Ashitha Soodlu

800 ಕೋಟಿ ದಾಟಿದ ವಿಶ್ವ ಜನಸಂಖ್ಯೆ !

(ನ್ಯೂಸ್ ಕಡಬ) newskadaba.com ನ.15: ಇಂದು ವಿಶ್ವದ ಜನಸಂಖ್ಯೆಯು 800 ಕೋಟಿ ತಲುಪುತ್ತಿದ್ದಂತೆ, 177 ಮಿಲಿಯನ್ (17.7 ಕೋಟಿ) ಜನರ ಮೂಲಕ ಭಾರತವು ಈ ಮೈಲುಗಲ್ಲಿಗೆ ಅತಿದೊಡ್ಡ ಕೊಡುಗೆ ನೀಡಿದೆ. ಆದರೆ ಜಾಗತಿಕ ಜನಸಂಖ್ಯೆಯಲ್ಲಿ ಮುಂದಿನ ಶತಕೋಟಿಗೆ ಚೀನಾದ ಕೊಡುಗೆ ಋಣಾತ್ಮಕವಾಗಿರುತ್ತದೆ ಎಂದು ವಿಶ್ವ ಸಂಸ್ಥೆ ಹೇಳಿದೆ.ಮುಂದಿನ ವರ್ಷದ ವೇಳೆಗೆ ಭಾರತವು ಚೀನಾವನ್ನು ಹಿಂದಿಕ್ಕುವ ನಿರೀಕ್ಷೆಯಿದೆ. ಯುಎನ್ ಜನಸಂಖ್ಯಾ ನಿಧಿ, ಜಾಗತಿಕ ಜನಸಂಖ್ಯೆಯು 800 ಕೋಟಿ ತಲುಪಿದೆ ಎಂದು ಗುರುತಿಸಲು ವಿಶೇಷ ಗ್ರಾಫಿಕ್‌ ಮಾಡಿದ್ದು ಏಷ್ಯಾ ಮತ್ತು […]

800 ಕೋಟಿ ದಾಟಿದ ವಿಶ್ವ ಜನಸಂಖ್ಯೆ ! Read More »

ಅಂತರ್ರಾಷ್ಟ್ರೀಯ ನ್ಯೂಸ್

108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ

(ನ್ಯೂಸ್ ಕಡಬ) newskadaba.com ನ.15: ಭಾರತದ ಪ್ರಧಾನಿ ನರೇಂದ್ರ ಮೋದಿ ನವೆಂಬರ್ 11ರ ಶುಕ್ರವಾರ ಬೆಂಗಳೂರಿನಲ್ಲಿ ನಾಡಪ್ರಭು ಕೆಂಪೇಗೌಡರ 108 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಿದ್ದಾರೆ. ಆದರೆ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡಲು ಇನ್ನೂ ಅವಕಾಶ ನೀಡಿಲ್ಲ ಎಂಬುದು ಆಕ್ರೋಶಕ್ಕೆ ಕಾರಣವಾಗಿದೆ. ಪ್ರತಿಮೆ ಅನಾವರಣಗೊಂಡ ಬಳಿಕ ಶನಿವಾರ ಮತ್ತು ಭಾನುವಾರ ನೂರಾರು ಜನರು ಪ್ರತಿಮೆ ವೀಕ್ಷಣೆ ಮಾಡಲು ತೆರಳಿದರು. ಆದರೆ ಗೇಟ್ ಹಾಕಿರುವ ಕಾರಣ ಅವರು ನಿರಾಸೆಯಿಂದ ವಾಪಸ್ ಆದರು. ಸರ್ಕಾರದ ವಿರುದ್ದ ಆಕ್ರೋಶ ಹೊರಹಾಕಿದರು.

108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ವೀಕ್ಷಿಸಲು ಪ್ರವೇಶ ಶುಲ್ಕವಿಲ್ಲ Read More »

ಕರ್ನಾಟಕ

8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ

(ನ್ಯೂಸ್ ಕಡಬ) newskadaba.com ನ.15: ನೀವು ವೇಗದ ವೈ-ಫೈ ಸಂಪರ್ಕಕ್ಕೆ ಪ್ರವೇಶವನ್ನು ಹೊಂದಿಲ್ಲದಿದ್ದರೆ ಬಳಕೆದಾರರಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿಯೇ ಇಲ್ಲಿ 2023 ರಲ್ಲಿ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು ಬರಲಿದೆ, ಇದರ ಪಟ್ಟಿಯನ್ನು ಈ ಕೆಳ ಗೆ ತಿಳಿಸಲಾಗಿದೆ. ಏನಾದರು ಕೆಲಸ ಮಾಡುವಾಗ, ಪ್ರಯಾಣ ಮಾಡುವಾಗ ಇಂಟರ್ನೆಟ್ ಸಂಪರ್ಕದಲ್ಲಿರಲು ಈ ಹಾಟ್‌ಸ್ಪಾಟ್‌ಗಳು ಮುಖ್ಯವಾಗಿದೆ. ಮುಖ್ಯವಾಗಿ ಈ ವೈಫೈ ಹಾಟ್​ಸ್ಪಾಟ್​ಗಳು ಇತ್ತೀಚಿಗೆ ಹೆಚ್ಚು ಜನಪ್ರಿಯವಾಗಿದೆ. 2023 ರಲ್ಲಿ ಬರಲಿರುವ 8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳು, ವೆರಿಝೋನ್

8 ಅತ್ಯುತ್ತಮ ಪೋರ್ಟಬಲ್ ವೈ-ಫೈ ಹಾಟ್‌ಸ್ಪಾಟ್‌ಗಳ ವಿವರ ಇಲ್ಲಿದೆ Read More »

ತಂತ್ರಜ್ಞಾನ

ಚಳಿಗಾಲದಲ್ಲಿ ತಪ್ಪದೇ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ

(ನ್ಯೂಸ್ ಕಡಬ) newskadaba.com ನ.15: ಚಳಿಗಾಲದಲ್ಲಿ ನಿಯಮಿತವಾಗಿ ಬಾಳೆಹಣ್ಣು ಸೇವನೆ ಮಾಡುವುದರಿಂದ ವಿಶೇಷ ಪ್ರಯೋಜನಗಳಿವೆ. ಸ್ನಾಯುಗಳನ್ನು ಬಲಪಡಿಸುವ ಜೊತೆಗೆ ಚರ್ಮಕ್ಕೂ ಇದರಿಂದ ಸಾಕಷ್ಟು ಲಾಭಗಳಿವೆ. ಚಳಿಗಾಲದಲ್ಲಿ ಚರ್ಮವು ಒಣಗುತ್ತದೆ. ಮುಖದಲ್ಲಿ ಹೊಳಪಿರುವುದಿಲ್ಲ. ಪ್ರತಿದಿನ ಬಾಳೆಹಣ್ಣು ತಿನ್ನಲು ಪ್ರಾರಂಭಿಸಿದರೆ ಮುಖದ ಗ್ಲೋ ಹೆಚ್ಚುತ್ತದೆ. ಅಷ್ಟೇ ಅಲ್ಲ ಬಾಳೆಹಣ್ಣನ್ನು ಪೇಸ್ಟ್‌ ಮಾಡಿಕೊಂಡು ಅದನ್ನು ಮುಖಕ್ಕೆ ಹಚ್ಚಿಕೊಳ್ಳಬಹುದು. ಬಾಳೆಹಣ್ಣಿನಲ್ಲಿ ಪೊಟ್ಯಾಸಿಯಮ್ ಇದೆ, ಇದು ದೇಹದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.ಆದ್ದರಿಂದ ಚಳಿಗಾಲದಲ್ಲಿ ಪ್ರತಿದಿನ ತಪ್ಪದೇ ಒಂದು ಬಾಳೆಹಣ್ಣನ್ನು ತಿನ್ನಬೇಕು. ಇದರಿಂದ

ಚಳಿಗಾಲದಲ್ಲಿ ತಪ್ಪದೇ ಪ್ರತಿದಿನ ಒಂದು ಬಾಳೆಹಣ್ಣು ತಿನ್ನಿ Read More »

ಲೈಫ್‍ಸ್ಟೈಲ್

ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು?

(ನ್ಯೂಸ್ ಕಡಬ) newskadaba.com ನ.14: ಬೆಂಗಳೂರು ಪೊಲೀಸರು ಇತ್ತೀಚೆಗಷ್ಟೆ ಪರಿಚಯಿಸಿರುವ “ಗೋಲ್ಡನ್ ಅವರ್” ಎಂಬ ಸೌಲಭ್ಯ ಬಳಿಸಿದರೆ ಸೈಬರ್ ವಂಚಕರ ಜಾಲದಿಂದ ಕಳೆದುಕೊಂಡ ಹಣವನ್ನು ವಾಪಸು ಪಡೆಯಬಹುದು. ಈಗಾಗಲೇ ಈ ಗೋಲ್ಡನ್ ಅವರ್ ಸೌಲಭ್ಯ ಬಳಿಸಿಕೊಂಡು ಸಾವಿರಾರು ಜನರು ಸೈಬರ್ ವಂಚಕ ಜಾಲದಿಂದ ಕಳೆದುಕೊಂಡಿದ್ದ ಹಣವನ್ನು ಮರಳಿ ವಾಪಸು ಪಡೆದಿದ್ದಾರೆ. ಯಾರಾದರೂ ಸೈಬರ್ ವಂಚನೆ ಮೂಲಕ ಹಣ ಕಳೆದುಕೊಂಡರೆ ತಕ್ಷಣ ಪೊಲೀಸ್ ಕಂಟ್ರೋಲ್ ರೂಂ ಸಂಖ್ಯೆಯಾದ 1930ಕ್ಕೆ ಕರೆ ಮಾಡಿ ವಿಷಯ ತಿಳಿಸಿದರೆ ಸೈಬರ್ ಕ್ರೈಂ ವಿಭಾಗದ

ಸೈಬರ್ ಕ್ರೈಮ್ ಜಾಲಕ್ಕೆ ಬಿದ್ದು ಹಣ ಕಳೆದುಕೊಂಡರೆ ತಕ್ಷಣ ಏನು ಮಾಡಬೇಕು? Read More »

ಕ್ರೈಮ್ ನ್ಯೂಸ್

ಕಾಂಗ್ರೆಸ್​ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಕೋರ್ಟ್​​ ಆದೇಶ

(ನ್ಯೂಸ್ ಕಡಬ) newskadaba.com ನ.08: ಕೆಜಿಎಫ್-2 ಚಿತ್ರದ ಹಾಡನ್ನು ಅಕ್ರಮವಾಗಿ ಬಳಸಿಕೊಂಡು ಎಂಆರ್‌ಟಿ ಮ್ಯೂಸಿಕ್ ಕಂಪನಿಯ ಹಕ್ಕುಸ್ವಾಮ್ಯವನ್ನು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಮತ್ತು ಭಾರತ್ ಜೋಡೋ ಯಾತ್ರೆಯ ಟ್ವಿಟರ್ ಖಾತೆಗಳನ್ನು ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಬೆಂಗಳೂರಿನ ನ್ಯಾಯಾಲಯವು ಟ್ವಿಟರ್‌ಗೆ ಸೂಚಿಸಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಅವರು ಭಾರತ್ ಜೋಡೋ ಯಾತ್ರೆಗಾಗಿ ಕರ್ನಾಟಕಕ್ಕೆ ಬಂದಿದ್ದರು. ಅವರು ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕಾಲ್ನಡಿಗೆಯಲ್ಲಿ ಸಾಗಿದ್ದರು. ಈ ವೇಳೆ ರಾಹುಲ್ ಗಾಂಧಿ ಅವರ ಕಾಲ್ನಡಿಗೆಯ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕಲಾಗಿತ್ತು.

ಕಾಂಗ್ರೆಸ್​ ಟ್ವಿಟರ್ ಖಾತೆ ತಾತ್ಕಾಲಿಕವಾಗಿ ನಿರ್ಬಂಧಿಸುವಂತೆ ಕೋರ್ಟ್​​ ಆದೇಶ Read More »

ಕರ್ನಾಟಕ

ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ?

(ನ್ಯೂಸ್ ಕಡಬ) newskadaba.com ನ.08: ನಭೋಮಂಡಲದಲ್ಲಿ ಇಂದು ವಿಸ್ಮಯವೊಂದು ನಡೆಯಲಿದೆ. ತಂಪಾದ ಆಕಾಶದಲ್ಲಿ ಬೆಳದಿಂಗಳಂತೆ ಮಿನುಗುತ್ತಿದ್ದ ಚಂದ್ರ(Moon) ರಕ್ತದಂತೆ ಕೆಂಪಾಗಿ ಕಾಣಿಸಿಕೊಳ್ಳಲಿದ್ದಾನೆ. ಕಳೆದ ಅಮಾವಾಸ್ಯೆಯಂದು ಕೇತುಗ್ರಸ್ತ ಸೂರ್ಯಗ್ರಹಣವು ಸಂಭವಿಸಿತ್ತು. ಹದಿನೈದು ದಿನಗಳ ಅಂತರದಲ್ಲಿ ಚಂದ್ರಗ್ರಹಣವು ಸಂಭವಿಸುತ್ತಿದೆ. ಈ ಎರಡೂ ಗ್ರಹಣಗಳು ಒಂದೇ ಮಾಸದಲ್ಲಿ ಅಂದ್ರೆ ಕಾರ್ತೀಕ ಮಾಸದಲ್ಲಿ ಬಂದಿದ್ದು ಇದು ಈ ವರ್ಷದ ಕೊನೆಯ ಚಂದ್ರ ಗ್ರಹಣವಾಗಿದೆ. ಇಂದು ಮಧ್ಯಾಹ್ನ 2 ಗಂಟೆ 37 ನಿಮಿಷಕ್ಕೆ ಚಂದ್ರ ಗ್ರಹಣ ಆರಂಭವಾಗಲಿದೆ. ಸಂಜೆ 4 ಗಂಟೆ 28 ನಿಮಿಷಕ್ಕೆ

ರಕ್ತವರ್ಣ ಚಂದ್ರ ಗ್ರಹಣ ಎಲ್ಲೆಲ್ಲಿ ಸಂಭವಿಸುತ್ತೆ? Read More »

ರಾಷ್ಟ್ರೀಯ ನ್ಯೂಸ್

ಕರ್ನಾಟಕದಲ್ಲಿ ಕೊಂಚ ತಗ್ಗಿದ ವರುಣನ ಅಬ್ಬರ

(ನ್ಯೂಸ್ ಕಡಬ) newskadaba.com ನ.07: ಕರ್ನಾಟಕದ ಬಹುತೇಕ ಕಡೆ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿ ಶುಷ್ಕ ವಾತಾವರಣ ಹೆಚ್ಚಾಗಿದೆ. ಆದರೂ ಇನ್ನೆರಡು ದಿನ ಕರ್ನಾಟಕದ ಬೆಂಗಳೂರು, ಮಲೆನಾಡು, ಕರಾವಳಿ, ಉತ್ತರ ಕರ್ನಾಟಕದ ಕೆಲವೆಡೆ ಸಾಧಾರಣ ಮಳೆಯಾಗಲಿದೆ. ಇಂದಿನಿಂದ ನವೆಂಬರ್ 9ರವರೆಗೆ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ. ಬೆಂಗಳೂರಿನಲ್ಲಿ ಚಳಿ ಹೆಚ್ಚಾಗಿದ್ದು, ಉತ್ತರ ಕರ್ನಾಟಕದ ಹಲವೆಡೆ ಶುಷ್ಕ ವಾತಾವರಣ ಉಂಟಾಗಿದೆ. ಇದರ ನಡುವೆ ತುಂತುರು ಮಳೆಯೂ ಸುರಿಯುತ್ತಿದೆ. ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನ ಕರಾವಳಿ,

ಕರ್ನಾಟಕದಲ್ಲಿ ಕೊಂಚ ತಗ್ಗಿದ ವರುಣನ ಅಬ್ಬರ Read More »

ಕರಾವಳಿ

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿಮ್ಮ ದೈನಂದಿನ ಆಹಾರದಲ್ಲಿರಲಿ ಈ ವಸ್ತುಗಳು

(ನ್ಯೂಸ್ ಕಡಬ) newskadaba.com ನ.07:ಕೊಲೆಸ್ಟ್ರಾಲ್ ಅಧಿಕವಾಗಿದ್ದರೆ, ಹೃದಯದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೊಲೆಸ್ಟ್ರಾಲ್ ನಿಮ್ಮ ರಕ್ತದಲ್ಲಿ ಕಂಡುಬರುತ್ತದೆ. ಇದು ಆರೋಗ್ಯಕರ ಕೋಶಗಳ ರಚನೆಯನ್ನು ಬೆಂಬಲಿಸುತ್ತದೆ. ಆದರೆ ಇದು ಅಧಿಕವಾದಾಗ ದೇಹಕ್ಕೆ ಹಾನಿಕಾರಕವಾಗಿ ಪರಿಣಮಿಸುತ್ತದೆ. ಅಧಿಕ ರಕ್ತದೊತ್ತಡ, ಎದೆ ನೋವು, ವಾಕರಿಕೆ, ಉಸಿರಾಟದ ತೊಂದರೆ ಮತ್ತು ಅತಿಯಾದ ಆಯಾಸ ಮುಂತಾದ ಸಮಸ್ಯೆಗಳು ಕಂಡು ಬರುತ್ತವೆ. ಈ ಹಣ್ಣುಗಳ ಸೇವನೆಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆವಕಾಡೊ ಕೊಲೆಸ್ಟ್ರಾಲ್ ಮಟ್ಟವನ್ನು ನಿರ್ವಹಿಸಲು ಉತ್ತಮ ಹಣ್ಣು. ಇದು ಹೃದಯವನ್ನು ಆರೋಗ್ಯಕರವಾಗಿಡಲು

ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ನಿಮ್ಮ ದೈನಂದಿನ ಆಹಾರದಲ್ಲಿರಲಿ ಈ ವಸ್ತುಗಳು Read More »

ಲೈಫ್‍ಸ್ಟೈಲ್

ಮನೆ ಮದ್ದಿನಿಂದಲೇ ಈ ತಲೆ ನೋವಿಗೆ ಗುಡ್ ಬೈ ಹೇಳಿ

(ನ್ಯೂಸ್ ಕಡಬ) newskadaba.com ನ.07:ಹವಾಮಾನದಲ್ಲಿ ಆಗುವ ಬದಲಾವಣೆಯಿಂದ ಆಗಾಗ್ಗೆ ತಲೆನೋವು ಮತ್ತು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು ಬರುತ್ತವೆ. ಕೆಲವೊಮ್ಮೆ ತಲೆನೋವು ತುಂಬಾ ಹೆಚ್ಚಾಗಿರುತ್ತದೆ. ಔಷಧಿ ತೆಗೆದುಕೊಳ್ಳದೆ ಗುಣವಾಗುವುದಿಲ್ಲ. ತಲೆನೋವಿಗೆ ಹಲವು ಕಾರಣಗಳಿರಬಹುದು ಮಳೆಗಾಲದಲ್ಲಿ ಪದೇ ಪದೇ ತಲೆನೋವಿನ ಸಮಸ್ಯೆ ಕಾಡುತ್ತಿದ್ದರೆ ಅದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ತಲೆನೋವನ್ನು ಹೋಗಲಾಡಿಸಲು ನೀವು ಮನೆಯಲ್ಲಿ ಬಳಸುವ ಅನೇಕ ವಸ್ತುಗಳನ್ನು ಸೇವಿಸಬಹುದು. ಶೀತ, ಜ್ವರ ಮತ್ತು ತಲೆನೋವಿನ ಸಂದರ್ಭದಲ್ಲಿ ಶುಂಠಿಯು ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸುತ್ತದೆ. ಕರಿಮೆಣಸು ಮತ್ತು ಅರಿಶಿನದೊಂದಿಗೆ ಶುಂಠಿಯನ್ನು ಬೆರೆಸಿ

ಮನೆ ಮದ್ದಿನಿಂದಲೇ ಈ ತಲೆ ನೋವಿಗೆ ಗುಡ್ ಬೈ ಹೇಳಿ Read More »

ಲೈಫ್‍ಸ್ಟೈಲ್
Scroll to Top