ಚಿಕಿತ್ಸೆ ನೀಡುವಾಗಲೇ ವ್ಯಕ್ತಿ ಮೃತ್ಯು…!

(ನ್ಯೂಸ್ ಕಡಬ) newskadaba.com ದೇವನಹಳ್ಳಿ, ಡಿ. 22. ಮಗಳೊಂದಿಗೆ ಆಸ್ಪತ್ರೆಗೆ ಆಗಮಿಸಿದ ವೃದ್ಧರೊಬ್ಬರು ಪ್ರಾಥಮಿಕ ಚಿಕಿತ್ಸೆ ನೀಡುವಾಗಲೇ ಮೃತಪಟ್ಟಿರುವ ಘಟನೆ ಇಲ್ಲಿನ ವಿಜಯಪುರ ರಸ್ತೆಯಲ್ಲಿರುವ ತಾಲ್ಲೂಕಿನ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದೆ.

ಮೃತ ವ್ಯಕ್ತಿಯನ್ನು ಚಿಕ್ಕಬಳ್ಳಾಪುರದ ಶಿಡ್ಲಘಟ್ಟದ ಹೆಮರ್ಲಹಳ್ಳಿ ಮೂಲದ ಚಿನ್ನಪ್ಪ (61) ಎಂದು ಗುರುತಿಸಲಾಗಿದೆ. ತಂದೆಯನ್ನು ಕಳೆದುಕೊಂಡ  ಮಗಳು ಆಕ್ರೋಶ ಭರಿತರಾಗಿ ಆಸ್ಪತ್ರೆಯಲ್ಲಿದ್ದ ದಾಖಲಾತಿ ಪುಸ್ತಕ, ಪೀಠೋಪಕಣ ಎಸೆದು ರಂಪಾಟ ಮಾಡಿದ್ದು, ಆಸ್ಪತ್ರೆಯಲ್ಲಿ ಕೆಲಕಾಲ ಬಿಗುವಿನ ವಾತಾರಣ ನಿರ್ಮಾಣವಾಗಿತ್ತು.

 

Also Read  ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ➤ ಪ್ರಕರಣ ದಾಖಲು

 

error: Content is protected !!
Scroll to Top