ಕಡಬ: ಒಂದು ವಾರದ ಹಿಂದೆ ಚಿಂತಾಜನಕ ಸ್ಥಿತಿಯಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು

(ನ್ಯೂಸ್ ಕಡಬ) newskadaba.com ಕಡಬ, ಸೆ.18: ಕಳೆದ ಒಂದು ವಾರದ ಹಿಂದೆ ಅನಾರೋಗ್ಯ ಪೀಡಿತರಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ ಕಡಬದ ಮಹಿಳೆಯೊಬ್ಬರನ್ನು ಆಸ್ಪತ್ರೆಗೆ ಸೇರಿಸಿ ಕಡಬ ಪೊಲೀಸರು ಮತ್ತು ಪತ್ರಕರ್ತರೊಬ್ಬರು ಮಾನವೀಯತೆ ಮೆರೆದಿದ್ದಾರೆ.

 

ಕಡಬ ಸಮೀಪದ ಮಜ್ಜಿಗುಡ್ಡೆ ನಿವಾಸಿ ತೀರಾ ಬಡತನದಲ್ಲಿರುವ ಮಹಿಳೆಯೊಬ್ಬರು ಸೆ.10 ರಂದು ತೀರಾ ಅನಾರೋಗ್ಯಕ್ಕೆ ಬಳಗಾಗಿದ್ದರು. ಈ ವಿಚಾರವನ್ನು ಸ್ಥಳೀಯರು ಪತ್ರಕರ್ತ ನಾಗರಾಜ್‌ ಎನ್.ಕೆ ಅವರ ಗಮನಕ್ಕೆ ತರಲಾಗಿತ್ತು. ಕಾರ್ಯಪ್ರವೃತ್ತರಾದ ಪತ್ರಕರ್ತರು ತಮ್ಮ ಆಪ್ತ ವಲಯದವರಿಗೆ ಮಾಹಿತಿ ನೀಡಿ ಪೊಲೀಸರಿಗೆ ತಿಳಿಸಿ ಸಹಾಯ ಮಾಡಿದರು. ಇದಕ್ಕೆ ಸ್ಪಂದಿಸಿದ ಎಸ್‌ ಐ ರುಕ್ಮ ನಾಯ್ಕ್‌ ಅವರು ವೈದ್ಯಾಧಿಕಾರಿಯನ್ನು ಸಂಪರ್ಕಿಸಿ ಮಾತುಕತೆ ನಡೆಸಿ ರೋಗಿಯನ್ನು ಮಜ್ಜುಗುಡ್ಡೆ ಮನೆಯಿಂದ ಕಡಬ ಆಸ್ಪತ್ರೆಗೆ ಕರೆತರಲು ತನ್ನ ಸಿಬ್ಬಂದಿಗಳನ್ನು ಕಳಿಸಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಮಹಿಳೆಗೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ದಿನ (ಸೆ.17) ಮೃತಪಟ್ಟಿದ್ದಾರೆ. ನಂತರ ಇವರ ಆಂತ್ಯ ಸಂಸ್ಕಾರವನ್ನು ಪುತ್ತೂರಿನಲ್ಲಿಯೇ ನಡೆಸಲಾಯಿತು.

 

error: Content is protected !!

Join the Group

Join WhatsApp Group