ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ



(ನ್ಯೂಸ್ ಕಡಬ) newskadaba.com ಕಡಬ. ಆ,26:  ರಾಜ್ಯದ ಪ್ರಸಿದ್ದ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಇಂದು ಹೊಸ್ತಾರೋಗಣೆ ಕಾರ್ಯಕ್ರಮ ನಡೆಯಿತು.





 

ಬೆಳಿಗ್ಗೆ ದೇವರಿಗೆ ಮಹಾಭಿಷೇಕ ಹಾಗೂ ಕದಿರು ಪೂಜೆ ದೇವತಾ ಕಾರ್ಯಗಳು ನಡೆದವು. ಬೆಳಿಗ್ಗೆ ಗಂಟೆ 5.30ಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ, ಗಂಟೆ 8ಕ್ಕೆ ತೆನೆ ತಂದು, ಬಳಿಕ ಕದಿರು ಪೂಜೆ, ಗಂಟೆ 9ಕ್ಕೆ ದೇವಲದ ನೌಕರರಿಗೆ ಹಾಗೂ ಸ್ಥಳೀಯ ಭಕ್ತಾಧಿಗಳಿಗೆ ಕದಿರು ವಿತರಣೆ ನಡೆಯಿತು. ಪ್ರದಾನ ಅರ್ಚಕ ಸೀತಾರಾಮ ಎಡಪಡಿತ್ತಾಯ ರವರು ಪೂಜಾ ಕಾರ್ಯ ನೆರೆವೇರಿಸಿದರು






 

error: Content is protected !!
Scroll to Top