ಕುಂತೂರು: ಗಾಂಜಾ ಸೇವಿಸಿದ್ದ ಯುವಕನ ಬಂಧನ



(ನ್ಯೂಸ್ ಕಡಬ) newskadaba.com ಕುಂತೂರು, ಅ.12: ಕಳೆದ ದಿನ ರಾತ್ರಿ ಕುಂತೂರಿನ ಬೇಳ್ಪಾಡಿಯಲ್ಲಿ ಗಾಂಜಾ ಸೇವಿಸಿದ್ದ ಯುವಕನನ್ನು ಕಡಬ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕುಂತೂರು ಗ್ರಾಮದ ಬೇಳ್ಪಾಡಿ ನಿವಾಸಿ ಜುನೈದ್(19‌ ವ.) ಎಂದು ಗುರುತಿಸಲಾಗಿದೆ.





 

ಕಳೆದ ದಿನ ರಸ್ತೆ ಬದಿಯ ಮರದ ಕೆಳಗೆ ಬೈಕ್‌ ನಿಲ್ಲಿಸಿ ಗಾಂಜಾ ಸೇವಿಸಿ ನಶೆಯಲ್ಲಿದ್ದ ಅವರನ್ನು ಕಡಬ ಎಸ್‌ಐ ರುಕ್ಮ ನಾಯ್ಕ್‌ ಹಾಗೂ ಸಿಬ್ಬಂದಿಗಳು ವಶಕ್ಕೆ ತೆಗೆದುಕೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಪರೀಕ್ಷೆಗೆ ಒಳಪಡಿಸಿದಾಗ ಗಾಂಜಾ ಸೇವಿಸಿದ್ದು, ಖಚಿತಗೊಂಡಿದೆ. ಅವರನ್ನು ಎನ್.ಡಿ.ಪಿ.ಎಸ್.‌ ಕಾಯ್ದೆಯನ್ವಯ ಪ್ರಕರಣ ದಾಖಲಿಸಿಕೊಂಡಿದ್ದಾರೆ.

 






 

 

error: Content is protected !!
Scroll to Top