ಕೊಯಿಲ: ಮುಬಾರಕ್ ಜುಮಾ ಮಸೀದಿ ಕುದ್ಲೂರು ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್ ಅಭಿಯಾನ

(ನ್ಯೂಸ್ ಕಡಬ) newskadaba.com ಕಡಬ, ಸೆ. 03. ಮುಬಾರಕ್ ಜುಮಾ ಮಸೀದಿ ಹಾಗೂ ಎಸ್ಕೆಎಸ್ಸೆಸ್ಸೆಫ್ ಕುದ್ಲೂರು ಶಾಖೆ ವತಿಯಿಂದ ಆಯುಷ್ಮಾನ್ ಕಾರ್ಡ್ ನೋಂದಣಿ ಅಭಿಯಾನ  ಕಾರ್ಯಕ್ರಮವು  ಕುದ್ಲೂರು ಮಸೀದಿ ವಠಾರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುದ್ಲೂರು ಮುಬಾರಕ್ ಮಸೀದಿಯ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಮರ್ವೇಲ್ ವಹಿಸಿದರು. ಕುದ್ಲೂರು ಮಸೀದಿಯ ಖತೀಬರಾದ ಅಶ್ರಫ್ ರಹ್ಮಾನಿ ವೀರಮಂಗಿಲ ಕಾರ್ಯಕ್ರಮವನ್ನು ದುಆ ಆಶೀರ್ವಚನ ನೀಡಿ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ SKSSF  ಕುದ್ಲೂರು ಶಾಖೆ ಅಧ್ಯಕ್ಷರಾದ ಅಶ್ರಫ್ ಕೋರೆಪದವು ಹಾಗೂ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಕೆ.ಐ , ಕುದ್ಲೂರು SKSSF ಸಂಘಟನಾ ಕಾರ್ಯದರ್ಶಿ ನಝೀರ್ ಮುಸ್ಲಿಯಾರ್ ಹಾಗೂ ಕೋಶಾಧಿಕಾರಿ ಅಬ್ದುಲ್ ಖಾದರ್ ಮರ್ವೇಲ್ ಮುಂತಾದವರು  ಉಪಸ್ಥಿತರಿದ್ಧರು. ಅಭಿಯಾನದಲ್ಲಿ 150 ಕ್ಕೂ ಹೆಚ್ಚು ಮಂದಿ ಪ್ರಯೋಜನ ಪಡೆದುಕೊಂಡರು.

error: Content is protected !!

Join the Group

Join WhatsApp Group