ಮಂಜುನಾಥನಗರ: ಸ್ವಚ್ಚ ಪರಿಸರ ಬಗ್ಗೆ ಜಾಗೃತಿ ಕಾರ್ಯಕ್ರಮ ► ರಸ್ತೆ ಹೊಂಡಕ್ಕೆ ಕಾಂಕ್ರೀಟ್

(ನ್ಯೂಸ್ ಕಡಬ) newskadaba.com ಕಡಬ,ಅ.4. ಮಂಜುನಾಥನಗರ ಶ್ರೀ ಸಿದ್ಧಿವಿನಾಯಕ ಸೇವಾ ಸಂಘ , ಅರುಂಧತಿ ಮಾತೃ ಮಂಡಳಿ, ವಿವೇಕಾನಂದ ಯುವಕ ಮಂಡಲ ಮತ್ತು ಶ್ರೀಗೌರಿ ಯುವತಿ ಮಂಡಲ ಇವುಗಳ ಜಂಟಿ ಆಶ್ರಯದಲ್ಲಿ ಸ್ವಚ್ಚತಾ ಕಾರ್ಯಕ್ರಮ ನಡೆಯಿತು.

ಸ್ವಚ್ಛತಾ ಕಾರ್ಯಕ್ರಮದಲ್ಲಿ ಬಂಬಿಲ ಕ್ರಾಸ್ನಿಂದ ಗೌರಿ ಹೊಳೆಯ ತನಕದ ರಸ್ತೆಗಳ ಹೊಂಡವನ್ನು ಮುಚ್ಚಿ ರಿಪೇರಿ ಮಾಡಲಾಯಿತು. ಬಳಿಕ ರಸ್ತೆ ಬದಿ ಇದ್ದ ಪೊದರು ಕಡಿದು ತೆರವುಗೊಳಿಸುವುದರ ಮೂಲಕ ಸ್ವಚ್ಚ ಪರಿಸರವನ್ನು ನಿರ್ಮಿಸುವ ಬಗ್ಗೆ ಜಾಗೃತಿ ಕಾರ್ಯಕ್ರಮ  ನಡೆಸಲಾಯಿತು.

ಈ ಸಂದರ್ಭ ಭಾರತಿ ಗ್ರಾಮ ವಿಕಾಸ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷ ಬಿ.ಕೆ.ರಮೇಶ್, ಸವಣೂರು ಗ್ರಾ.ಪಂ.ಅಧ್ಯಕ್ಷೆ ಇಂದಿರಾ ಬಿ.ಕೆ, ಉಪಾಧ್ಯಕ್ಷ ರವಿಕುಮಾರ್, ಸದಸ್ಯ ಸತೀಶ್ ಅಂಗಡಿಮೂಲೆ, ಚೈತನ್ಯ ರೈತ ಶಕ್ತಿ ಗುಂಪಿನ ಅಧ್ಯಕ್ಷ ಗಣೇಶ್ ಶೆಟ್ಟಿ ಕುಂಜಾಡಿ, ಗ್ರಾಮ ವಿಕಾಸ ಸಮಿತಿಯ ಗೌರವ ಸಲಹೆಗಾರ ಸುಧಾಕರ ರೈ ಕುಂಜಾಡಿ, ಬಾಳಪ್ಪ ಪೂಜಾರಿ ಬಂಬಿಲದೋಳ, ವಿವೇಕಾನಮದ ಯುವಕ ಮಂಡಲದ ಗೌರವಾಧ್ಯಕ್ಷ ಸುದೀರ್ ಕುಮಾರ್ ರೈ ಕುಂಜಾಡಿ, ಅಧ್ಯಕ್ಷ ಪ್ರಸಾದ್ ರೈ ಬೈಲಾಡಿ, ಸಿದ್ದಿವಿನಾಯಕ ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಕೆ.ಎಸ್, ಅಧ್ಯಕ್ಷ ಪ್ರವೀಣ್ ಬಂಬಿಲದೋಳ, ಮಂಜುನಾಥನಗರ ಹಿ.ಪ್ರಾ.ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ, ಪಾಲ್ತಾಡಿ ಗ್ರಾಮ ವಿಕಾಸ ಸಮಿತಿಯ ಅಧ್ಯಕ್ಷ ಪ್ರವೀಣ್ ಚೆನ್ನಾವರ, ಸಂಯೋಜಕ ಉದಯ್ ಬಿ.ಆರ್,ಬಾಸ್ಕರ ಶೆಟ್ಟಿ ಬಂಬಿಲ, ಅಶ್ರಫ್ ಕಾಸಿಲೆ, ವಿವೇಕಾನಂದ ಯುವಕ ಮಂಡಲದ ಸದಸ್ಯರಾದ ತಾರೇಶ್ ರೈ, ಸತ್ಯಪ್ರಕಾಶ್ ರೈ,ನವೀನ್ ಶೆಟ್ಟಿ,ಹರೀಶ್ ಕಟೀಲು, ,ರುಕ್ಮಯ್ಯ, ಮಲ್ಲಿಕಾರ್ಜುನ, ಆಶಿತ್ ರೈ ಕುಂಜಾಡಿ, ಗುರುರಾಜ್ ,ಅಶೋಕ್, ವಿಕ್ರಂರಾಜ್, ಸುಂದರ ಬಿ.ಎಂ, ಸುಂದರಿ ಬಿ.ಎಸ್,ಸವಿತಾ ಹರೀಶ್, ವಿಮಲಾ ಮೋನಪ್ಪ, ಕಮಲಾ, ರಕ್ಷಿತ್ ,ಜಗದೀಶ್, ಮುತ್ತಪ್ಪ ಬಂಬಿಲ, ಬಾಬು, ಬಾಬು ಶೆಟ್ಟಿ, ಸೋಮಪ್ಪ ಶೆಟ್ಟಿ, ಪುರುಷೋತ್ತಮ, ರವಿ ಬಂಬಿಲ ಮೊದಲಾದವರಿದ್ದರು.

error: Content is protected !!

Join the Group

Join WhatsApp Group