ಕಡಬ: ನಿವೃತ್ತ ಪೋಸ್ಟ್ ಮ್ಯಾನ್ ನಿಧನ

(ನ್ಯೂಸ್ ಕಡಬ) newskadaba.com ಕಡಬ, . 02. ಅಂಚೆ ಕಛೇರಿಯ ಗ್ರಾಮೀಣ ಡಾಕ್ ಸೇವಕ್ (ಜಿ.ಡಿ.ಎಸ್.ಎಂ.ಡಿ) ಕರ್ತವ್ಯ ನಿರ್ವಹಿಸಿ ಬಳಿಕ ಸ್ವ ನಿವೃತ್ತಿ ಹೊಂದಿರುವ ಕುಟ್ರುಪ್ಪಾಡಿ ಗ್ರಾಮದ ಪುರಿಯ ನಿವಾಸಿ ದಿ. ಸುಬ್ರಾಯ ಗೌಡ ಅವರ ಪುತ್ರ ಅರವಿಂದಾಕ್ಷ(ರವಿ) ಕಳೆದ ದಿನ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

 

 

ಇವರು ಸುಮಾರು 25 ವರ್ಷಗಳ ಕಾಲ ಕಡಬದ ನಿವೃತ್ತ ಪೋಸ್ಟ್ ಮ್ಯಾನ್ ಆಗಿ ಕರ್ತ ವ್ಯ ನಿರ್ವಹಿಸಿ ಬಳಿಕ ವಿ.ಆರ್.ಎಸ್. ಪಡೆದುಕೊಂಡಿದ್ದರು. ಕಳೆದ ದಿನ ಅಸ್ವಸ್ಥಗೊಂಡಿದ್ದ ಇವರನ್ನು ಕಡಬ ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ವೇದಾವತಿ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.

Also Read  ಸುಳ್ಯ: ನೇಣುಬಿಗಿದು ಯುವಕ ಆತ್ಮಹತ್ಯೆ

 

 

error: Content is protected !!
Scroll to Top