15 ವರ್ಷದ ದಾಂಪತ್ಯ ಅಂತ್ಯ ➤ ವಿಚ್ಛೇದನಕ್ಕೆ ಮುಂದಾದ ಆಮಿರ್ ಖಾನ್, ಕಿರಣ್ ರಾವ್

(ನ್ಯೂಸ್ ಕಡಬ) newskadaba,ಮುಂಬೈ ಜು.03:ಬಿಟೌನ್ ಸ್ಟಾರ್ ಕಪಲ್ ಆಮಿರ್ ಖಾನ್ ಮತ್ತು ಕಿರಣ್ ರಾವ್ ಮದುವೆ ಬಂಧನದಿಂದ ಹೊರ ಬಂದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆಯಲು ಮುಂದಾಗಿದ್ದಾರೆ.ಆಮಿರ್ ಖಾನ್ ಮತ್ತು ಕಿರಣ್ ರಾವ್ ಜೊತೆಯಾಗಿ ಹೇಳಿಕೆ ಬಿಡುಗಡೆಯಾಗಿದ್ದು, ಇನ್ಮುಂದೆ ಇಬ್ಬರ ದಾರಿ ಬೇರೆ ಆಗಿರಲಿದೆ. ನಾವಿಬ್ಬರು ಪರಸ್ಪರ ಚರ್ಚಿಸಿ ಈ ತೀರ್ಮಾನ ತೆಗೆದುಕೊಂಡಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಈ 15 ವರ್ಷಗಳಲ್ಲಿ ಇಬ್ಬರೂ ಸುಂದರ ಜೀವನವನ್ನು ಕಳೆದಿದ್ದೇವೆ. ಹೊಸ ಅನುಭವ ಆನಂದ, ಸಂತೋಷವನ್ನು ಶೇರ್ ಮಾಡಿಕೊಂಡಿದ್ದೇವೆ. ನಮ್ಮಿಬ್ಬರ ಸಂಬಂಧ ಕೇವಲ ವಿಶ್ವಾಸ, ಗೌರವ ಮತ್ತು ಪ್ರೀತಿಯ ಮೇಲೆಯೇ ಭದ್ರವಾಗಿ ಬೆಳೆದಿದೆ. ಇಂದು ನಾವು ಜೀವನ ಹೊಸ ಅಧ್ಯಾಯ ಆರಂಭಿಸಲು ಹೊರಟಿದ್ದೇವೆ. ಆದ್ರೆ ಗಂಡ-ಹೆಂಡತಿಯಾಗಿ ಅಲ್ಲ. ಬದಲಾಗಿ ತಂದೆ-ತಾಯಿ ಮತ್ತು ವಿಸ್ತೃತ ಕುಟುಂಬದ ರೂಪದಲ್ಲಿ. ನಾವು ಕಳೆದ ಹಲವು ದಿನಗಳಿಂದಲೇ ಪ್ರತ್ಯೇಕವಾಗುವ ಪ್ಲಾನ್ ಆರಂಭಿಸಿದ್ದೇವೆ. ಇಂದು ನಮ್ಮ ನಿರ್ಧಾರವನ್ನು ಸಮಾಜದ ಮುಂದೆ ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.ಪತಿ-ಪತ್ನಿ ರೂಪದಲ್ಲಿ ಪ್ರತ್ಯೇಕವಾದ್ರೂ ಕುಟುಂಬಕ್ಕಾಗಿ ಒಬ್ಬರಿಗೊಬ್ಬರು ಜೊತೆಯಾಗಿರುತ್ತೇವೆ. ಜೊತೆಯಾಗಿಯೇ ಪುತ್ರನ ಪಾಲನೆ-ಪೋಷಣೆ ಮಾಡುತ್ತೇವೆ. ಎಂದು ಹೇಳಿಕೊಂಡಿದ್ದಾರೆ.

error: Content is protected !!

Join the Group

Join WhatsApp Group