ವಿದ್ಯುತ್ ತಂತಿ ತುಳಿದು ರೈತ ಮೃತ್ಯು

(ನ್ಯೂಸ್ ಕಡಬ) newskadaba.com ರಿಪ್ಪನ್ ಪೇಟೆ , ಡಿ.13. ರೈತರೋರ್ವರು ವಿದ್ಯುತ್ ತಂತಿ ತುಳಿದು ಮೃತಪಟ್ಟ ಘಟನೆ ಹೋಬಳಿಯ ನಂಜವಳ್ಳಿ ಗ್ರಾಮದಲ್ಲಿ ನಡೆದಿದೆ.

 

ಮೃತರನ್ನು ಗ್ರಾಮದ ವೆಡ್ಡಿನಬೈಲು ಶೇಷಗಿರಿ (45) ಎಂದು ಗುರುತಿಸಲಾಗಿದೆ. ಶೇಷಗಿರಿ ಅವರ ಮನೆಯ ಬೇಲಿಗೆ ವಿದ್ಯುತ್ ಸಂಪರ್ಕಿಸಲಾಗಿತ್ತು. ಅವರ ಪತ್ನಿ ಬೆಳಿಗ್ಗೆ ಬೇಲಿಯಲ್ಲಿದ್ದ ಹೂ ಕೀಳಲೆಂದು ಹೋದಾಗ ವಿದ್ಯುತ್ ತಂತಿ ತಗುಲಿದ್ದು, ವೇಳೆ ಅವರು ಕೂಗಿಕೊಂಡಾಗ ಬಂದ ಶೇಷಗಿರಿ ಅವರು ಆಕಸ್ಮಿಕವಾಗಿ ವಿದ್ಯುತ್ ತಂತಿ ಸ್ಪರ್ಶಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.

error: Content is protected !!

Join the Group

Join WhatsApp Group