ಕೊರೊನಾ ಅಟ್ಟಹಾಸ ➤ ನಾಳೆಯಿಂದ (ಜುಲೈ 5 ರಿಂದ) ಜುವ್ಯೆಲ್ಲರಿ ಶಾಪ್ ಕ್ಲೋಸ್

(ನ್ಯೂಸ್ ಕಡಬ) newskadaba.com ., ಮಂಗಳೂರು, ಜು.04., ದ.ಕ ಜಿಲ್ಲೆಯಲ್ಲಿ ಕೊರೊನಾ ‌ಪ್ರಕರಣ ಹೆಚ್ಚಳದ ಹಿನ್ನಲೆ ನಾಳೆಯಿಂದ ಐದು ದಿನಗಳ ‌ಕಾಲ ಜಿಲ್ಲೆಯ ಜ್ಯುವೆಲ್ಲರಿ ಮಳಿಗೆಯನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲು ದ.ಕ ಜಿಲ್ಲಾ ಸ್ವರ್ಣ ವ್ಯಾಪಾರ ಸಂಘ ನಿರ್ಧರಿಸಿವೆ.


ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವ ನಿಟ್ಟಿನಲ್ಲಿ ಜಿಲ್ಲೆಯ ಜ್ಯುವೆಲ್ಲರಿಗಳು ಜುಲೈ 5 ರಿಂದ ಜುಲೈ 9ರವರೆಗೆ ಬಂದ್‌‌ ಮಾಡಲು ತೀರ್ಮಾನ ಮಾಡಿವೆ.

ಕಾರ್ಪೊರೇಟ್ ಸ್ವರ್ಣಾಭರಣ ಮಳಿಗೆ ಸೇರಿ ಎಲ್ಲವೂ ಬಂದ್‌ ಆಗಲಿದ್ದು, ಇನ್ನು ಚಿನ್ನಾಭರಣ ಕಾಯ್ದಿರಿಸಿದವರು ಇಂದು (ಶನಿವಾರ) ಮಳಿಗೆಗೆ ಆಗಮಿಸಲು ಸೂಚನೆ ನೀಡಲಾಗಿದೆ.

error: Content is protected !!

Join the Group

Join WhatsApp Group