ವಿದ್ಯುತ್ ತಂತಿ ತಗುಲಿ ರೈತ ಮೃತ್ಯು  ➤ ಸಾರ್ವಜನಿಕರಿಂದ ಆಕ್ರೋಶ  

(ನ್ಯೂಸ್ ಕಡಬ) newskadaba.com  ಹೊಸಪೇಟೆ, ಡಿ. 15. ಹೊಲದಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತಗುಲಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಹೊಸಪೇಟೆಯಲ್ಲಿ ಸಂಭವಿಸಿದೆ.

ಮೃತರನ್ನು ಮೂಲಿಮನಿ ಯರಿಸ್ವಾಮಿ (21)  ಎಂದು ಗುರುತಿಸಲಾಗಿದೆ. ಎಂದಿನಂತೆ ಹೊಲಕ್ಕೆ ತೆರಳಿದಾಗ ಹರಿದು ಬಿದ್ದ ವಿದ್ಯುತ್ ತಂತಿಯನ್ನು ತುಳಿದು ಪರಿಣಾಮ ಈ ಅವಘಡ ಸಂಭವಿಸಿದೆ.  ಜೆಸ್ಕಾಂ ಇಲಾಖೆಯ ನಿರ್ಲಕ್ಷಕ್ಕೆ ರೈತನೋರ್ವ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದು ಆಕ್ರೋಶ  ವ್ಯಕ್ತಪಡಿಸಿದರು.

Also Read  ಮಂಗಳೂರು: 'ಮುಲ್ಕಿ ಸುಂದರರಾಮ ಶೆಟ್ಟಿ' ಎಂದು ಮರುನಾಮಕರಣ ಪಡೆದ 'ಲೈಟ್ ಹೌಸ್ ಹಿಲ್' ರಸ್ತೆ*

 

 

error: Content is protected !!
Scroll to Top