ಗಲ್ಫ್ ನಿಂದ ಹಿಂತಿರುಗಿ ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಸಾವು

(ನ್ಯೂಸ್ ಕಡಬ) newskadaba.com ಕಾಸರಗೋಡು,ಜೂ.16:  ಕೊರೊನಾ ನಿಗಾದಲ್ಲಿದ್ದ ಗಲ್ಫ್ ಉದ್ಯೋಗಿ ಮೃತಪಟ್ಟ ಘಟನೆ ಕಾಸರಗೋಡಿನ ಉದುಮದಲ್ಲಿ ನಡೆದಿದೆ. ಮೃತಪಟ್ಟವರನ್ನು ಉದುಮ ಸೌತ್ ಕರಿಪ್ಪೊಡಿಯ ಅಬ್ದುಲ್ ರಹಮಾ ನ್ (54) ಎಂದು ಗುರುತಿಸಲಾಗಿದೆ.

ಶನಿವಾರ ಬೆಳಿಗ್ಗೆ ಅಬ್ದುಲ್ ರಹಮಾನ್ ಮತ್ತು ಪುತ್ರ ಜಿಶಾದ್ ಗಲ್ಫ್ ನಿಂದ ಊರಿಗೆ ಬಂದಿದ್ದು , ಮನೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು . ಸೋಮವಾರ ಬೆಳಿಗ್ಗೆ ಉದುಮ ಪ್ರಾಥಮಿಕ ಆರೋಗ್ಯ ಕೇದ್ರದ ವೈದ್ಯರು ಅಬ್ದುಲ್ ರಹಮಾನ್ ಹಾಗೂ ಜಿಶಾದ್ ನ ಗಂಟಲ ದ್ರವ ತೆಗೆದಿದ್ದು , ತಪಾಸಣೆಗೆ ಕಳುಹಿಸಲಾಗಿದೆ. ವೈದ್ಯಕೀಯ ಪರೀಕ್ಷಾ ವರದಿ ಇಂದು ಲಭಿಸಲಿದೆ. ಸೋಮವಾರ ಸಂಜೆ ಉಸಿರಾಟ ತೊಂದರೆ ಕಂಡು ಬಂದುದರಿಂದ ಅಬ್ದುಲ್ ರಹಮಾನ್ ರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು .ಆದರೆ ಚಿಕಿತ್ಸೆಗೆ ಸ್ಪಂದಿಸದೆ ತಡರಾತ್ರಿ ಮೃತಪಟ್ಟಿದ್ದಾರೆ.

Also Read  ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ಸಹಯೋಗದೊಂದಿಗೆ ➤ ವಿಶೇಷ ಉಪನ್ಯಾಸ ಮಾಲೆ ಕಾಯಾಗಾರ

 

 

 

error: Content is protected !!
Scroll to Top