದೆ.ಯುವ ಸ್ಟ್ರೈಕರ್‌ ಲಾಲ್ರೆಮ್ಸಿಯಾಮಿ (20ನೇ ನಿಮಿಷ) ಮತ್ತು ನವನೀತ್‌ ಕೌರ್‌ (40ನೇ ನಿಮಿಷ) ಗೋಲು ಬಾರಿಸಿದರು. ಭಾರತದ ಆಕ್ರಮಣದ ಬಳಿಕ, ಪಂದ್ಯದ 48ನೇ ನಿಮಿಷದಲ್ಲಿ ಹೀಜಿಯಾಂಗ್‌ ಅವರಿಂದ ದಕ್ಷಿಣ ಕೊರಿಯಾದ ಏಕೈಕ ಗೋಲು ದಾಖಲಾಯಿತು.ಆತಿಥೇಯ ದಕ್ಷಿಣ ಕೊರಿಯಾ ವಿರುದ್ಧದ 3 ಪಂದ್ಯಗಳ ವನಿತಾ ಹಾಕಿ ಸರಣಿಯಲ್ಲಿ ಭಾರತ ಶುಭಾರಂಭ ಮಾಡಿದೆ. ಆತಿಥೇಯರ ಮೇಲುಗೈಗೆ ಗೋಲ್ಕೀಪರ್‌ ಸವಿತಾ ತಡೆಯಾಗಿ ನಿಂತರು.ಸರಣಿಯ ದ್ವಿತೀಯ ಪಂದ್ಯ ಬುಧವಾರ

ಕೊರಿಯಾವನ್ನು ಕೆಡವಿದ ಭಾರತ,ವನಿತಾ ಹಾಕಿ ಸರಣಿ Read More »

ಕ್ರೀಡಾ ನ್ಯೂಸ್

6ನೇ ತರಗತಿ ರಿಂದ ಪಿ.ಯು.ಸಿ ವರೆಗಿನ ವಿಧ್ಯಾರ್ಥಿಗಳಿಗಾಗಿ ಫಿಲಾಟೆಲಿ ಬೇಸಿಗೆ ಶಿಬಿರ➤ ಅಂಚೆ ಇಲಾಖೆ ಮಂಗಳೂರು ವಿಭಾಗ

(ನ್ಯೂಸ್ ಕಡಬ) newskadaba.com ಮಂಗಳೂರು, ಮೇ.21.ಮೇ 24 ಮತ್ತು 25 ರಂದು ಅಂಚೆ ಇಲಾಖೆ ಮಂಗಳೂರು ವಿಭಾಗವು ತರಗತಿ 6 ರಿಂದ ಪಿ.ಯು.ಸಿ ವರೆಗಿನ ವಿಧ್ಯಾರ್ಥಿಗಳಿಗಾಗಿ ಫಿಲಾಟೆಲಿ ಬಗ್ಗೆ ಬೇಸಿಗೆ ಶಿಬಿರವನ್ನು ಹಮ್ಮಿಕೊಂಡಿದೆ. ಈ ಶಿಬಿರದಲ್ಲಿ ಫಿಲಾಟೆಲಿ ಬಗೆಗಿನ ಮೂಲ ಮಾಹಿತಿ, ಸ್ಟಾಂಪ್ ಪ್ರದರ್ಶನದ ತಯಾರಿ, ಫಿಲಾಟೆಲಿ ಬ್ಯೂರೋ ಭೇಟಿ ಮುಂತಾದವುಗಳ ಬಗ್ಗೆ ಮಾಹಿತಿ ನೀಡಲಾಗುವುದು. ಸ್ಟಾಂಪ್ ಕಲೆಕ್ಷನ್ ಉತ್ತಮ ಹವ್ಯಾಸವಾಗಿದ್ದು, ಜ್ಞಾನವೃದ್ದಿಗೆ ಉತ್ತಮ ದಾರಿಯಾಗಿದೆ. ರಿಜಿಸ್ಟ್ರೇಷನ್ ದರ 200/- ರಿಜಿಸ್ಟ್ರೇಷನ್‍ಗಾಗಿ ದೂರವಾಣಿ ಸಂಖ್ಯೆ: 0824-2218400,2217076. ಇ-ಮೇಲ್

6ನೇ ತರಗತಿ ರಿಂದ ಪಿ.ಯು.ಸಿ ವರೆಗಿನ ವಿಧ್ಯಾರ್ಥಿಗಳಿಗಾಗಿ ಫಿಲಾಟೆಲಿ ಬೇಸಿಗೆ ಶಿಬಿರ➤ ಅಂಚೆ ಇಲಾಖೆ ಮಂಗಳೂರು ವಿಭಾಗ Read More »

ಕರಾವಳಿ
Scroll to Top