ಕಡಬ ನ್ಯೂಸ್

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.14.ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಕೋಪ ತುರ್ತು ಪರಿಸ್ಥಿತಿಯನ್ನು ಅವಲೋಕಿಸಿ ಸೂಕ್ತ ಕ್ರಮಕೈಗೊಳ್ಳಲು ನೋಡಲ್ ಅಧಿಕಾರಿಗಳನ್ನು ನಿಯೋಜನೆಗೊಳಿಸಲಾಗಿದೆ.ಜಿಲ್ಲೆಯಾದ್ಯಂತ ಬುಧವಾರದಿಂದ ಮುಂಗಾರು ಮಳೆ ಬಿರುಸು ಪಡೆದಿದ್ದು, ನಗರದ ವಿವಿಧೆಡೆ ಧಾರಾಕಾರ ಮಳೆಯಿಂದಾಗಿ ಮರಗಳು ಬಿದ್ದು ಹಾಗೂ ರಸ್ತೆ ಕಾಮಗಾರಿಗಳಿಂದಾಗಿ ನೀರು ಹರಿಯುವಲ್ಲಿ ತೊಂದರೆಯಾಗಿತ್ತು. ಕಳೆದ ಸಾಲೀನ ಮಳೆಯ ಅನುಭವವನ್ನು ಹಿನ್ನಲೆಯಾಗಿರಿಸಿ ಜಿಲ್ಲಾಡಳಿತ ನೋಡಲ್ ಅಧಿಕಾರಿಗಳನ್ನೊಳಗೊಂಡಂತೆ ಪ್ರಾಕೃತಿಕ ವಿಕೋಪ ನಿರ್ವಹಣೆಗೆ ಕೈಗೊಂಡ ಕ್ರಮಗಳಿಂದಾಗಿ ಸಮಸ್ಯೆ ವರದಿಯಾದ ತಕ್ಷಣವೇ ಪರಿಹರಿಸಲು ಕ್ರಮಕೈಗೊಳ್ಳಲಾಗಿದೆ. ಕೃತಕ ನೆರೆಗೆ ಕಾರಣಗಳನ್ನು […]

ವಿಕೋಪ ನಿರ್ವಹಣೆಗೆ ಅಧಿಕಾರಿಗಳ ತಂಡ ನೇಮಕ Read More »

ಕರಾವಳಿ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ

(ನ್ಯೂಸ್ ಕಡಬ) newskadaba.com ಕಲ್ಲುಗುಡ್ಡೆ, ಜೂನ್.13. ಈ ವರ್ಷದ ಮಳೆಗಾಲ ಆರಂಭಗೊಂಡಿದ್ದು, ಕಳೆದ ಒಂದೆರಡು ದಿನದಿಂದ ಬಿಟ್ಟು ಬಿಟ್ಟು ಸುರಿಯುತ್ತಿರುವ ಮಳೆಗೆ ಕಡಬ ತಾಲೂಕಿನ ಗ್ರಾಮೀಣ ಸಂಪರ್ಕ ರಸ್ತೆಗಳು ಕೆಸರುಮಯಗೊಂಡು ವಾಹನ ಸವಾರರು ಸಂಕಷ್ಟಪಡುತ್ತಿದ್ದಾರೆ. ಕಡಬ-ಕಲ್ಲುಗುಡ್ಡೆ ಸಂಪರ್ಕ ಕಲ್ಪಿಸುವ ರಸ್ತೆಯ ಕಡಬ ಹಳೆಸ್ಟೇಷನ್‍ನಿಂದ ಕಾಯರಡ್ಕ ವರೆಗೆ ಅಲ್ಲಲ್ಲಿ ರಸ್ತೆಗಳಲ್ಲಿ ಹೊಂಡ ಗುಂಡಿಗಳು ನಿರ್ಮಾಣಗೊಂಡು, ನೀರು ನಿಂತು ಕೆಸರುಮಯಗೊಂಡಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸುತ್ತಿದ್ದು, ಅಪಾಯದ ಸ್ಥಿತಿ ತಂದೊಡ್ಡುತ್ತಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಸ್ತೆಯಲ್ಲಿ ಉಂಟಾಗಿರುವ

ಆರಂಭದ ಮಳೆಗೆ ರಸ್ತೆಗಳೆಲ್ಲ ಕೆಸರುಮಯ➤ವಾಹನ ಸಂಚಾರ ಕಷ್ಟಕರ Read More »

ಕರಾವಳಿ

ಜಗನ್ ರೆಡ್ಡಿಯನ್ನು ವಿಜಯವಾಡದಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ➤ಜೆಡಿಎಸ್ ಯುವ ನಾಯಕನಿಗೆ ಸಿಕ್ತು ಆಂಧ್ರ ಸಿ.ಎಂನಿಂದ ಸಲಹೆ

(ನ್ಯೂಸ್ ಕಡಬ) newskadaba.com ಮಂಡ್ಯ, ಜೂನ್.13. ಈ ಬಾರಿ ಮಂಡ್ಯ ಚುನಾವಣೆಯಲ್ಲಿ ಸುಮಲತಾ ಅಂಬರೀಷ್​ ವಿರುದ್ಧ ಸೋತಿದ್ದ ಜೆಡಿಎಸ್​ನ ಯುವ ನಾಯಕ ನಿಖಿಲ್​ ಕುಮಾರಸ್ವಾಮಿ ಆಂಧ್ರಪ್ರದೇಶ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ ಅವರನ್ನು ವಿಜಯವಾಡದಲ್ಲಿ ಭೇಟಿಯಾಗಿ ಸಿಎಂ ಸ್ಥಾನ ಅಲಂಕರಿಸಿದ್ದಕ್ಕಾಗಿ ಅವರನ್ನು ಅಭಿನಂದಿಸಿದರು. ಆಂಧ್ರದಲ್ಲಿ ಜಗನ್​ ಅಣ್ಣಾ ಎಂದೇ ಅವರು ಪರಿಚಿತರಾಗಿದ್ದಾರೆ. ಅವರ ಹತ್ತು ವರ್ಷಗಳ ಸುದೀರ್ಘ ಹೋರಾಟದ ದಾರಿ ಎಲ್ಲ ಯುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ. ಹಾಗೇ ಜಗನ್​ ಮೋಹನ್​ ರೆಡ್ಡಿಯವರು ಕರ್ನಾಟಕ ರಾಜಕಾರಣವನ್ನು, ಇಲ್ಲಿನ ಸನ್ನಿವೇಶಗಳನ್ನು ಸೂಕ್ಷ್ಮವಾಗಿ

ಜಗನ್ ರೆಡ್ಡಿಯನ್ನು ವಿಜಯವಾಡದಲ್ಲಿ ಭೇಟಿಯಾದ ನಿಖಿಲ್ ಕುಮಾರಸ್ವಾಮಿ➤ಜೆಡಿಎಸ್ ಯುವ ನಾಯಕನಿಗೆ ಸಿಕ್ತು ಆಂಧ್ರ ಸಿ.ಎಂನಿಂದ ಸಲಹೆ Read More »

ಕರ್ನಾಟಕ

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ

(ನ್ಯೂಸ್ ಕಡಬ) newskadaba.com. ಆರೋಗ್ಯ ಮಾಹಿತಿ:ಪದೇಪದೆ ಕಾಡುವ ಮಲಬದ್ಧತೆಗೆ ಕಡಿಮೆ ಪ್ರಮಾಣದಲ್ಲಿರುವಾಗ ಮನೆಯಲ್ಲಿಯೇ ಸರಳ ಉಪಾಯಗಳಿಂದ ನಿರ್ವಹಿಸಬಹುದು.ಮಲದ್ವಾರದ ಹೊರಗಡೆ ಅನುಭವಕ್ಕೆ ಬರುತ್ತಿರುವ ಮೂಲವ್ಯಾಧಿ ಗಡ್ಡೆಗೆ ಬೆರಳುಗಳ ಸಹಾಯದಿಂದ ಅಲೋವೆರಾ ಜೆಲ್​ನ್ನು ಪ್ರತಿದಿನ ಮಲವಿಸರ್ಜನೆ ನಂತರ ಹಚ್ಚಬೇಕು. ಹಿಪ್​ಬಾತ್ ಟಬ್​ನಲ್ಲಿ ಉಗುರುಬಿಸಿ ನೀರು ತುಂಬಿಸಿ ಇದಕ್ಕೆ 100 ಮಿ. ಆಪಲ್ ಸಿಡೆರ್ ವಿನೆಗರ್ ಸೇರಿಸಿ ಟಬ್​ನಲ್ಲಿ 20-30 ನಿಮಿಷ ಕುಳಿತುಕೊಳ್ಳುವುದು ಅನುಕೂಲಕರ. 5-6 ಚಮಚ ತ್ರಿಫಲಾ ಪುಡಿಯನ್ನು ಕುದಿಸಿ ಕಷಾಯ ತಯಾರಿಸಿ ಅರ್ಧ ಹಿಪ್ ಬಾತ್ ಟಬ್​ಗೆ ಉಗುರುಬಿಸಿ ನೀರು

ಮೂಲವ್ಯಾಧಿಗೆ ಇಲ್ಲಿದೆ ಸೂಕ್ತ ಪರಿಹಾರ Read More »

ಕರಾವಳಿ

ಟಿಕ್ ಟಾಕ್ ವಿಡಿಯೋ ಆ್ಯಪ್ ಗೆ ಬಲಿಯಾದ ವಿವಾಹಿತ ಮಹಿಳೆ

(ನ್ಯೂಸ್ ಕಡಬ) newskadaba.com ಚೆನ್ನೈ, ಜೂನ್.13.ಪೆರಂಬೂರ್​ ಮೂಲದ ಅನಿತಾ(24) ಎಂಬಾಕೆ ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ವಿಡಿಯೋವನ್ನು ಟಿಕ್​ ಟಾಕ್​ನಲ್ಲೇ ಹರಿಬಿಟ್ಟಿದ್ದಾಳೆ ಎಂದು ಹೇಳಲಾಗಿದೆ.ಮೃತೆ ಅನಿತಾ, ಪಳನಿವೇಲ್(24)​ ಎಂಬುವರೊಂದಿಗೆ ವಿವಾಹವಾಗಿದ್ದು, ನಾಲ್ಕು ವರ್ಷದ ಹೆಣ್ಣು ಮಗಳು ಹಾಗೂ ಎರಡು ವರ್ಷದ ಗಂಡು ಮಗುವಿನ ತಾಯಿಯಾಗಿದ್ದಳು. ಟಿಕ್​ಟಾಕ್​ ವಿಡಿಯೋ ಆ್ಯಪ್​ನಲ್ಲಿ ಹೆಚ್ಚಿನ ಸಮಯ ಕಳೆಯುತ್ತಿದ್ದ ಪತ್ನಿಯನ್ನು ಬೈದಿದ್ದಕ್ಕೆ ಮನನೊಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಮಿಳುನಾಡಿನ ಅರಿಯಲೂರ್​ನಲ್ಲಿ ನಡೆದಿರುವುದಾಗಿ ಗುರುವಾರ ವರದಿಯಾಗಿದೆ ಆತ್ಮಹತ್ಯೆಗೂ ಮುನ್ನ ತನ್ನ ಹೇಳಿಕೆಯನ್ನು ವಿಡಿಯೋದಲ್ಲಿ

ಟಿಕ್ ಟಾಕ್ ವಿಡಿಯೋ ಆ್ಯಪ್ ಗೆ ಬಲಿಯಾದ ವಿವಾಹಿತ ಮಹಿಳೆ Read More »

ರಾಷ್ಟ್ರೀಯ ನ್ಯೂಸ್

ಎಫ್ಐಎಚ್ ಹಾಕಿ ಸೀರಿಸ್➤ಸೆಮಿಫೈನಲ್ ನಲ್ಲಿ ಭಾರತ

(ನ್ಯೂಸ್ ಕಡಬ) newskadaba.com ಭುವನೇಶ್ವರ, ಜೂನ್.13.ಎಫ್ಎಚ್ ಹಾಕಿ ಸೀರಿಸ್‌ ಫೈನಲ್ಸ್’ನಲ್ಲಿ ಪ್ರಚಂಡ ಪ್ರದರ್ಶನ ನೀಡಿದ ಭಾರತ 10-0 ಗೋಲುಗಳ ಅಂತರದಿಂದ ಉಜ್ಬೆಕಿಸ್ಥಾನ ತಂಡವನ್ನು ಸೋಲಿಸಿ ಸೆಮಿಫೈನಲ್ ಹಂತ ಪ್ರವೇಶಿ ಸಿದೆ. ‘ಎ’ ವಿಭಾಗದಲ್ಲಿರುವ ಭಾರತ ಮೂರೂ ಪಂದ್ಯಗಳನ್ನು ಜಯಿಸಿ 9 ಅಂಕಗಳೊಂದಿಗೆ ಗುಂಪಿನ ಅಗ್ರಸ್ಥಾನಿ ಎನಿಸಿದೆ. ಆಕಾಶ್‌ದೀಪ್‌ ಸಿಂಗ್‌ ಅವರ ಹ್ಯಾಟ್ರಿಕ್‌ ಸಾಹಸದಿಂದ ‘ಈ ಸಾಧನೆ ಸಾಧ್ಯವಾಯಿತು.ಸೋಮವಾರ ರಾತ್ರಿಯ ಪಂದ್ಯದಲ್ಲಿ ಭಾರತ ಆರಂಭದಿಂದಲೂ ಅಬ್ಬರದ ಆಟಕ್ಕಿಳಿಯಿತು. ವರುಣ್‌ 4ನೇ ನಿಮಿಷದಲ್ಲಿ ಭಾರತದ ಖಾತೆ ತೆರೆದರು. ಬಳಿಕ ಆಕಾಶ್‌ದೀಪ್‌

ಎಫ್ಐಎಚ್ ಹಾಕಿ ಸೀರಿಸ್➤ಸೆಮಿಫೈನಲ್ ನಲ್ಲಿ ಭಾರತ Read More »

ಕ್ರೀಡಾ ನ್ಯೂಸ್

ಶಿವಸೇನೆ ಯುವ ನಾಯಕನಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ

(ನ್ಯೂಸ್ ಕಡಬ) newskadaba.com ಮುಂಬಯಿ, ಜೂನ್.13.29 ಹರೆಯದ ಆದಿತ್ಯ ಠಾಕ್ರೆ ಅವರನ್ನು ಫ‌ಡ್ನವೀಸ್‌ ಬಳಿಕ ಆದರ್ಶ ಅಭ್ಯರ್ಥಿಯನ್ನಾಗಿಸುವ ಸಿದ್ದತೆಯಲ್ಲಿ ಶಿವಸೇನೆ ತೊಡಗಿದೆ. ಆದಿತ್ಯ ಠಾಕ್ರೆ ಅವರಿಗೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಹುದ್ದೆ ನೀಡುವ ಸಾಧ್ಯತೆಗಳಿವೆ ಎಂದು ವರದಿಯೊಂದು ಹೇಳಿದೆ. ವಿಧಾನಸಭಾ ಚುನಾವಣೆ ಸನಿಹವಾಗಿರುವ ವೇಳೆಯಲ್ಲಿ ಈ ಬಗ್ಗೆ ಹೇಳಲಾಗಿದ್ದು, ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಅವರೊಂದಿಗೆ ಈಗಾಗಲೇ ಈ ಬಗ್ಗೆ ಮಾತುಕತೆಗಳು ನಡೆದಿವೆ ಎನ್ನಲಾಗಿದೆ. ಆದಿತ್ಯ ಠಾಕ್ರೆ ಅವರನ್ನು ಚುನಾವಣಾ ಸ್ಪರ್ಧೆಗೆ ಇಳಿಸಲು ಶಿವಸೇನೆ ಸಿದ್ಧತೆ ಮಾಡಿಕೊಂಡಿದೆ ಎಂದು ಈ

ಶಿವಸೇನೆ ಯುವ ನಾಯಕನಿಗೆ ಮಹಾರಾಷ್ಟ್ರ ಡಿಸಿಎಂ ಪಟ್ಟ Read More »

ರಾಷ್ಟ್ರೀಯ ನ್ಯೂಸ್

ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು➤ಅಭಿನಂದನಾ ಕಾರ್ಯಕ್ರಮ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು ಇವರು ಸಂಘದ ಅಧ್ಯಕ್ಷರಾಗಿರುವ ಬಿ ಧರ್ಮಣ್ಣ ನಾಯ್ಕ್ ಇವರ ನೇತೃತ್ವದಲ್ಲಿ ಹೊಸದಾಗಿ ನೇಮಕಗೊಂಡಿರುವ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಇವರನ್ನು ಹೂಗುಚ್ಛ ನೀಡಿ ಅಭಿನಂದಿಸಿದರು. ಮತ್ತು ಶುಭೋದಯ ಕೂಡ್ಲು, ಕಾರ್ಯದರ್ಶಿ ಆರ್ ಲೋಹಿದಾಸ್, ಜೊತೆ ಕಾರ್ಯದರ್ಶಿ ಮೋಹನ್ ರಾವ್ ಹಾಗೂ ಸದಸ್ಯರಾದ ಬಿ.ಎನ್ ಸನಿಲ್, ಶ್ರೀನಿವಾಸ್ ನಾಯಕ್, ಸುರೇಶ್ ರಾವ್ ಮತ್ತು ಶಶಿಧರ್ ಶೆಟ್ಟಿಯವರು ಉಪಸ್ಥಿತರಿದ್ದರು.

ಹಳೆ ವಿದ್ಯಾರ್ಥಿ ಸಂಘ, ಹಂಪನಕಟ್ಟೆ ಮಂಗಳೂರು➤ಅಭಿನಂದನಾ ಕಾರ್ಯಕ್ರಮ Read More »

ಕರಾವಳಿ

ತಾಲೂಕು ಪಂಚಾಯತ್ ಕಚೇರಿ ಬಂಟ್ವಾಳ➤ಟೆಂಡರ್ ಆಹ್ವಾನ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ತಾಲೂಕು ಪಂಚಾಯತ್ ಬಂಟ್ವಾಳ ಕಚೇರಿಗೆ ಡಾಟಾ ಎಂಟ್ರಿ ಆಪರೇಟರ್ ಹಾಗೂ ಗ್ರೂಪ್ ಡಿ ಸೇವೆಯನ್ನು ಹೊರಸಂಪನ್ಮೂಲ ಏಜೆನ್ಸಿಯ ಮುಖಾಂತರ ಪಡೆಯುವ ಬಗ್ಗೆ ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಟೆಂಡರ್ ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಅರ್ಹ ಬಿಡ್‍ದಾರರು ಇ-ಸಂಗ್ರಹಣಾ ವೇದಿಕೆ ವೆಬ್‍ಸೈಟ್  http.//eproc.karnataka.gov.in  ನಲ್ಲಿ ಟೆಂಡರ್ ವಿವರಗಳನ್ನು ಪಡೆಯಬಹುದು. ಇ-ಪ್ರೊಕ್ಯೂರ್‍ಮೆಂಟ್ ಮೂಲಕ ಪ್ರಸ್ತಾವನೆ ಸಲ್ಲಿಸಲು ಕೊನೆಯ ದಿನ ಜುಲೈ 11 ರಂದು ಅಪರಾಹ್ನ 4 ಗಂಟೆ ಎಂದು ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತ್ ಬಂಟ್ವಾಳ ಇವರ ಪ್ರಕಟಣೆ

ತಾಲೂಕು ಪಂಚಾಯತ್ ಕಚೇರಿ ಬಂಟ್ವಾಳ➤ಟೆಂಡರ್ ಆಹ್ವಾನ Read More »

ಕರಾವಳಿ

ದ.ಕ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರ

(ನ್ಯೂಸ್ ಕಡಬ) newskadaba.com ಮಂಗಳೂರು, ಜೂನ್.13.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರಗಳನ್ನು ಜಿಲ್ಲೆಯ ಖಾಸಗಿ ವೈದ್ಯಕೀಯ ಕಾಲೇಜುಗಳ ಸಹಯೋಗದೊಂದಿಗೆ ಜೂನ್ 15 ರಂದು ನಡೆಸಲು ಕಾರ್ಯಕ್ರಮ ಹಮ್ಮಿಕೊಂಡಿದೆ. ಪುತ್ತೂರು ತಾಲೂಕಿನ ಪಾಣಾಜೆ ಮತ್ತು ಜೂನ್ 18 ರಂದು ಬೆಳ್ತಂಗಡಿ ತಾಲೂಕಿನ ಕಣಿಯೂರು, ಪುತ್ತೂರು ತಾಲೂಕಿನ ಕೊಯಿ,ಉಪ್ಪಿನಂಗಡಿ, ಸುಳ್ಯ ತಾಲೂಕಿನ ಬೆಳ್ಳಾರೆ ಮತ್ತು ಜೂನ್ 19 ರಂದು ಬೆಳ್ತಂಗಡಿ ತಾಲೂಕಿನ ಕೊಕ್ಕಡ ಆರೋಗ್ಯ ಕೇಂದ್ರಗಳಲ್ಲಿ ಏರ್ಪಡಿಸಲಾಗಿದೆ. ಈ ಶಿಬಿರದ ಸದುಪಯೋಗವನ್ನು ಎಂಡೋಸಲ್ಫಾನ್

ದ.ಕ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ಸಂತ್ರಸ್ತರಿಗಾಗಿ ನಡೆಯಲಿರುವ ವಿಶೇಷ ಆರೋಗ್ಯ ತಪಾಸಣಾ ಶಿಬಿರ Read More »

ಕರಾವಳಿ
Scroll to Top