ಗೋಳಿತೊಟ್ಟು: ಮಕ್ಕಳಿಗೆ ಈಜು ಕಲಿಸಲು ಹೋದ ತಂದೆ ನೀರುಪಾಲು

(ನ್ಯೂಸ್ ಕಡಬ) newskadaba.com ಉಪ್ಪಿನಂಗಡಿ , ಸೆ. 05: ಇಲ್ಲಿಗೆ ಸಮೀಪದ ಗೋಳಿತೊಟ್ಟು ಗ್ರಾಮದ ನಾಯಿಲ ಎಂಬಲ್ಲಿ ಇಂಗು ಗುಂಡಿಯಲ್ಲಿ ಮಕ್ಕಳಿಗೆ ಈಜು ಕಲಿಸಲು ಹೋದ ತಂದೆಯೋರ್ವ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ಕಳೆದ ದಿನ ಸಂಭವಿಸಿದೆ. 

 

ಗೋಳಿತೊಟ್ಟು ಗ್ರಾಮದ ಹರೀಶ್ ಪೂಜಾರಿ (38) ಎಂಬವರು ಮೃತಪಟ್ಟವರು. ಇವರು ತನ್ನ ಮನೆ ಸಮೀಪದ ಗೇರು ನಿಗಮದ ಭೂಮಿಯಲ್ಲಿ ನಿರ್ಮಿಸಿದ್ದ ಇಂಗು ಗುಂಡಿಯಲ್ಲಿ ತನ್ನ ಮಕ್ಕಳಿಗೆ ಈಜು ಕಲಿಸಲೆಂದು ಹೋದವರು, ನೀರಿನಲ್ಲಿ ಮುಳುಗಿ ಅಸ್ವಸ್ಥರಾದರು. ಕೂಡಲೇ ಅವರನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ಅವರು ಮೃತಪಟ್ಟರೆಂದು ತಿಳಿದು ಬಂದಿದೆ. ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Also Read  ಪಿಯುಸಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ..!

 

 

error: Content is protected !!
Scroll to Top