ವಿಜಯ್ ಹಜಾರೆ ಟ್ರೋಫಿ ಪಂದ್ಯದಲ್ಲಿ ಕರ್ನಾಟಕಕ್ಕೆ ಚಾಂಪಿಯನ್ ಶಿಪ್

(ನ್ಯೂಸ್ ಕಡಬ) newskadaba.com ಬೆಂಗಳೂರು, .26. ಶುಕ್ರವಾರದಂದು ನಡೆದ ವಿಜಯ್ ಹಜಾರೆ ಫೈನಲ್ ಪಂದ್ಯದಲ್ಲಿ ಕರ್ನಾಟಕ ತಂಡವು ತಮಿಳುನಾಡಿನ ವಿರುದ್ದ ಚಾಂಪಿಯನ್ ಶಿಪ್ ಪಡೆದಿದೆ. ಮೊದಲು ಬ್ಯಾಟಿಂಗ್ ಮಾಡಿದ ತಮಿಳುನಾಡು 49.5 ಓವರ್ ಗಳಲ್ಲಿ 252 ರನ್ ಗೆ ಆಲ್ ಔಟ್ ಆಯಿತು. ಮಿಥುನ್ ಹ್ಯಾಟ್ರಿಕ್ ಸಹಿತ ಮೂರು ವಿಕೆಟ್ ಪಡೆದರು.

 

ಕರ್ನಾಟಕ ಒಂದು ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದ್ದ ವೇಳೆ ಮಳೆ ಅಡ್ಡಿಯಾಯಿತು. ಮಳೆ ನಿಲ್ಲದ ಕಾರಣ ವಿಜೆಡಿ ನಿಯಮದ ಪ್ರಕಾರ ಕರ್ನಾಟಕ ತಂಡ 60 ರನ್ ಅಂತರದಿಂದ ಗೆಲುವು ಸಾಧಿಸಿದೆ ಎಂದು ಘೋಷಿಸಲಾಯಿತು. ರಾಹುಲ್ 52, ಮಯಾಂಕ್ 69 ರನ್ ಗಳಿಸಿ ಅಡುತ್ತಿದ್ದರು.

 

 

ಈ ಆಟದೊಂದಿಗೆ ಕರ್ನಾಟಕ ತಂಡವು  ನಾಲ್ಕು ಬಾರಿ ವಿಜಯ್ ಹಜಾರೆ ಚಾಂಪಿಯನ್ ಶಿಪ್ ಗೆದ್ದ ದಾಖಲೆ ಬರೆಯಿತು.

 

error: Content is protected !!

Join the Group

Join WhatsApp Group