ಸವಣೂರು: ಮಿನಿಡಂಪರ್ ಆವಿಷ್ಕಾರ ಮಾಡಿದ ಯುವಕನಿಗೆ ಶಾಸಕ ವೇದಾವ್ಯಾಸ ಕಾಮತ್ ನೆರವು

(ನ್ಯೂಸ್ ಕಡಬ) newskadaba.com ಸವಣೂರು, ಅ.08: ಕಡಬ ತಾಲೂಕಿನ ಸವಣೂರು ಸಮೀಪದ ಪಾಲ್ತಾಡಿ ಗ್ರಾಮದ ಬಂಬಿಲ ನಿವಾಸಿ ಪುರುಷೋತ್ತಮ ಅವರು ಮಿನಿಡಂಪರ್‌ ಆವಿಷ್ಕಾರ ಮಾಡಿದ್ದು, ಇದೀಗ ಅವರಿಗೆ ಮಂಗಳೂರು ಶಾಸಕ ವೇದಾವ್ಯಾಸ ಕಾಮತ್‌ರವರು ನೆರವಾಗುವ ಮೂಲಕ ಯುವಕನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

 

 

ಶಾಸಕ ವೇದಾವ್ಯಾಸ ಕಾಮತ್‌ ಅವರು ಪುರುಷೋತ್ತಮ ಅವರ ಮಿನಿ ಆವಿಷ್ಕಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಮನೆಗೆ ಸುಮಾರು 50,000/- ವೆಚ್ಚದಲ್ಲಿ ಶೆಡ್‌ ನಿರ್ಮಾಣ ಸೇರಿದಂತೆ ಇರತ ಪರಿಕರಗಳನ್ನು ಒಪ್ಪಿಸುವಲ್ಲಿ ಪಾತ್ರರಾಗಿದ್ದಾರೆ. ವೇದಾವ್ಯಾಸ ಕಾಮತ್‌ ಅವರ ಈ ಕಾಳಜಿಗೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

 

 

error: Content is protected !!

Join the Group

Join WhatsApp Group