ಸಬಳೂರು: ಶ್ರೀ ರಾಮ ಗೆಳೆಯರ ಬಳಗದ ವಾರ್ಷಿಕ ಸಭೆ ► ಅಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ, ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಆಯ್ಕೆ

(ನ್ಯೂಸ್ ಕಡಬ) newskadaba.com ಕಡಬ, ನ.13. ಪುತ್ತೂರು ತಾಲೂಕು ಕೊಯಿಲ ಗ್ರಾಮದ ಸಬಳೂರು ಅಯೋಧ್ಯಾನಗರ ಶ್ರೀ ರಾಮ ಗೆಳೆಯರ ಬಳಗದ ವಾರ್ಷಿಕ ಸಭೆಯು ಶ್ರೀ ರಾಮ ಭಜನಾ ಮಂದಿರದಲ್ಲಿ ಭಾನುವಾರ ನಡೆಯಿತು.

ಸಂಘದ ವಾರ್ಷಿಕ ಸಭೆಯಲ್ಲಿ ಪದಾಧಿಕಾರಿಗಳ ಆಯ್ಕೆ ನಡಯಿತು. ನೂತನ ಅಧ್ಯಕ್ಷರಾಗಿ ಪ್ರಶಾಂತ್ ಕೊಲ್ಯ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಜಯಪ್ರಕಾಶ್ ಕಡೆಂಬ್ಯಾಲು ಆಯ್ಕೆಯಾಗಿದ್ದಾರೆ.

ಗೌರವಧ್ಯಕ್ಷರಾಗಿ ಪ್ರವೀಣ್ ಕುಮಾರ್ ನಿಡೇಲು, ಕೋಶಾಧಿಕಾರಿಯಾಗಿ ಪ್ರವೀಣ್‍ರಾಜ್ ಕೊಲ್ಯ, ಉಪಾಧ್ಯಕ್ಷರಾಗಿ ಮೋಹನ್ ಓಕೆ, ಗುರುಪ್ರಸಾದ್ ಪಟ್ಟೆದಮೂಲೆ, ಉಮೇಶ ಬುಡಲ್ಲೂರು, ಜೊತೆಕಾರ್ಯದರ್ಶಿಯಾಗಿ ನಾಗೇಶ್ ಕಡೆಂಬ್ಯಾಲು, ಬಾಲಕೃಷ್ಣ ಓಕೆ, ಕ್ರೀಡಾಕಾರ್ಯದರ್ಶಿಯಾಗಿ ಚಿದಾನಂದ ಪಾನ್ಯಾಲು, ಪುರಂದರ ಓಕೆ,  ಸದಸ್ಯರಾಗಿ ಕೆ ಎಸ್ ಬಾಲಕೃಷ್ಣ ಕೊಲ್ಯ, ರಾಧಕೃಷ್ಣ ತುಂಬೆತ್ತಡ್ಕ, ಯತೀಶ್ ಸೀಗೆತ್ತಡಿ, ಮುಖೇಶ್ ಕಡೆಂಬ್ಯಾಲು, ಭರತ್ ಓಕೆ,  ಪ್ರಜ್ವಲ್ ಸೀಗೆತ್ತಡಿ, ಯತೀಶ್ ಸೀಗೆತ್ತಡಿ, ಭುವನೇಶ್ ಬುಡಲ್ಲೂರು ಆಯ್ಕೆಯಾಗಿದ್ದಾರೆ.

error: Content is protected !!

Join the Group

Join WhatsApp Group