ತಲೆ ಮೇಲೆ ಕಲ್ಲು ಹಾಕಿ ► ಸ್ನೇಹಿತನ ಹತ್ಯೆ

(ನ್ಯೂಸ್ ಕಡಬ) newskadaba.com ಬಳ್ಳಾರಿ,ಸೆ.03, ಆಟೋ ಚಾಲಕನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಕೊಲೆಗೈದ ಘಟನೆ ಬಳ್ಳಾರಿಯ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ನಡೆದಿದೆ.

ಕೊಲೆಯಾದ ಯುವಕ ಬಳ್ಳಾರಿ ಕೌಲಬಜಾರ ನಿವಾಸಿ 25 ವರ್ಷದ ಶಿವು ನಾಯಕ ಎಂಬ ಮಾಹಿತಿ ಇದೆ. ಬಳ್ಳಾರಿಯ ಸರ್ಕಾರಿ ಐಟಿಐ ಕಾಲೇಜು ಮೈದಾನದಲ್ಲಿ ಶನಿವಾರ ರಾತ್ರಿ ಶಿವು ನಾಯಕ ತನ್ನ ಸ್ನೇಹಿತರೊಂದಿಗೆ ಇದ್ದರು ಎನ್ನಲಾಗಿದೆ.

ಆದಿತ್ಯವಾರ ಮುಂಜಾನೆ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಯಾದ ಸ್ಥಿತಿಯಲ್ಲಿದ್ದ ಯುವಕನ ಶವವನ್ನು ನೋಡಿದ ಸ್ಥಳೀಯರು,  ಕೌಲಬಜಾರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಟೋ ಡೈವರ್ ಆಗಿರೋ ಶಿವು ನಾಯಕ ಕೆಲ ಸ್ನೇಹಿತರ ಜೊತೆ ಜಗಳ ಮಾಡಿಕೊಂಡಿದ್ದೆ ಕೊಲೆಗೆ ಕಾರಣ ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

error: Content is protected !!

Join the Group

Join WhatsApp Group