ಕೊಂಬಾರು: ಅಗ್ನಿವೀರ ಪುನೀತ್ ರಾಜ್ ಗೆ ಸನ್ಮಾನ

(ನ್ಯೂಸ್ ಕಡಬ) newskadaba.com ಕಡಬ, ಅ.26. ಭಾರತೀಯ ಸೇನೆಗೆ ಅಗ್ನಿವೀರನಾಗಿ ಆಯ್ಕೆಯಾದ ಕಡಬ ತಾಲೂಕಿನ ಕೊಂಬಾರಿನ ಪುನಿತ್ ರಾಜ್ ಎಂಬವರನ್ನು ಕೆಂಜಾಳ ಹಾಲು ಉತ್ಪಾ ದಕರ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಹೊಳ್ಳಾರು, ಉಪಾಧ್ಯಕ್ಷ ನೀಲಪ್ಪ ಗೌಡ ಮುಗೇರು, ನಿರ್ದೇಶಕರಾದ ಶ್ರೀಧರ ಗೌಡ ಕಾಪಾರು, ನೀಲಪ್ಪ ಗೌಡ ಮಣಿಭಾಂಡ, ಧರ್ಮಪಾಲ ಗೌಡ ಕೋಲ್ಕಜೆ, ಉಷಾ ಪೆರುಂದೋಡಿ, ವೇದಾವತಿ ಕೂತೂರು, ಮೋಹನಾಂಗಿ ಕೊಡೆಂಕಿರಿ, ಕಾರ್ಯದರ್ಶಿ ಈಶ್ವರ ಗೌಡ ಕಾಪಾರು, ಹಾಲು ಪರಿವೀಕ್ಷಕಿ ದಿವ್ಯ ಗುಡೆಕೇರಿ ಮೊದಲಾದವರು ಉಪಸ್ಥಿತರಿದ್ದರು.

error: Content is protected !!
Scroll to Top