ಬಿಳಿನೆಲೆ -ಕೈಕಂಬ :ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆ ➤ ವ್ಯಕ್ತಿಯ ಸಾವಿನ ಸುತ್ತ ಅನುಮಾನದ ಹುತ್ತ
(ನ್ಯೂಸ್ ಕಡಬ) newskadaba.com ಬಿಳಿನೆಲೆ, ಡಿ.12: ರಾಂಪತ್ರೆ ಕೊಯ್ಯಲು ಕಾಡಿಗೆ ತೆರಳಿದ್ದ ವ್ಯಕ್ತಿ ವಾರದ ಬಳಿಕ ಶವವಾಗಿ ಪತ್ತೆಯಾದ ಘಟನೆ ಕಡಬ ತಾಲೂಕಿನ ಬಿಳಿನೆಯಲ್ಲಿ ವರದಿಯಾಗಿದೆ. ಬಿಳಿನೆಲೆ ಗ್ರಾಮದ ಮೂಳೆ ನಿವಾಸಿ ವೆಂಕಪ್ಪ ಗೌಡ ಹಾಗೂ ಬಾಲಚಂದ್ರ ಎಂಬುವರು ಡಿ.05 ರಂದು ರಾಂಪತ್ರೆ ಕೊಯ್ಯಲು ಭಾಗ್ಯ ಮಲೆ ಅರಣ್ಯ ಪ್ರದೇಶಕ್ಕೆ ತೆರಳಿದ್ದಾರೆ. ತೆರಳುವ ಮುನ್ನ ಡಿ.08 ಅಥವಾ ಡಿ.09 ರಂದು ಕಾಡಿನಿಂದ ಹಿಂತಿರುಗಿ ಬರುವುದಾಗಿ ಮನೆಯವರಲ್ಲಿ ತಿಳಿಸಿ ಪ್ರತಿ ವರ್ಷದಂತೆ ಈ ಭಾರಿಯು ತೆರಳಿದ್ದಾರೆ. ಆದರೆ ಡಿ.11 […]









